Site icon Vistara News

Vijay Mallya : ಪಲಾಯನಗೈದ ಆರ್ಥಿಕ ಅಪರಾಧಿ ಪಟ್ಟವನ್ನು ತೆಗೆಯುವಂತೆ ಮಲ್ಯ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಮ್​ ಕೋರ್ಟ್​

Vijay Mallya back on x platform to wish dewali

ನವ ದೆಹಲಿ: ತಮ್ಮನ್ನು ಪಲಾಯನಗೈದ ಆರ್ಥಿಕ ಅಪರಾಧಿ ಎಂದು ಮುಂಬಯಿ ವಿಶೇಷ ನ್ಯಾಯಾಲಯ ಘೋಷಿಸಿದ್ದನ್ನು ಪ್ರಶ್ನಿಸಿ ಉದ್ಯಮಿ ವಿಜಯ್​ ಮಲ್ಯ (Vijay Mallya) ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಮ್​ ಕೋರ್ಟ್​ ಶುಕ್ರವಾರ ವಜಾಗೊಳಿಸಿದೆ. ಈ ಪ್ರಕರಣ ವಿಚಾರಣೆಗೆ ಅರ್ಜಿದಾರರು ಆಸಕ್ತಿ ವಹಿಸುತ್ತಿಲ್ಲ ಎಂದು ನ್ಯಾಯಮೂರ್ತಿಗಳಾದ ಅಭಯ್​ ಎಸ್ ಓಕಾ ಹಾಗೂ ರಾಜೇಶ್​ ಬಿಂದಾಲ್​ ಅವರಿದ್ದ ಪೀಠ ಅಭಿಪ್ರಾಯಪಟ್ಟು ಅರ್ಜಿಯನ್ನು ವಜಾಗೊಳಿಸಿತು.

ಶುಕ್ರವಾರನ್ಯಾಯಾಲಯಕ್ಕೆ ಹಾಜರಾದ ವಿಜಯ್​ ಮಲ್ಯ ಅವರ ಕಾನೂನು ತಂಡ, ನಮ್ಮ ಕಕ್ಷಿದಾರ ಈ ಪ್ರಕರಣದ ಕುರಿತು ಸರಿಯಾಗಿ ಮಾಹಿತಿ ನೀಡುತ್ತಿಲ್ಲ ಹಾಗೂ ಸಂಪರ್ಕಿಸುತ್ತಿಲ್ಲ ಎಂದು ಹೇಳಿಕೆ ನೀಡಿತು. ಹೀಗಾಗಿ ಅರ್ಜಿದಾರರರು ಪ್ರಕರಣವನ್ನು ಮುಂದುವರಿಸಲು ಆಸಕ್ತಿ ತೋರುತ್ತಿಲ್ಲ. (non prosecution) ಎಂದು ನಿರ್ಧರಿಸಿದ ಸುಪ್ರೀಮ್​ಕೋರ್ಟ್​ ಅರ್ಜಿ ವಜಾಗೊಳಿಸಿತು.

ಇದನ್ನೂ ಓದಿ : Vijay Mallya | ಸೆಟ್ಟೇರಲಿದೆ ವಿಜಯ್‌ ಮಲ್ಯ ವಂಚನೆ ಕಥೆ ಫೈಲ್‌ ನಂ 323: ಉದ್ಯಮಿ ಪಾತ್ರಧಾರಿ ಯಾರು?

ಬ್ಯಾಂಕ್​ಗಳಿಂದ 9000 ಕೋಟಿ ರೂಪಾಯಿ ಸಾಲ ಪಡೆದು ಮರುಪಾವತಿ ಮಾಡದೇ ಪರಾರಿಯಾಗಿರುವ ವಿಜಯ್​ ಮಲ್ಯ ಬ್ರಿಟನ್​ನಲ್ಲಿ ನೆಲೆಸಿದ್ದಾರೆ. ಈ ಪ್ರಕರಣದ ವಿಚಾರಣೆ ನಡೆಸಿದ್ದ ಮುಂಬಯಿಯ ವಿಶೇಷ ನ್ಯಾಯಾಲಯ ವಿಜಯ್​ ಮಲ್ಯ ಪಲಾಯನಗೈದಿರುವ ಆರ್ಥಿಕ ಅಪರಾಧಿ ಎಂದು ಪ್ರಕಟಿಸಿತ್ತು. ಕೋರ್ಟ್​ ತೀರ್ಪಿನಿಂದಾಗಿ ಮಲ್ಯಗೆ ಸೇರಿರುವ ಆಸ್ತಿಗಳನ್ನು ಜಪ್ತಿ ಮಾಡುವ ಅವಕಾಶ ಸಾಲ ಕೊಟ್ಟಿರುವ ಸಂಸ್ಥೆಗಳಿಗೆ ದೊರಕಿತ್ತು. ಇದರ ವಿರುದ್ಧ ವಿಜಯ್ ಮಲ್ಯ ಅವರ ಕಾನೂನು ತಂಡ ಸುಪ್ರೀಮ್​ ಕೋರ್ಟ್​ ಮೆಟ್ಟಿಲೇರಿದ್ದರು.

Exit mobile version