Site icon Vistara News

ಕೈದಿಗಳ ಆಧಾರ್​ ದೃಢೀಕರಣ ಅಧಿಕಾರವನ್ನು ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಿಗೇ ಹಸ್ತಾಂತರ ಮಾಡಿದ ಕೇಂದ್ರ ಗೃಹ ಇಲಾಖೆ

Union Home Ministry Allows State to Aadhaar authentication of prison inmates

#image_title

ನವ ದೆಹಲಿ: ಜೈಲಿನಲ್ಲಿರುವ ಕೈದಿಗಳಿಗೆ ಆಧಾರ್ ದೃಢೀಕರಣ ಮಾಡುವ (Aadhaar authentication) ಅಧಿಕಾರವನ್ನು ಕೇಂದ್ರ ಸರ್ಕಾರದ ಗೃಹ ಇಲಾಖೆ, ರಾಜ್ಯ ಸರ್ಕಾರಗಳಿಗೆ ನೀಡಿದೆ. ಕೈದಿಗಳಿಗೆ ಆರೋಗ್ಯ, ಕೌಶಲ, ವೃತ್ತಿಪರ ತರಬೇತಿ, ಕಾನೂನು ನೆರವು, ಸಂಬಂಧಿಕರೊಂದಿಗೆ ಮಾತುಕತೆ ಮತ್ತು ಇತ್ಯಾದಿ ಸೇವೆ-ಅನುಕೂಲತೆಗಳನ್ನು ನೀಡುವ ಸಲುವಾಗಿ ಈ ಆಧಾರ್​ ದೃಢೀಕರಣ ಮಾಡಬೇಕು ಎಂದು ಗೃಹ ಇಲಾಖೆ ಹೇಳಿದೆ. ಹಾಗಂತ ಇದು ಕಡ್ಡಾಯವಲ್ಲ. ಕೈದಿಗಳು ಸ್ವಯಂ ಪ್ರೇರಿತರಾಗಿ ಈ ಆಧಾರ್​ ದೃಢೀಕರಣಕ್ಕೆ ಒಳಪಡಬಹುದು (Aadhaar authentication of prison inmates) ಎಂದು ಹೇಳಲಾಗಿದೆ.

ಈ ಹಿಂದೆ ಕೈದಿಗಳ ಆಧಾರ್​ ದೃಢೀಕರಣ ಅಧಿಕಾರ ಕೇಂದ್ರ ಗೃಹ ಇಲಾಖೆ ಕೈಯಲ್ಲಿ ಇತ್ತು. ಉತ್ತಮ ಆಡಳಿತಕ್ಕಾಗಿ (ಸಾಮಾಜಿಕ ಕಲ್ಯಾಣ, ನಾವೀನ್ಯತೆ, ಜ್ಞಾನ) ಆಧಾರ್​ ದೃಢೀಕರಣ ನಿಯಮಗಳು 2020 ಮತ್ತು ಆಧಾರ್​ (ಹಣಕಾಸು ಮತ್ತು ಇತರ ಸಬ್ಸಿಡಿ, ಅನುಕೂಲತೆಗಳು ಮತ್ತು ಸೇವೆಗಳ ಉದ್ದೇಶಿತ ಬಟವಾಡೆ) ಕಾಯ್ದೆ 2016ರಡಿಯಲ್ಲಿ ಈ ಅಧಿಕಾರವನ್ನು ಕೇಂದ್ರ ಸರ್ಕಾರ ತನ್ನ ಗೃಹಸಚಿವಾಲಯಕ್ಕೆ ನೀಡಿತ್ತು. ಈಗ ಗೃಹ ಇಲಾಖೆ ಕೈದಿಗಳ ಆಧಾರ್​ ದೃಢೀಕರಣ ಅಧಿಕಾರವನ್ನು ಆಯಾಯಾ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಿಗೇ ವಹಿಸಿಕೊಟ್ಟಿದೆ. ‘Yes’ /‘No’ ಉತ್ತರವನ್ನು ನೀಡುವ ಸ್ವರೂಪದ ಪ್ರಶ್ನೆಗಳ ಮೂಲಕ ಕೈದಿಗಳ ಆಧಾರ್ ದೃಢೀಕರಿಸಬೇಕು ಎಂದು ಹೇಳಿದೆ.

ಇದನ್ನೂ ಓದಿ: Aadhaar : ಆಧಾರ್‌ ದೃಢೀಕರಣಕ್ಕೆ ಮುನ್ನ ವ್ಯಕ್ತಿಯ ಒಪ್ಪಿಗೆ ಪಡೆಯಲು ಸೂಚನೆ

ಈ ಬಗ್ಗೆ ಸೋಮವಾರ ಗೃಹ ಇಲಾಖೆ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಆಯಾ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಜೈಲು ಆಡಳಿತಗಳು ಜವಾಬ್ದಾರಿಯಿಂದ ಈ ಕಾರ್ಯ ನಿರ್ವಹಿಸಬೇಕು. ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾದ ಎಲ್ಲ ನಿಯಮಗಳನ್ನೂ ಪಾಲಿಸಬೇಕು ಎಂದು ತಿಳಿಸಿದೆ. ಕೈದಿಗಳು ತಮ್ಮನ್ನು ತಾವು ಇನ್ನಷ್ಟು ಸುಧಾರಣೆಗೊಳಿಸಿಕೊಂಡು, ಅರಿವು ಮೂಡಿಸಿಕೊಳ್ಳಲು ಅಗತ್ಯವಿರುವ ಸೇವೆ ಪಡೆದುಕೊಳ್ಳಲು ಈ ಆಧಾರ್ ದೃಢೀಕರಣ ಅತ್ಯಂತ ಅಗತ್ಯ ಎಂದು ಹೇಳಿದೆ.

Exit mobile version