Site icon Vistara News

ಆಂಧ್ರಪ್ರದೇಶದ ಹೊಸ ರಾಜಧಾನಿ ವಿಶಾಖಪಟ್ಟಣಂ; ಮುಖ್ಯಮಂತ್ರಿ ಜಗನ್ ಮೋಹನ್​​ ರೆಡ್ಡಿ ಘೋಷಣೆ

Andhra assembly proposes Boya, Valmiki in ST and Dalit Christians in SC lists

ಆಂಧ್ರಪ್ರದೇಶದ ಹೊಸ ರಾಜಧಾನಿ ವಿಶಾಖಪಟ್ಟಣಂ (Visakhapatnam) ಆಗಲಿದೆ ಎಂದು ಇಂದು ಮುಖ್ಯಮಂತ್ರಿ ಜಗನ್​ ರೆಡ್ಡಿ ಅವರು ಇಂದು ಘೋಷಿಸಿದ್ದಾರೆ. ದೆಹಲಿಯಲ್ಲಿ ನಡೆದ ಅಂತರಾಷ್ಟ್ರೀಯ ರಾಜತಾಂತ್ರಿಕ ಒಕ್ಕೂಟದ ಸಭೆಯಲ್ಲಿ ಈ ಮಹತ್ವದ ವಿಷಯವನ್ನು ಪ್ರಕಟಿಸಿದ್ದಾರೆ. ಹಾಗೇ, ಮುಂದಿನ ತಿಂಗಳು ತಾವು ವಿಶಾಖಪಟ್ಟಣಕ್ಕೆ ಶಿಫ್ಟ್​ ಆಗುವುದಾಗಿ ಅಂದರೆ ವಾಸಸ್ಥಾನವನ್ನು ವಿಶಾಖಪಟ್ಟಣಕ್ಕೆ ಸ್ಥಳಾಂತರ ಮಾಡಿಕೊಳ್ಳುವುದಾಗಿ ಜಗನ್​ ರೆಡ್ಡಿ ಹೇಳಿದ್ದಾರೆ.

‘ನಾವು ನಮ್ಮ ನೂತನ ರಾಜಧಾನಿಯಾಗಲಿರುವ ವಿಶಾಖಪಟ್ಟಣಂನಲ್ಲಿ ಮಾರ್ಚ್​ 3 ಮತ್ತು 4ರಂದು ಜಾಗತಿಕ ಹೂಡಿಕೆದಾರರ ಶೃಂಗಸಭೆಯನ್ನು ಆಯೋಜಿಸುತ್ತಿದ್ದೇವೆ. ನೀವೆಲ್ಲ ಅದರಲ್ಲಿ ಪಾಲ್ಗೊಳ್ಳಬೇಕು. ಅಷ್ಟೇ ಅಲ್ಲ, ನಿಮ್ಮ ನಿಮ್ಮ ದೇಶಗಳಲ್ಲಿರುವ ನಿಮ್ಮ ಸಹೋದ್ಯೋಗಿಗಳಿಗೂ ಈ ಬಗ್ಗೆ ಹೇಳಿ. ಅವರೂ ಆಂಧ್ರದಲ್ಲಿ ನಡೆಯುವ ಹೂಡಿಕೆ ಸಮಾವೇಶದಲ್ಲಿ ಪಾಲ್ಗೊಳ್ಳುವಂತೆ ಮಾಡಿ. ಆಂಧ್ರಪ್ರದೇಶದಲ್ಲಿ ಉದ್ದಿಮೆ ಎಷ್ಟು ಸುಲಭ ಎಂಬುದು ನಿಮಗೆಲ್ಲ ಆ ಸಮಾವೇಶಕ್ಕೆ ಭೇಟಿ ನೀಡಿದರೆ, ಖಂಡಿತ ಅರ್ಥವಾಗುತ್ತದೆ’ ಎಂದು ಜಗನ್​ ರೆಡ್ಡಿಯವರು ರಾಜತಾಂತ್ರಿಕ ಒಕ್ಕೂಟದ ಸಭೆಯಲ್ಲಿ ಪಾಲ್ಗೊಂಡಿದ್ದವರಿಗೆ ತಿಳಿಸಿದರು.

ಆಂಧ್ರಪ್ರದೇಶದ ರಾಜಧಾನಿ ಅಮರಾವತಿ ನಗರ ಆಗಿತ್ತು. ಆದರೆ ಆಂಧ್ರಕ್ಕೆ ಅಮರಾವತಿ ಜತೆ ವಿಶಾಖಪಟ್ಟಣಂ ಮತ್ತು ಕರ್ನೂಲ್​ ಸೇರಿ ಮೂರು ರಾಜಧಾನಿಗಳನ್ನು ರಚಿಸುವುದು ಜಗನ್​ಮೋಹನ್​ ರೆಡ್ಡಿ ಇಂಗಿತ. ಅಲ್ಲಿನ ಪ್ರತಿಪಕ್ಷಗಳು ಇದನ್ನು ವಿರೋಧಿಸುತ್ತಿವೆ. ಈ ಬಗ್ಗೆ ಕಾನೂನು ಹೋರಾಟ ಕೂಡ ನಡೆಯುತ್ತಿದೆ. ಇದೆಲ್ಲದರ ಮಧ್ಯೆ ವಿಶಾಖಪಟ್ಟಣಂ ನಗರವನ್ನು ಆಂಧ್ರಪ್ರದೇಶದ ನೂತನ ರಾಜಧಾನಿಯನ್ನಾಗಿ ಜಗನ್​ ರೆಡ್ಡಿ ಘೋಷಣೆ ಮಾಡಿದ್ದಾರೆ. ವಿಶಾಖಪಟ್ಟಣಂ ನಗರವನ್ನು ರಾಜ್ಯದ ಆಡಳಿತ ಕೇಂದ್ರವನ್ನಾಗಿ ಪರಿವರ್ತಿಸುವ ಬಗ್ಗೆ ಈ ಹಿಂದೆಯೇ ಪ್ರಸ್ತಾಪ ಮಾಡಿದ್ದರು.

ಇದನ್ನೂ ಓದಿ: ಆಂಧ್ರಪ್ರದೇಶದ ಸಚಿವೆ ರೋಜಾ ವಿರುದ್ಧ ನಟ ಪವನ್​ ಕಲ್ಯಾಣ್​ ಬೆಂಬಲಿಗರ ಆಕ್ರೋಶ; ಕಾರಿನ ಮೇಲೆ ದಾಳಿ

Exit mobile version