Site icon Vistara News

Vice Presidential Poll | ಉಪರಾಷ್ಟ್ರಪತಿ ಚುನಾವಣೆ ಮತದಾನ ಮುಕ್ತಾಯ; ಎಣಿಕೆ ಪ್ರಾರಂಭ

Vice President

ನವ ದೆಹಲಿ: ಉಪರಾಷ್ಟ್ರಪತಿ ಚುನಾವಣೆಯ ಮತದಾನ ಮುಕ್ತಾಯವಾಗಿದೆ. ಸಂಜೆ ಆರು ಗಂಟೆಯಿಂದ ಮತ ಎಣಿಕೆ ಪ್ರಾರಂಭಗೊಂಡಿದೆ. ಲೋಕಸಭೆ ಮತ್ತು ರಾಜ್ಯಸಭೆಯಿಂದ ಒಟ್ಟು 780 ಸಂಸದರು ಇಂದು ಮತಹಾಕಬೇಕಿತ್ತು. ಆದರೆ 725 ಸಂಸದರು ಮಾತ್ರ ಮತ ಹಾಕಿದ್ದಾರೆ. ತೃಣಮೂಲ ಕಾಂಗ್ರೆಸ್​​ನ 39 ಸಂಸದರಲ್ಲಿ, 37ಸಂಸದರು ಮತದಾನದ ದೂರವೇ ಉಳಿದಿದ್ದಾರೆ. ಆದರೆ ಟಿಎಂಸಿ ಸಂಸದರಾದ ಸಿಸಿರ್ ಅಧಿಕಾರಿ ಮತ್ತು ದಿಬ್ಯೇಂದು ಅಧಿಕಾರಿ ತಮ್ಮ ಪಕ್ಷದ ನಿರ್ಧಾರದ ಹೊರತಾಗಿಯೂ ಮತಚಲಾವಣೆ ಮಾಡಿದ್ದಾರೆ ಎನ್ನಲಾಗಿದೆ. ಇನ್ನು ಬಿಜೆಪಿಯ ಸನ್ನಿ ಡಿಯೋಲ್​ ಮತ್ತು ಸಂಜಯ್​ ಧೋತ್ರೆ ಅನಾರೋಗ್ಯದಿಂದ ವೋಟಿಂಗ್​ನಲ್ಲಿ ಪಾಲ್ಗೊಳ್ಳಲಿಲ್ಲ. ಉಪರಾಷ್ಟ್ರಪತಿ ಚುನಾವಣೆಯಲ್ಲಿ ಎನ್​ಡಿಎ ಒಕ್ಕೂಟದ ಅಭ್ಯರ್ಥಿ ಜಗದೀಪ್​ ಧನಕರ್​ ಮತ್ತು ಪ್ರತಿಪಕ್ಷಗಳ ಒಕ್ಕೂಟದ ಅಭ್ಯರ್ಥಿ ಮಾರ್ಗರೆಟ್ ಆಳ್ವಾ. ಜಗದೀಪ್​ ಧನಕರ್​ ಗೆಲುವು ನಿಶ್ಚಿತವಾಗಿದೆ.

ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಇದೆ. ಹೀಗಾಗಿ ಜಗದೀಪ್​ ಧನಕರ್​ ಗೆಲ್ಲುವ ಭರವಸೆ ನಿಚ್ಛಳವಾಗಿದ್ದರಿಂದ ಬಿಜೆಪಿ ಪಾಳಯದಲ್ಲಿ ಸಂಭ್ರಮ ಈಗಾಗಲೇ ಶುರುವಾಗಿದೆ. ಇನ್ನೆರಡು ಮೂರು ತಾಸುಗಳಲ್ಲಿ ಫಲಿತಾಂಶ ಹೊರಬೀಳಲಿದೆ. ರಿಸಲ್ಟ್ ಘೋಷಣೆಯಾದ ನಂತರ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್​ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಜಗದೀಪ್​ ಧನಕರ್​ ಅವರನ್ನು ಭೇಟಿಯಾಗಲಿದ್ದಾರೆ ಎಂದು ಹೇಳಲಾಗಿದೆ. ಈಗಿರುವ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅಧಿಕಾರ ಅವಧಿ ಆಗಸ್ಟ್​ 10ಕ್ಕೆ ಮುಕ್ತಾಯಗೊಳ್ಳಲಿದ್ದು, ನೂತನ ಉಪರಾಷ್ಟ್ರಪತಿ ಆಗಸ್ಟ್​ 11ಕ್ಕೆ ಪ್ರಮಾಣ ವಚನ ಸ್ವೀಕಾರ ಮಾಡುವರು.

ಇದನ್ನೂ ಓದಿ: ಇಂದು ಉಪರಾಷ್ಟ್ರಪತಿ ಚುನಾವಣೆ, ಸಂಖ್ಯಾಬಲ ಧನಕರ್‌ ಕಡೆಗೆ

Exit mobile version