Site icon Vistara News

K Chandrasekhar Rao: ತೆಲಂಗಾಣ ಸಿಎಂ ಕೆಸಿಆರ್‌ ಆಸ್ಪತ್ರೆಗೆ ದಾಖಲು

brs poll manifesto, Free insurance, rss 400 lpg cylinder and many more scheme

ಹೈದರಾಬಾದ್:‌ ಅನಾರೋಗ್ಯದ ಹಿನ್ನೆಲೆಯಲ್ಲಿ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ ರಾವ್‌ (K Chandrasekhar Rao) ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಭಾನುವಾರ ಬೆಳಗ್ಗೆ ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಗಚಿಬೌಲಿಯಲ್ಲಿರುವ ಏಷ್ಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಗ್ಯಾಸ್ಟ್ರೋಎಂಟರಾಲಜಿ (AIG) ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆಸ್ಪತ್ರೆ ವೈದ್ಯರು ಮಾಹಿತಿ ನೀಡಿದ್ದಾರೆ.

“ಚಂದ್ರಶೇಖರ್‌ ರಾವ್‌ ಅವರಿಗೆ ಹೊಟ್ಟೆನೋವು ಕಾಣಿಸಿಕೊಂಡಿದೆ. ಅವರಿಗೆ ಡಾ.ನಾಗೇಶ್ವರ ರೆಡ್ಡಿ ಅವರು ಚಿಕಿತ್ಸೆ ನೀಡಿದ್ದಾರೆ. ಸಿಟಿ ಸ್ಕ್ಯಾನಿಂಗ್‌ ಹಾಗೂ ಎಂಡೋಸ್ಕೋಪಿ ಬಳಿಕ ಅವರ ಹೊಟ್ಟೆಯಲ್ಲಿ ಚಿಕ್ಕ ಹುಣ್ಣು ಕಾಣಿಸಿಕೊಂಡಿದೆ. ಹಾಗಾಗಿ, ಚಿಕಿತ್ಸೆ ಮುಂದುವರಿದಿದೆ. ಅವರಿಗೆ ಯಾವುದೇ ಅಪಾಯವಿಲ್ಲ” ಎಂದು ಆಸ್ಪತ್ರೆ ಬಲೆಟಿನ್‌ ಬಿಡುಗಡೆ ಮಾಡಿದೆ.

ಇದನ್ನೂ ಓದಿ: Delhi Excise Policy Case: ದೆಹಲಿ ಅಬಕಾರಿ ಕೇಸ್‌, ತೆಲಂಗಾಣ ಸಿಎಂ ಕೆಸಿಆರ್‌ ಪುತ್ರಿ ಕವಿತಾಗೆ ಸಮನ್ಸ್‌

Exit mobile version