Site icon Vistara News

Vande Bharat Express | ವಂದೇ ಭಾರತ್​ ಎಕ್ಸ್​ಪ್ರೆಸ್​ ರೈಲು ಮತ್ತೆ ಅಪಘಾತ; ಹಸು, ಎಮ್ಮೆ ಆಯ್ತು, ಈ ಸಲ ಗೂಳಿಗೆ ಡಿಕ್ಕಿ

Vande Bharat Express Hits to Bull in Mumbai

ಮುಂಬಯಿ: ಅದೇನೋ ವಂದೇ ಭಾರತ್​ ಎಕ್ಸ್​ಪ್ರೆಸ್​ ರೈಲಿಗೆ ಹಿಡಿದ ಗ್ರಹಚಾರ ಬಿಡುವಂತೆ ಕಾಣುತ್ತಿಲ್ಲ. ಎಮ್ಮೆ, ಹಸು ಆಯ್ತು, ಈಗ ಮುಂಬಯಿ ಸೆಂಟ್ರಲ್​​ನಿಂದ ಗುಜರಾತ್​​ನ ಗಾಂಧಿನಗರಕ್ಕೆ ಹೊರಟಿದ್ದ ವಂದೇ ಭಾರತ್​ ಎಕ್ಸ್​ಪ್ರೆಸ್​ ರೈಲಿಗೆ ಗೂಳಿ ಅಡ್ಡಬಂದಿದೆ. ಆ ಗೂಳಿಗೆ ಡಿಕ್ಕಿ ಹೊಡೆದ ವಂದೇ ಭಾರತ್ ಎಕ್ಸ್​ಪ್ರೆಸ್ ರೈಲಿನ ಮುಂಭಾಕ್ಕೆ ಹಾನಿಯಾಗಿದೆ. ಇಂದು ಸಂಜೆಯೊಳಗೆ ಅದು ದುರಸ್ತಿಯಾಗುವ ಸಾಧ್ಯತೆ ಇದೆ.

ಇಂದು (ಅ.29) ಬೆಳಗ್ಗೆ 8.17ರ ಹೊತ್ತಿಗೆ ಮುಂಬಯಿಯ ಅತುಲ್​ ಬಳಿ ಘಟನೆ ನಡೆದಿದ್ದು, ಇದರಿಂದಾಗಿ ಸುಮಾರು 15 ನಿಮಿಷ ಅಲ್ಲಿಯೇ ರೈಲು ನಿಂತಿತ್ತು. ಇನ್ನು ಟ್ರೇನ್​​ನ ಮುಂಭಾಗ ಬಿಟ್ಟರೆ ಇನ್ನೇನೂ ಹಾನಿಯಾಗಿಲ್ಲ ಎಂದು ಪಶ್ಚಿಮ ರೈಲ್ವೆ ಮುಖ್ಯ ಪಿಆರ್​ಒ ಸುಮಿತ್​ ಠಾಕೂರ್​ ತಿಳಿಸಿದ್ದಾರೆ. ಈ ರೈಲು ಅಕ್ಟೋಬರ್​ 6ರಂದು ಎಮ್ಮೆಗಳಿಗೆ ಡಿಕ್ಕಿ ಹೊಡೆದಿತ್ತು, ಹಾಗೇ ಮರುದಿನ ಹಸುವೊಂದಕ್ಕೆ ಡಿಕ್ಕಿಯಾಗಿತ್ತು. ಅದರ ಬೆನ್ನಲ್ಲೇ ಈಗ ಗೂಳಿಗೆ ಡಿಕ್ಕಿಯಾಗಿದೆ. ಅಂದಹಾಗೇ, ಈ ಮುಂಬಯಿ-ಗುಜರಾತ್​ ರೈಲಿಗೆ ಇತ್ತೀಚೆಗೆಷ್ಟೇ ಪ್ರಧಾನಿ ಮೋದಿ ಚಾಲನೆ ಕೊಟ್ಟಿದ್ದಾರೆ. ಇದು ದೇಶದ ಮೂರನೇ ವಂದೇ ಭಾರತ್ ಟ್ರೇನ್​ ಆಗಿದೆ.

ಇದನ್ನೂ ಓದಿ: Modi programme| ಚೆನ್ನೈ- ಮೈಸೂರು ವಂದೇ ಭಾರತ್‌ ಎಕ್ಸ್‌ಪ್ರೆಸ್‌ಗೆ ನ. 11ರಂದು ಬೆಂಗಳೂರಿಂದ ಚಾಲನೆ

Exit mobile version