Site icon Vistara News

ಜೈಲಲ್ಲಿ ತಲೆಸುತ್ತಿ ಬಿದ್ದ ಆಪ್​ ನಾಯಕ ಸತ್ಯೇಂದ್ರ ಜೈನ್​; ಸುಪ್ರೀಂಕೋರ್ಟ್​ನಿಂದ ಮಧ್ಯಂತರ ಜಾಮೀನು

Satyendar Jain Shifted to ICU and granted interim bail by Supreme Court

#image_title

ನವ ದೆಹಲಿ: ಹಣ ಅಕ್ರಮ ವರ್ಗಾವಣೆ ಪ್ರಕರಣದಡಿ ತಿಹಾರ್​ ಜೈಲು ಸೇರಿರುವ ದೆಹಲಿ ಮಾಜಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್​ (Satyendar Jain) ಅವರಿಗೆ ಸುಪ್ರೀಂಕೋರ್ಟ್​ (Supreme Court) ಆರು ವಾರಗಳ ಮಧ್ಯಂತರ ಜಾಮೀನು ನೀಡಿದೆ. ಅವರಿಗೆ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದು, ಚಿಕಿತ್ಸೆಗಾಗಿ ಈ ಜಾಮೀನು ಮಂಜೂರು ಮಾಡಿದೆ. 2022ರ ಮೇ ತಿಂಗಳಿಂದಲೂ ತಿಹಾರ್​ ಜೈಲಿನಲ್ಲಿ ಇರುವ ಸತ್ಯೇಂದ್ರ ಜೈನ್​ ಜಾಮೀನು ಅವರಧಿ ಜುಲೈ 11ರವರೆಗೆ ಇರಲಿದೆ. ‘ಯಾವುದೇ ಸಾಕ್ಷಿಗಳ ಮೇಲೆ ಪ್ರಭಾವ ಬೀರಬಾರದು, ಪುರಾವೆಗಳನ್ನು ನಾಶ ಮಾಡಬಾರದು, ತಿರುಚಬಾರದು. ದೆಹಲಿಯನ್ನು ಬಿಟ್ಟು ಬೇರೆಲ್ಲೂ ಹೋಗಬಾರದು’ ಎಂಬ ಷರತ್ತುಗಳನ್ನು ವಿಧಿಸಿ ಜಾಮೀನು ನೀಡಿರುವ ಸುಪ್ರೀಂಕೋರ್ಟ್​, ಜುಲೈ 10ರಂದು ಮತ್ತೊಮ್ಮೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ಹಾಗೇ, ಹೊಸದಾದ ವೈದ್ಯಕೀಯ ವರದಿಯನ್ನು ಸಲ್ಲಿಸಬೇಕು ಎಂದು ಸೂಚಿಸಿದೆ.

ಸತ್ಯೇಂದ್ರ ಜೈನ್​ ಅವರು ಮೇ 25ರಂದು ಮುಂಜಾನೆ 6ಗಂಟೆ ಹೊತ್ತಿಗೆ, ತಿಹಾರ್​ ಜೈಲಿನ ತಾವಿದ್ದ ಕೋಣೆಯ ಬಾತ್​ರೂಮಿನಲ್ಲಿ ತಲೆಸುತ್ತಿ ಬಿದ್ದಿದ್ದಾರೆ. ಎಚ್ಚರ ತಪ್ಪಿದ್ದ ಅವರನ್ನು ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಉಸಿರಾಟದಲ್ಲಿ ತೀವ್ರ ಏರುಪೇರಾಗಿದ್ದರಿಂದ ಬಳಿಕ ಲೋಕ ನಾಯಕ್ ಜೈ ಪ್ರಕಾಶ್​ ಆಸ್ಪತ್ರೆಗೆ ದಾಖಲಿಸಲಾಯಿತು. ಎಚ್ಚರವಾದಾಗ ಅವರಿಗೆ ಬೆನ್ನು, ಎಡಗಾಲು, ಎಡಗೈಯ್ಯಲ್ಲೆಲ್ಲ ವಿಪರೀತ ನೋವು ಇತ್ತು. ಆರೋಗ್ಯ ಕ್ಷೀಣವಾಯಿತು. ಹೀಗಾಗಿ ಐಸಿಯುವಿನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಅದರ ಬೆನ್ನಲ್ಲೇ ಸುಪ್ರೀಂಕೋರ್ಟ್​ ಮಧ್ಯಂತರ ಜಾಮೀನು ನೀಡಿದೆ. ಅಂದಹಾಗೇ ಇದಕ್ಕೂ ಮೊದಲು ಅವರಲ್ಲಿ ಹಲವು ಬಾರಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿತ್ತು.

ಇದನ್ನೂ ಓದಿ: Satyendra Jain | ಜೈಲಲ್ಲಿ ಮಸಾಜ್‌ ಬೆನ್ನಲ್ಲೇ ವಜಾಗೊಂಡ ಜೈಲಧಿಕಾರಿ ಜತೆ ಸತ್ಯೇಂದ್ರ ಜೈನ್‌ ಮಾತು, ಹೊಸ ವಿಡಿಯೊ ವೈರಲ್

ಸತ್ಯೇಂದ್ರ ಜೈನ್​ ವಿರುದ್ಧ 2017ರಲ್ಲಿ ಸಿಬಿಐ ಅಕ್ರಮ ಹಣ ವರ್ಗಾವಣೆ ಕೇಸ್​ ದಾಖಲಿಸಿ, ತನಿಖೆ ಕೈಗೊಂಡಿತ್ತು. ಬಳಿ ಜಾರಿ ನಿರ್ದೇಶನಾಲಯ (ಇ.ಡಿ.)ಕೂಡ ಪ್ರಕರಣ ದಾಖಲಿಸಿದೆ. 2022ರ ಏಪ್ರಿಲ್​​ ತಿಂಗಳಲ್ಲಿ ಸತ್ಯೇಂದ್ರ ಜೈನ್​ಗೆ ಸೇರಿದ ಮನೆ, ಕಚೇರಿಗಳ ಮೇಲೆ ಇಡಿ ದಾಳಿ ನಡೆಸಿತ್ತು. ಈ ವೇಳೆ ಅವರಿಗೆ ಸೇರಿದ 4.81 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಇಡಿ ಮುಟ್ಟುಗೋಲು ಹಾಕಿಕೊಂಡಿತ್ತು. 2015-2016ರ ವೇಳೆಯಲ್ಲಿ ಸತ್ಯೇಂದ್ರ ಜೈನ್​ ಅವರು ಸಚಿವರಾಗಿದ್ದಾಗ ತಮ್ಮ ಹುದ್ದೆ ದುರುಪಯೋಗಪಡಿಸಿಕೊಂಡು ಭ್ರಷ್ಟಾಚಾರ ಮಾಡಿದ್ದಾರೆ ಎಂದು ತನಿಖಾದಳಗಳು ಚಾರ್ಜ್​ಶೀಟ್​ನಲ್ಲಿ ಉಲ್ಲೇಖಿಸಿವೆ.

Exit mobile version