Site icon Vistara News

Republic Day Tableau: ಕರ್ತವ್ಯ ಪಥದಲ್ಲಿ ಸ್ತಬ್ಧಚಿತ್ರಗಳ ಕಲರವ; ಇಲ್ಲಿವೆ ವರ್ಣರಂಜಿತ ಫೋಟೋಗಳು

republic day tableau 2023 in photos
ಗುಜರಾತ್​ ರಾಜ್ಯವು ಕಚ್​​ನ ಸಾಂಪ್ರದಾಯಿಕ ಮನೆಗಳಾದ ’ಭೂಂಗಾ’ ಮತ್ತು ನವೀಕರಿಸಬಹುದಾದ ಇಂಧನದ ಥೀಮ್​ ಇಟ್ಟುಕೊಂಡು ಸ್ತಬ್ಧಚಿತ್ರ ಪ್ರದರ್ಶನ ಮಾಡಿದೆ. ಇಲ್ಲಿ ಭೂಂಗಾಗಳು ಎಂದರೆ ಒಂದೇ ಕೋಣೆಯ, ಗುಡಿಸಲು ಮಾದರಿಯ ಮನೆಗಳು. ಕಚ್​​​ನಲ್ಲಿ ಭೂಕಂಪ ಜಾಸ್ತಿಯಾಗಿರುವುದರಿಂದ ಅಲ್ಲಿ ಇಂಥ ಹಗುರ ಮನೆಗಳ ನಿರ್ಮಾಣ ಮಾಡಲಾಗುತ್ತದೆ. ಆ ಸಾಂಪ್ರದಾಯಿಕ ಮನೆಯನ್ನೇ ಸ್ತಬ್ಧಚಿತ್ರದಲ್ಲಿ ಪ್ರದರ್ಶಿಸಲಾಯಿತು.

ಉತ್ತರ ಪ್ರದೇಶ ರಾಜ್ಯವು, ಅಲ್ಲಿನ ಅಯೋಧ್ಯೆಯಲ್ಲಿ ಪ್ರತಿವರ್ಷ ಮೂರು ದಿನಗಳ ಕಾಲ ನಡೆಯುವ ಅದ್ಧೂರಿ ದೀಪೋತ್ಸವ ಬಿಂಬಿಸುವ ಸ್ತಬ್ಧಚಿತ್ರ ಪ್ರದರ್ಶನ ಮಾಡಿದೆ.

ತ್ರಿಪುರದಲ್ಲಿ ಮಹಿಳೆಯ ಸಹಭಾಗಿತ್ವದಲ್ಲಿ ಪ್ರವಾಸೋದ್ಯಮ ಉತ್ತೇಜನಗೊಳ್ಳುತ್ತಿರುವ ರೀತಿ ಮತ್ತು ಸಾವಯವ ಕೃಷಿಗೆ ಸಂಬಂಧಪಟ್ಟ ಸ್ತಬ್ಧಚಿತ್ರ ಪ್ರದರ್ಶನಗೊಂಡಿದೆ.

ಯುನೆಸ್ಕೋದ ಸಾಂಸ್ಕೃತಿಕ ಪಟ್ಟಿಗೆ ಸೇರಿದ, ತನ್ನ ನೆಲದ ಅದ್ಧೂರಿ ಸಾಂಸ್ಕೃತಿಕ ಉತ್ಸವವಾದ ದುರ್ಗಾಪೂಜೆ ಥೀಮ್​ ಇರುವ ಸ್ತಬ್ಧಚಿತ್ರವನ್ನು ಪಶ್ಚಿಮ ಬಂಗಾಳ ಪ್ರಸ್ತುತ ಪಡಿಸಿದೆ.

ಅನಂತ್​​ನಾಗ್​ ಜಿಲ್ಲೆಯಲ್ಲಿರುವ ಹಿಂದೂ ಪವಿತ್ರ ಯಾತ್ರಾ ಸ್ಥಳವಾದ ಅಮರನಾಥ್​​ದ ಶಿವಲಿಂಗ ಜಮ್ಮು-ಕಾಶ್ಮೀರದ ಈ ಬಾರಿಯ ಟ್ಯಾಬ್ಲೋ

ಅರುಣಾಚಲ ಪ್ರದೇಶವು 1962ರ ಥವಾಂಗ್ ಯುದ್ಧ, ರಾಜ್ಯದ ಸುಪ್ರಸಿದ್ಧ ಶಿಂಗ್ಫೋ ಹಬ್ಬ ಹಾಗೂ ಡೋನ್ಯಿ ಪೋಲೊ ವಿಮಾನ ನಿಲ್ದಾಣದ ಥೀಮ್​​ ಇಟ್ಟುಕೊಂಡು ಸ್ತಬ್ಧಚಿತ್ರ ಪ್ರದರ್ಶನ ಮಾಡಿದೆ.

ಕೇಂದ್ರಾಡಳಿತ ಪ್ರದೇಶ ಲಡಾಖ್​ ತನ್ನಲ್ಲಿನ ಪ್ರವಾಸೋದ್ಯಮ ಮತ್ತು ಸಂಯೋಜಿತ ಸಂಸ್ಕೃತಿಯನ್ನು ಬಿಂಬಿಸುವ ಸ್ತಬ್ಧಚಿತ್ರವನ್ನು ಪ್ರದರ್ಶಿಸಿದೆ.

ಬುಡಕಟ್ಟು ಜನಾಂಗದವರ ಹಕ್ಕುಗಳ ರಕ್ಷಣೆಗಾಗಿ ದಣಿವರಿಯದೆ ಹೋರಾಟ ನಡೆಸಿ, ಆ ಜನಾಂಗದ ಪಾಲಿಗೆ ಪೂಜನೀಯರಾದ ಬಿರ್ಸಾ ಮುಂಡಾ ಮತ್ತು ಬೈದ್ಯನಾಥ ದೇವಾಲಯದ ಸ್ತಬ್ಧಚಿತ್ರಗಳನ್ನು ಜಾರ್ಖಂಡ ರಾಜ್ಯ ಪ್ರದರ್ಶಿಸಿದೆ.

ಆಂಧ್ರಪ್ರದೇಶದ ಸ್ತಬ್ಧಚಿತ್ರ ಕೂಡ ವಿಭಿನ್ನವಾಗಿತ್ತು. ಮಕರ ಸಂಕ್ರಾಂತಿ ಸಂದರ್ಭದಲ್ಲಿ ರಾಜ್ಯದಲ್ಲಿ ಆಚರಿಸಲಾಗುವ ಅತಿ ದೊಡ್ಡ ಉತ್ಸವ ‘ಪ್ರಭಾಲಾ ತೀರ್ಥಂ’ನೇ ಥೀಮ್​ ಆಗಿಟ್ಟುಕೊಂಡು ಆ ರಾಜ್ಯ ಟ್ಯಾಬ್ಲೋ ಪ್ರದರ್ಶನ ಮಾಡಿದೆ.

ರಾಜ್ಯದಲ್ಲಿ ಬಹು ಪ್ರಸಿದ್ಧಿ ಪಡೆದಿರುವ ಸಾಡೆ ತೀನ್ ಶಕ್ತಿ ಪೀಠದ ಮಹತ್ವ ಹಾಗೂ ಸ್ತ್ರೀಶಕ್ತಿ ಮಹತ್ವವನ್ನ ಸಾರುವ ಟ್ಯಾಬ್ಲೋವನ್ನು ಮಹಾರಾಷ್ಟ್ರ ಪ್ರದರ್ಶಿಸಿದೆ.

ಹರಿಯಾಣ ರಾಜ್ಯವು ಭಗವಾನ್ ಶ್ರೀಕೃಷ್ಣ, ಮಹಾಭಾರತ ಕಾಲದಲ್ಲಿ ದ್ರೋಣಚಾರ್ಯರು ಅವರ ಶಿಷ್ಯರಿಗೆ ವಿದ್ಯೆ ಕಲಿಸಿದ ಸನ್ನಿವೇಶ ಮತ್ತು ಕುರುಕ್ಷೇತ್ರವನ್ನು ಬಿಂಬಿಸುವ ಸ್ತಬ್ಧಚಿತ್ರ ಪ್ರದರ್ಶನ ಮಾಡಿತು.

2023ನ್ನು ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷವನ್ನಾಗಿ ವಿಶ್ವ ಸಂಸ್ಥೆ ಘೋಷಿಸಿದ ಹಿನ್ನೆಲೆಯಲ್ಲಿ, ಭಾರತದ ಕೃಷಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಭಾರತೀಯ ಕೃಷಿ ಸಂಶೋಧನಾ ಮಂಡಳಿ, ಈ ಸಲದ ಗಣರಾಜ್ಯೋತ್ಸವದಲ್ಲಿ ಸ್ತಬ್ಧ ಚಿತ್ರದ ಮೂಲಕ ‘ಸಿರಿಧಾನ್ಯ’ದ ಮಹತ್ವ ಸಾರಿತು.

ಅಸ್ಸಾಂ ರಾಜ್ಯವು, ಅಹೋಮ್ ಜನರಲ್ ಲಚಿತ್ ಬೋರ್ಫುಕನ್ ಮತ್ತು ಕಾಮಾಕ್ಯ ದೇವಾಲಯದಂತಹ ಸಾಂಸ್ಕೃತಿಕ ಪ್ರತಿಮೆಗಳನ್ನು ಒಳಗೊಂಡ ಸ್ತಬ್ಧಚಿತ್ರ ಪ್ರದರ್ಶನ ಮಾಡಿತು.

Exit mobile version