Site icon Vistara News

The Kerala Story: ದಿ ಕೇರಳ ಸ್ಟೋರಿ ಚಿತ್ರತಂಡದ ಸದಸ್ಯನಿಗೆ ಜೀವ ಬೆದರಿಕೆ; ಭದ್ರತೆ ಒದಗಿಸಿದ ಪೊಲೀಸ್​

The Kerala Story crew member got threat Police Provided Security

#image_title

ದಿ ಕೇರಳ ಸ್ಟೋರಿ (The Kerala Story) ಸಿನಿಮಾ ಮೇ 5ರಂದು ಬಿಡುಗಡೆಯಾಗಿ ದೇಶಾದ್ಯಂತ ಥಿಯೇಟರ್​​ಗಳು, ಮಲ್ಟಿಪ್ಲೆಕ್ಸ್​​ಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಕೇರಳದಿಂದ ಸಾವಿರಾರು ಹಿಂದು/ಕ್ರಿಶ್ಚಿಯನ್​ ಯುವತಿಯರನ್ನು ಅಫ್ಘಾನಿಸ್ತಾನ, ಸಿರಿಯಾದಂಥ ದೇಶಗಳಿಗೆ ಕರೆದುಕೊಂಡು ಹೋಗಿ, ಇಸ್ಲಾಮ್​ಗೆ ಮತಾಂತರ ಮಾಡಿ, ಐಸಿಸ್​ ಭಯೋತ್ಪಾದನಾ ಸಂಘಟನೆಗಳಿಗೆ ಸೇರಿಸುವ, ಲವ್​ ಜಿಹಾದ್​ಗೆ ಅವರನ್ನು ಒಳಪಡಿಸುವ ಕಥೆಯನ್ನು ಒಳಗೊಂಡ ದಿ ಕೇರಳ ಸ್ಟೋರಿ, ಟ್ರೇಲರ್ ಬಿಡುಗಡೆಯಾದಾಗಿನಿಂದಲೂ ವಿವಾದ ಸೃಷ್ಟಿಸಿದೆ. ಪಶ್ಚಿಮ ಬಂಗಾಳ ರಾಜ್ಯದಲ್ಲಿ ಸಿನಿಮಾ ಪ್ರದರ್ಶನವನ್ನೇ ನಿಷೇಧಿಸಲಾಗಿದೆ. ತಮಿಳುನಾಡಿನ ಹಲವು ಮಲ್ಟಿಪ್ಲೆಕ್ಸ್​​ಗಳಲ್ಲಿ ಬ್ಯಾನ್​ ಮಾಡಲಾಗಿದೆ. ಇಷ್ಟರ ಮಧ್ಯೆ ಈಗ ದಿ ಕೇರಳ ಸ್ಟೋರಿ ಚಿತ್ರತಂಡದಲ್ಲಿ ಇರುವ ಒಬ್ಬರಿಗೆ ಜೀವ ಬೆದರಿಕೆ ಬಂದಿದೆ ಎಂದು ಅದರ ನಿರ್ದೇಶಕ ಸುದೀಪ್ತೋ ಸೇನ್​ ತಿಳಿಸಿದ್ದಾರೆ.

‘ನಮ್ಮ ದಿ ಕೇರಳ ಸ್ಟೋರಿ ಚಿತ್ರ ತಂಡದ ಸದಸ್ಯರೊಬ್ಬರಿಗೆ ಸಂದೇಶ ಕಳಿಸಲಾಗಿದೆ. ನೀವು ದಿ ಕೇರಳ ಸ್ಟೋರಿಯಲ್ಲಿ ಒಳ್ಳೆಯದನ್ನು ತೋರಿಸಿಲ್ಲ. ಮನೆಯಿಂದ ಒಬ್ಬರೇ ಹೊರಗೆ ಬರಬೇಡಿ, ನಾವು ನಿಮ್ಮನ್ನು ಬಿಡುವುದಿಲ್ಲ’ ಎಂದು ಅಪರಿಚಿತ ನಂಬರ್​ನಿಂದ ಮೆಸೇಜ್ ಬಂದಿದೆ ಎಂದು ಸುದಿಪ್ತೋ ಸೇನ್​ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸುದೀಪ್ತೋ ಸೇನ್​ ಅವರು ಯಾವುದೇ ಲಿಖಿತ ದೂರು ಕೊಡದ ಕಾರಣ ಪೊಲೀಸರು ಕೂಡ ಎಫ್​ಐಆರ್ ದಾಖಲಿಸಿಲ್ಲ. ಆದರೆ ಬೆದರಿಕೆ ಸಂದೇಶ ಬಂದಿರುವ ಸದಸ್ಯನಿಗೆ ಭದ್ರತೆಯನ್ನು ಒದಗಿಸಿದ್ದಾರೆ.

ದಿ ಕೇರಳ ಸ್ಟೋರಿ ಸಿನಿಮಾದ ಟ್ರೇಲರ್​ ಏಪ್ರಿಲ್​​ನಲ್ಲಿ ಬಿಡುಗಡೆಯಾಗಿತ್ತು. ಕೇರಳದ 32 ಸಾವಿರ ಯುವತಿಯರನ್ನು ಲವ್​ ಜಿಹಾದ್​ಗೆ ಒಳಪಡಿಸಿ, ಐಸಿಸ್​ಗೆ ಸೇರಿಸಲಾಗಿದೆ ಎಂದು ಅದರಲ್ಲಿ ಪ್ರತಿಪಾದಿಸಲಾಗಿತ್ತು. ಇದು ನೈಜ ಕತೆ ಎಂದು ಚಿತ್ರತಂಡ ಹೇಳಿಕೊಂಡಿದ್ದು ವಿವಾದ ಸೃಷ್ಟಿಸಿತ್ತು. ಸಿನಿಮಾದಲ್ಲಿ ಅದಾ ಶರ್ಮಾ, ಯೋಗಿತಾ ಬಿಹಾನಿ, ಸಿದ್ಧಿ ಇದ್ನಾನಿ ಮತ್ತು ಸೋನಿಯಾ ಬಾಲಾನಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: The Kerala Story: ʻದಿ ಕೇರಳ ಸ್ಟೋರಿʼ ಮೂರನೇ ದಿನದ ಗಳಿಕೆ ಏನು?

ಸಿನಿಮಾವನ್ನು ವಿಫುಲ್​ ಅಮೃತ್​​ಲಾಲ್​ ಶಾ ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾವನ್ನು ಹಲವು ಸ್ವರೂಪದ ಅಧ್ಯಯನಗಳ ನಂತರ ನಿರ್ಮಾಣ ಮಾಡಿದ್ದಾಗಿ ಹೇಳಿಕೊಂಡಿರುವ ಅವರು ಪಶ್ಚಿಮ ಬಂಗಾಳದಲ್ಲಿ ಸಿನಿಮಾ ಬ್ಯಾನ್​ ಆಗಿದ್ದರ ಬಗ್ಗೆ ಪ್ರತಿಕ್ರಿಯೆ ನೀಡಿ ‘ಈ ಬಗ್ಗೆ ನಾವು ಕಾನೂನು ಮಾರ್ಗ ಹುಡುಕಿಕೊಳ್ಳುತ್ತೇವೆ. ನಿಷೇಧದ ವಿರುದ್ಧ ಏನು ಮಾಡಬಹುದು ಎಂದು, ಕಾನೂನು ತಜ್ಞರಿಂದ ಸಲಹೆ ಪಡೆದು ಮುಂದುವರಿಯುತ್ತೇವೆ’ ಎಂದಿದ್ದಾರೆ.

Exit mobile version