Site icon Vistara News

Cricketer Death | ಹಿಮಾಚಲ ಪ್ರದೇಶದ ಯುವ ಕ್ರಿಕೆಟಿಗ ಗುಜರಾತ್​ನ ಆಸ್ಪತ್ರೆಯಲ್ಲಿ ನಿಧನ

siddarth sharma

ಅಹಮದಾಬಾದ್​: ಹಿಮಾಚಲ ಪ್ರದೇಶ ತಂಡದ ಕ್ರಿಕೆಟ್​ ಆಟಗಾರ ಸಿದ್ಧಾರ್ಥ್​ ಶರ್ಮಾ ಜನವರಿ 12ರಂದು ಗುಜರಾತ್​ನಲ್ಲಿ ನಿಧನ (Cricketer Death) ಹೊಂದಿದ್ದಾರೆ. ರಣಜಿ ಟ್ರೋಫಿಗಾಗಿ ತಂಡದೊಂದಿಗೆ ಗುಜರಾತ್​ಗೆ ಬಂದಿದ್ದ ಅವರು ಅಸೌಖ್ಯದಿಂದ ಆಸ್ಪತ್ರೆ ಸೇರಿದ್ದರು. 28 ವರ್ಷದ ಅವರಿಗೆ ಕಳೆದ ಎರಡು ವಾರಗಳಿಂದ ಅವರಿಗೆ ಚಿಕಿತ್ಸೆ ನೀಡಲಾಗಿದ್ದರೂ ಗುಣಮುಖರಾಗದೇ ನಿಧನ ಹೊಂದಿದ್ದಾರೆ. ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖ್ವಿಂದರ್​ ಸಿಂಗ್​ ಸುಖು ಅವರು ಯುವ ಪ್ರತಿಭೆಯ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಸಿದ್ಧಾರ್ಥ ಶರ್ಮ ಅವರು ವಿಜಯ್​ ಹಜಾರೆ ಟ್ರೋಫಿ ಗೆದ್ದ ಹಿಮಾಚಲ ತಂಡದ ಸದಸ್ಯರಾಗಿದ್ದು, ಅವರ ಕೊನೇ ಸಾಧನೆಯಾಗಿದೆ. ವಡೋದರಾದಲ್ಲಿ ಕಳೆದ ಕೆಲವು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದ ಅವರು ವೆಂಟಿಲೇಟರ್​ ಸಹಾಯದಿಂದ ಬದುಕಿದ್ದರು. ಆದರೆ ಗುರುವಾರ ರಾತ್ರಿ ನಿಧನ ಹೊಂದಿದ್ದಾರೆ.

ಉನಾದಲ್ಲಿ ಜನಿಸಿದ ಸಿದ್ಧಾರ್ಥ್​ ಶರ್ಮಾ ಅವರ ವೇಗದ ಬೌಲರ್​ ಆಗಿ ದೇಶೀಯ ಕ್ರಿಕೆಟ್​ ವೃತ್ತಿ ಕಡಿಮೆ ಅವಧಿಯದ್ದಾಗಿತ್ತು. ಐದು ವರ್ಷಗಳ ಅವಧಿಯಲ್ಲಿ ಅವರು ಹಿಮಾಚಲ ತಂಡದ ಪರ ಒಂದು ಟಿ20 ಪಂದ್ಯ, ಆರು ಪ್ರಥಮ ದರ್ಜೆ ಪಂದ್ಯಗಳು ಹಾಗೂ ಲಿಸ್ಟ್​ ಎ ಪಂದ್ಯಗಳಲ್ಲಿ ಆಡಿದ್ದರು. ಕಳೆದ ಡಿಸೆಂಬರ್‌ನಲ್ಲಿ ಕೋಲ್ಕೊತಾದ ಈಡನ್ ಗಾರ್ಡನ್ಸ್‌ನಲ್ಲಿ ಬೆಂಗಾಲ್ ವಿರುದ್ಧ ಅವರು ಕೊನೇ ಪಂದ್ಯದಲ್ಲಿ ಆಡಿದ್ದರು. ಅಲ್ಲಿ ಅವರು ಮೊದಲ ಇನ್ನಿಂಗ್ಸ್‌ನಲ್ಲಿ ಐದು ಎರಡನೇ ಇನಿಂಗ್ಸ್​ನಲ್ಲಿ ಎರಡು ವಿಕೆಟ್​ಗಳನ್ನು​ ಕಬಳಿಸಿದ್ದರು.

ಇದನ್ನೂ ಓದಿ | Roger Binny | ಕನ್ನಡಿಗ ರೋಜರ್ ಬಿನ್ನಿ ಬಿಸಿಸಿಐ ಅಧ್ಯಕ್ಷರಾಗಿ ಅವಿರೋಧ ಆಯ್ಕೆ

Exit mobile version