Site icon Vistara News

INDvsAUS : ಕ್ರಿಕೆಟ್​ನಲ್ಲಿ ಏನು ಬೇಕಾದರೂ ಘಟಿಸಬಹುದು, ಸೋಲಿನ ಬಗ್ಗೆ ಉಮೇಶ್​ ಯಾದವ್​ ಪ್ರತಿಕ್ರಿಯೆ ಹೀಗಿತ್ತು!

Anything in cricket can happen, Umesh Yadav's response to the defeat!

#image_title

ಇಂದೋರ್​: ಇಲ್ಲಿನ ಹೋಳ್ಕರ್​ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ಶುಕ್ರವಾರ (ಮಾರ್ಚ್​ 3) ಮುಕ್ತಾಯಗೊಂಡು ಭಾರತ ಹಾಗೂ ಪ್ರವಾಸಿ ಆಸ್ಟ್ರೇಲಿಯಾ ತಂಡಗಳ ನಡುವಿನ ಟೆಸ್ಟ್​ ಸರಣಿಯ (INDvsAUS) ಮೂರನೇ ಪಂದ್ಯದಲ್ಲಿ ಭಾರತ ತಂಡ 9 ವಿಕೆಟ್​ ಹೀನಾಯ ಸೋಲಿಗೆ ಒಳಗಾಗಿದೆ. ಈ ಸೋಲಿಗೆ ಭಾರತ ತಂಡದ ಬ್ಯಾಟರ್​ಗಳೇ ಹೊಣೆಗಾರರು. ಬ್ಯಾಟಿಂಗ್​ ದಿಗ್ಗಜ ಸುನೀಲ್​ ಗವಾಸ್ಕರ್​ ಸೇರಿದಂತೆ ಎಲ್ಲರೂ ಭಾರತದ ಬ್ಯಾಟರ್​ಗಳು ಆಸ್ಟ್ರೇಲಿಯಾ ಸ್ಪಿನ್​ ಬೌಲಿಂಗ್​ಗೆ ಮಂಕಾಗಿರುವುದನ್ನು ಮನಗಂಡಿದ್ದಾರೆ ಹಾಗೂ ಅದರ ಬಗ್ಗೆ ವಿಶ್ಲೇಷಣೆ ನೀಡುತ್ತಿದ್ದಾರೆ. ಆದರೆ, ಟೀಮ್​ ಇಂಡಿಯಾದ ಸದಸ್ಯರು ಸೋಲಿನ ಬಗ್ಗೆ ಅಷ್ಟೊಂದು ತಲೆಕೆಡಿಸಿಕೊಂಡಿಲ್ಲ. ಯಾಕೆಂದರೆ ಮೊದಲೆರಡು ಪಂದ್ಯಗಳಲ್ಲಿ ಗೆದ್ದು 2-1 ಮುನ್ನಡೆ ಪಡೆದಿರುವ ಕಾರಣ ಮುಂದಿನ ಪಂದ್ಯದಲ್ಲಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಏತನ್ಮಧ್ಯೆ, ವೇಗದ ಬೌಲರ್​ ಉಮೇಶ್​ ಯಾದವ್​, ಕ್ರಿಕೆಟ್​ನಲ್ಲಿ ಇಂಥ ಫಲಿತಾಂಶಗಳು ಮಾಮೂಲಿ ಎಂಬುದಾಗಿ ಪ್ರತಿಕ್ರಿಯೆ ಕೊಟ್ಟಿದ್ದಾರೆ. ‘

ಪಂದ್ಯ ಮುಕ್ತಾಯದ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಉಮೇಶ್​ ಯಾದವ್, ಕ್ರಿಕೆಟ್​ನಲ್ಲಿ ಏನು ಬೇಕಾದರೂ ಘಟಿಸಬಹುದು. ಅಲ್ಲಿ ಫಲಿತಾಂಶ ಅನಿರೀಕ್ಷಿತವಾಗಿರುತ್ತದೆ. ನಾವು ಚೆನ್ನಾಗಿಯೇ ಬೌಲಿಂಗ್​ ಮಾಡಿದ್ದೆವು. ಆದರೆ, ಈ ಪಿಚ್ ನಮ್ಮ ಬ್ಯಾಟರ್​ಗಳಿಗಾಗಲಿ, ಎದುರಾಳಿ ತಂಡದ ಬ್ಯಾಟರ್​ಗಳಿಗಾಗಲಿ ಸುಲಭವಾಗಿರಲಿಲ್ಲ. ಮುಂದೆ ಬಂದು ಬ್ಯಾಟ್​ ಬೀಸಿ ರನ್​ ಗಳಿಸುವಂತಿರಲಿಲ್ಲ ಎಂಬುದಾಗಿ ಹೇಳಿದ್ದಾರೆ.

ವೇಗದ ಬೌಲರ್​ ಆಗಿರುವ ನಾನು ಸ್ಟ್ರೈಟ್​ ಲೈನ್​ನಲ್ಲಿಯೇ ಚೆಂಡೆಸೆಯಲು ಯತ್ನಿಸಿದ್ದೆ. ಸರಿಯಾದ ಏರಿಯಾದಲ್ಲಿ ಚೆಂಡೆಸೆಯುವ ಮೂಲಕ ಎದುರಾಳಿಯ ಮೇಲೆ ಒತ್ತಡ ಹೇರುತ್ತಿದ್ದೆ. ಪಿಚ್​ನಲ್ಲಿ ಲೋ ಬೌನ್ಸ್​ ಬೀಳುತ್ತಿದ್ದ ಕಾರಣ ವೇಗಕ್ಕೆ ಮಾತ್ರ ಆಸಕ್ತಿ ವಹಿಸಿದ್ದೆ. ಸ್ವಿಂಗ್ ಮಾಡುವುದಕ್ಕೂ ಪ್ರಯತ್ನ ಮಾಡಿರಲಿಲ್ಲ ಎಂದು ಉಮೇಶ್ ಯಾದವ್ ಹೇಳಿದ್ದಾರೆ.

ಇದನ್ನೂ ಓದಿ : INDvsAUS : ತವರು ನೆಲದಲ್ಲಿ ವಿಶೇಷ ಬೌಲಿಂಗ್​ ಸಾಧನೆ ಮಾಡಿದ ಉಮೇಶ್​ ಯಾದವ್​; ಏನದು ದಾಖಲೆ?

ಬ್ಯಾಟಿಂಗ್​ ಮಾಡಲು ಇಳಿಯುವಾಗ ನನಗೆ ತಂಡದಿಂದ ಯಾವುದೇ ಸಂದೇಶ ಇರಲಿಲ್ಲ. ಜೋರಾಗಿ ಬ್ಯಾಟ್​ ಬೀಸುವಂತೆ ಹೇಳಿರಲಿಲ್ಲ. ಆದರೆ, ಡಿಫೆನ್ಸ್​ ಆಡುವ ಮೂಲಕ ಸುಮ್ಮನೆ ಔಟಾಗುವುದಕ್ಕಿಂತ ಜೋರಾಗಿ ಬ್ಯಾಟ್​ ಬೀಸಿ ರನ್​ ಗಳಿಸುವುದೇ ನನ್ನ ಗುರಿ ಎಂಬುದಾಗಿ ತಮ್ಮ ಬ್ಯಾಟಿಂಗ್ ವೈಖರಿ ಬಗ್ಗೆ ಉಮೇಶ್​ ಯಾದವ್​ ಸ್ಪಷ್ಟನೆ ನೀಡಿದರು.

Exit mobile version