Site icon Vistara News

Taj Mahal | ಹಾಗೇ ಉಳಿಯಲಿದೆ ತಾಜ್​ಮಹಲ್​ 22 ಕೋಣೆಗಳ ರಹಸ್ಯ; ಅರ್ಜಿ ತಿರಸ್ಕರಿಸಿದ ಸುಪ್ರೀಂಕೋರ್ಟ್​

visitors are not allowed to Taj Mahal at night during Ramzan month

ನವದೆಹಲಿ: ತಾಜ್​ಮಹಲ್ ಮೂಲದಲ್ಲಿ ಒಂದು ಶಿವಾಲಯವಾಗಿತ್ತು. ಬಳಿಕ ಮೊಘಲ್ ದೊರೆ ಷಹಜಹಾನ್ ಅದನ್ನು ತನ್ನ ಪತ್ನಿ ಮುಮ್ತಾಜ್​ ಸಮಾಧಿಯಾಗಿ ಪರಿವರ್ತಿಸಿದ. ಹೀಗಾಗಿ ಸತ್ಯ ಶೋಧನೆ ಮಾಡಬೇಕು. ತಾಜ್​ಮಹಲ್​​ನಲ್ಲಿ 22 ಮುಚ್ಚಿದ ಕೋಣೆಗಳು ಇದ್ದು, ಅವುಗಳ ಬಾಗಿಲು ತೆಗೆಸಬೇಕು. ಅದರಲ್ಲಿ ಹಿಂದು ದೇವರ ವಿಗ್ರಹಗಳ ಇವೆಯಾ ಪರಿಶೀಲನೆ ನಡೆಸಬೇಕು. ಈ ಮೂಲಕ ಸತ್ಯ ಹೊರಗೆ ಬರುವಂತಾಗಬೇಕು ಎಂದು ಸುಪ್ರೀಂಕೋರ್ಟ್​ಗೆ ಸಲ್ಲಿಕೆಯಾಗಿದ್ದ ಅರ್ಜಿ ತಿರಸ್ಕೃತಗೊಂಡಿದೆ. ಸುಪ್ರಿಂಕೋರ್ಟ್​ ನ್ಯಾಯಮೂರ್ತಿಗಳಾದ ಎಂ.ಆರ್​.ಶಾ ಮತ್ತು ಎಂ.ಎಂ.ಸುಂದರೇಶ್​ ನೇತೃತ್ವದ ಪೀಠ ಅರ್ಜಿಯನ್ನು ತಿರಸ್ಕಾರ ಮಾಡಿದೆ. ಈ ಮೂಲಕ ಅಲಹಾಬಾದ್ ಹೈಕೋರ್ಟ್​ ನೀಡಿದ ತೀರ್ಪಿನ ವಿಷಯದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳಿದೆ. ಹಾಗೇ, ಇದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲ, ಪ್ರಚಾರಕ್ಕಾಗಿ ಸಲ್ಲಿಸಿದ ಅರ್ಜಿ ಎಂದೂ ಟೀಕಿಸಿದೆ.

ತಾಜ್​ಮಹಲ್​ ವಿಚಾರದಲ್ಲಿ ಹೆಚ್ಚಿನ ತನಿಖೆ ಆಗಬೇಕು ಎಂದು ಬಿಜೆಪಿ ಅಯೋಧ್ಯಾ ಘಟಕದ ಉಸ್ತುವಾರಿ ರಜನೀಶ್​ ಸಿಂಗ್​ ಮೇ 12ರಂದು ಅಲಹಾಬಾದ್​ ಹೈಕೋರ್ಟ್​​ಗೆ ಅರ್ಜಿ ಸಲ್ಲಿಸಿದ್ದರು. ಆದರೆ ತಾಜ್​ಮಹಲ್​​ನ್ನು ಅತಿಕ್ರಮಣ ಮಾಡಲಾಗಿದೆ ಎಂಬುದನ್ನು ಕಾನೂನು ಮತ್ತು ಸಂವಿಧಾನ ಬದ್ಧವಾಗಿ ಸಾಕ್ಷೀಕರಿಸಲು ವಿಫಲರಾಗಿದ್ದರು. ಹೀಗಾಗಿ ತಾಜ್​​ಮಹಲ್ ಶೋಧಕ್ಕೆ ಅವಕಾಶ ಕಲ್ಪಿಸಲು ಸಾಧ್ಯವಿಲ್ಲ ಎಂದು ಅಲಹಾಬಾದ್​ ಹೈಕೋರ್ಟ್​ ತೀರ್ಪು ನೀಡಿತ್ತು. ಈ ಹೈಕೋರ್ಟ್ ತೀರ್ಪಿನ ವಿರುದ್ಧ ರಜನೀಶ್​ ಸುಪ್ರೀಂಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿದ್ದರು. ಆದರೆ ಸುಪ್ರೀಂಕೋರ್ಟ್​ ‘ಇದೊಂದು ಪ್ರಚಾರಾಸಕ್ತಿ ಅರ್ಜಿ ಎನ್ನಿಸುತ್ತಿದೆ. ಈಗಾಗಲೇ ಈ ಬಗ್ಗೆ ಅಲಹಾಬಾದ್​ ಹೈಕೋರ್ಟ್ ತೀರ್ಪು ನೀಡಿದೆ. ಹೈಕೋರ್ಟ್​ ಆದೇಶದಲ್ಲಿ ಯಾವುದೇ ತಪ್ಪು ಇಲ್ಲ’ ಎಂದು ಹೇಳಿದೆ.

ಮೊಘಲ್​ ರಾಜ​​ ಷಜಹಾನ್ ಆಳ್ವಿಕೆಯಲ್ಲಿ, ತಾಜ್​ಮಹಲ್​​ನ್ನು 1632ರಿಂದ ಕಟ್ಟಲು ಪ್ರಾರಂಭಿಸಿ 1653ರಲ್ಲಿ ಪೂರ್ಣಗೊಳಿಸಲಾಯಿತು ಎಂದು ಹೇಳಲಾಗುತ್ತದೆ. ಆದರೆ ಭಾರತದಲ್ಲಿ ಮೊಘಲರ ಆಳ್ವಿಕೆ ಪ್ರಾರಂಭಕ್ಕೂ ಮೊದಲೇ ಇಲ್ಲಿ ಈ ಸ್ಮಾರಕ ಇತ್ತು. ಅದು ಶಿವನ ದೇವಸ್ಥಾನ ಆಗಿತ್ತು ಎಂದು ಕೆಲವು ಹಿಂದು ಸಂಘಟನೆಗಳು, ಇತಿಹಾಸ ತಜ್ಞರು ಹೇಳುತ್ತಿದ್ದಾರೆ. ಅದರಲ್ಲೂ ಆ 22 ಕೋಣೆಗಳು ಮೊದಲು ತೆರೆದೇ ಇದ್ದವು. ಕಳೆದ 45 ವರ್ಷಗಳಿಂದಲ ಅಲ್ಲಿಗೆ ಯಾರಿಗೂ ಪ್ರವೇಶ ಕೊಡುತ್ತಿಲ್ಲ ಎಂದು ರಜನೀಶ್​ ತಮ್ಮ ಅರ್ಜಿಯಲ್ಲಿ ಉಲ್ಲೇಖ ಮಾಡಿದ್ದರು.

ಇದನ್ನೂ ಓದಿ: ಸದ್ಯ ಬಗೆಹರಿಯಲ್ಲ TAJ MAHAL ಮುಚ್ಚಿದ ಕೋಣೆಗಳ ರಹಸ್ಯ, ಅರ್ಜಿ ವಜಾಗೊಳಿಸಿದ ಹೈಕೋರ್ಟ್‌

Exit mobile version