Site icon Vistara News

R Ashwin : ರವೀಂದ್ರ ಜಡೇಜಾನಂಥ ಜತೆಗಾರ ಸಿಕ್ಕಿದ್ದಕ್ಕೆ ಧನ್ಯ ಎಂದ ಅಶ್ವಿನ್​; ಅವರು ಈ ಮಾತು ಹೇಳಿದ್ದು ಯಾಕೆ?

If you respect the pitch, it will respect you, who did Ashwin talk to?

#image_title

ನಾಗ್ಪುರ: ರವೀಂದ್ರ ಜಡೇಜಾ ಅವರಂಥ ಸ್ಪಿನ್ ಜತೆಗಾರನನ್ನು ಪಡೆದಿರುವುದಕ್ಕೆ ಧನ್ಯವಾದಗಳು. ಅವರು ಅದ್ಭುತ ಫಾರ್ಮ್​ನಲ್ಲಿದ್ದಾರೆ. ಹೀಗಾಗಿ ಭಾರತ ತಂಡದ ಸ್ಪಿನ್ ಬೌಲಿಂಗ್​ ವಿಭಾಗಕ್ಕೆ ಶಕ್ತಿ ಬಂದಿದೆ ಹಾಗೂ ನನಗೂ ಸಹಾಯವಾಗಿದೆ ಎಂದು ಭಾರತ ತಂಡದ ಹಿರಿಯ ಸ್ಪಿನ್​ ಬೌಲರ್ ಆರ್​. ಅಶ್ವಿನ್ (R Ashwin)​ ಹೇಳಿದ್ದಾರೆ. ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಬಾರ್ಡರ್​ ಗವಾಸ್ಕರ್ ಟ್ರೋಫಿಯ ಮೊದಲ ಪಂದ್ಯದಲ್ಲಿ ಜಯಸಿದ ಸಂತೋಷದಲ್ಲಿದ್ದ ಅವರು ಸ್ಟಾರ್​ ಸ್ಪೋರ್ಟ್ಸ್​ ಜತೆ ಮಾತನಾಡುತ್ತಾ ಅವರು ಈ ಮಾತು ಹೇಳಿದ್ದಾರೆ.

ಭಾರತ ತಂಡ ಟೆಸ್ಟ್​ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ ಇನಿಂಗ್ಸ್ ಹಾಗೂ 132 ರನ್​ಗಳ ವಿಜಯ ಸಾಧಿಸಿದೆ. ಈ ಮೂಲಕ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ. ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ ರವೀಂದ್ರ ಜಡೇಜಾ 5 ವಿಕೆಟ್​ ಕಬಳಿಸಿದ್ದರೆ ಎರಡನೇ ಇನಿಂಗ್ಸ್​ನಲ್ಲಿ ಆರ್​ ಅಶ್ವಿನ್​ 5 ವಿಕೆಟ್​ ಪಡೆದಿದ್ದರು. ಮೊದಲ ಇನಿಂಗ್​​​ನಲ್ಲಿ ಅಶ್ವಿನ್​ ಮೂರು ಹಾಗೂ ಎರಡನೇ ಇನಿಂಗ್ಸ್​ನಲ್ಲಿ ಜಡೇಜಾ 2 ವಿಕೆಟ್​ ತಮ್ಮದಾಗಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಪ್ರವಾಸಿ ತಂಡದ ಒಟ್ಟು 20 ವಿಕೆಟ್​ಗಳಲ್ಲೀ ಈ ಇಬ್ಬರು ಸ್ಪಿನ್ನರ್​ಗಳು 15 ವಿಕೆಟ್​ ಕಬಳಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅಶ್ವಿನ್​ ಅವರು ಸ್ಪಿನ್​ ವಿಭಾಗಕ್ಕೆ ಅತ್ಯುತ್ತಮ ಜತೆಗಾರ ಎಂಬುದಾಗಿ ಹೇಳಿದ್ದಾರೆ.

ಇದನ್ನೂ ಓದಿ : Border- Gavaskar Trophy : ನಮ್ಮ ತಂಡಕ್ಕೆ ಆರ್​ ಅಶ್ವಿನ್​ ಭಯ ಎಂದ ಆಸ್ಟ್ರೇಲಿಯಾ ತಂಡದ ಆರಂಭಿಕ ಬ್ಯಾಟರ್​

ಜಡೇಜಾ ಅವರು ಅತ್ಯುತ್ತಮ ವಿಕೆಟ್​ಗಳನ್ನು ಕಬಳಿಸಿದ್ದಾರೆ. ಅವರು ಮೊದಲ ಇನಿಂಗ್ಸ್​ನಲ್ಲಿ ಉತ್ತಮ ಸಾಥ್​ ಕೊಟ್ಟಿದ್ದಾರೆ. ಅದೇ ರೀತಿ ಎರಡನೇ ಇನಿಂಗ್ಸ್​ನಲ್ಲೂ ಎದುರಾಳಿ ತಂಡದ ಮೇಲೆ ಒತ್ತಡ ಹೇರಿದ್ದಾರೆ. ನಮ್ಮ ತಂಡದ ಬ್ಯಾಟಿಂಗ್​ ವಿಭಾಗಕ್ಕೂ ಗೆಲುವಿನ ಶ್ರೇಯಸ್ಸು ಸಲ್ಲಬೇಕು. ಹೆಚ್ಚು ಹೊತ್ತು ಆಸ್ಟ್ರೇಲಿಯಾ ತಂಡದ ಫೀಲ್ಡಿಂಗ್ ಮಾಡುವಂತೆ ಮಾಡಿರುವ ಅವರು ಪಿಚ್​ ತಿರುವು ಪಡೆಯುತ್ತಿದ್ದಂತೆ ಅವರಿಗೆ ಬ್ಯಾಟಿಂಗ್ ಸಿಗುವಂತೆ ಮಾಡಿದರು ಎಂದು ಅಶ್ವಿನ್​ ಹೇಳಿದ್ದಾರೆ.

Exit mobile version