Site icon Vistara News

Car Race | ಕಾರ್​ ರೇಸ್ ವೇಳೆ ಅವಘಡ, ಜನಪ್ರಿಯ ರೇಸ್​ ಚಾಲಕ ದುರ್ಮರಣ; ಸ್ಪರ್ಧೆಗಳು ಸ್ಥಗಿತ

car race

ಚೆನ್ನೈ : ಕಾರು ರೇಸ್​ ವೇಳೆ (Car Race) ಅಪಘಾತ ಸಂಭವಿಸಿ ಭಾರತದ ಜನಪ್ರಿಯ ಕಾರು ರೇಸರ್ ಕೆ. ಇ ಅಶೋಕ್ ಕುಮಾರ್ ಅವರು ಮೃತಪಟ್ಟಿದ್ದಾರೆ. ಘಟನೆಯ ಬೆನ್ನಲ್ಲೇ ಸ್ಪರ್ಧೆಯನ್ನು ನಿಲ್ಲಿಸಲಾಗಿದ್ದು, ತನಿಖೆ ನಡೆಸಲು ಆದೇಶ ನಡೆಸಲಾಗಿದೆ. 59 ವರ್ಷದ ಅಶೋಕ್​ ಕುಮಾರ್ ಅವರನ್ನು ದುರ್ಘಟನೆ ನಡೆದ ತಕ್ಷಣ ಆಸ್ಪತ್ರೆಗೆ ಸಾಗಿಸಿದ ಹೊರತಾಗಿಯೂ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ.

ಚೆನ್ನೈ ಮದ್ರಾಸ್​ ಇಂಟರ್​ನ್ಯಾಷನ್​ ಸರ್ಕೀಟ್​ನಲ್ಲಿ ಭಾನುವಾರ (ಜನವರಿ 8) ಮುಂಜಾನೆ ನಡೆದ ಘಟನೆಯಲ್ಲಿ ಅವರು ಮೃತಪಟ್ಟಿದ್ದಾರೆ. ಎಮ್​ಆರ್​ಎಫ್​ ಎಮ್ಎಮ್​ಎಸ್​ಸಿ ಎಫ್​ಎಮ್ಎಸ್​ಸಿಐ ರೇಸ್​ನಲ್ಲಿ ಪಾಲ್ಗೊಂಡಿದ್ದ ಅಶೋಕ್​ ಕುಮಾರ್​ ಅವರ ಸಲೂನ್​ ಕಾರು ಪ್ರತಿಸ್ಪರ್ಧಿಯ ಕಾರಿಗೆ ಡಿಕ್ಕಿ ಹೊಡೆದು ತಡೆಗೋಡೆಗೆ ಹೋಗಿ ಬಡಿದಿತ್ತು.

ಕಾರು ಗುದ್ದಿದ ತಕ್ಷಣ ರೇಸ್​ ನಿಲ್ಲಿಸಲಾಯಿತು. (ರೆಡ್​ ಫ್ಲ್ಯಾಗ್​). ಕಾರಿನೊಳಗೆ ಸಿಲುಕಿಕೊಂಡಿದ್ದ ಅಶೋಕ್​ ಕುಮಾರ್​ ಅವರನ್ನು ತುರ್ತು ನೆರವು ಸಿಬ್ಬಂದಿ ಹೊರಕ್ಕೆಳೆದು ಆಂಬ್ಯುಲೆನ್ಸ್ ಮೂಲಕ ಸಮೀಪ ಆಸ್ಪತ್ರೆಗೆ ಕೊಂಡೊಯ್ದರು. ಆದರೆ ಆಸ್ಪತ್ರೆಗಳಲ್ಲಿ ವೈದ್ಯರು ನಡೆಸಿದ ಪ್ರಯತ್ನಗಳು ವಿಫಲಗೊಂಡವು.

ಫೆಡರೇಷನ್​ ಆಫ್​ ಮೋಟಾರ್​ ಸ್ಪೋರ್ಟ್ಸ್​​ ಕ್ಲಬ್​ ಆಫ್​ ಇಂಡಿಯಾದ ಅಧ್ಯಕ್ಷ ವಿಕ್ಕಿ ಚಂದೋಕ್​ ಅವರು ಘಟನೆ ಬಗ್ಗೆ ಸಂತಾಪ ಸೂಚಿಸಿದ್ದಾರೆ. ಅಶೋಕ್ ಅವರು ಅನುಭವಿ ರೇಸರ್​. ಒಳ್ಳೆಯ ಸ್ನೇಹಿತ ಹಾಗೂ ಅತ್ಯುತ್ತಮ ಸ್ಪರ್ಧಿ ಎಂದು ಹೇಳಿದ್ದಾರೆ. ಅವರ ನಿಧನ ಹಿನ್ನೆಲೆಯಲ್ಲಿ ದಿನ ರೇಸ್​ಗಳನ್ನು ಸ್ಥಗಿತಗೊಳಿಸಲಾಯಿತು.

ಇದನ್ನೂ ಓದಿ | Moto GP | 2023ರ ಸೆಪ್ಟೆಂಬರ್‌ 22ರಿಂದ24ರವರೆಗೆ ಭಾರತದಲ್ಲಿ ಮೊಟೊ ಜಿಪಿ ಬೈಕ್‌ ರೇಸ್‌

Exit mobile version