Site icon Vistara News

IPL 2023 : ಆರ್​ಸಿಬಿ ಕ್ಯಾಂಪ್​ನಲ್ಲಿ ಸುನೀಲ್​ ಚೆಟ್ರಿ, ಡೈವ್ ಹೊಡೆದು ಕ್ಯಾಚ್​ ಹಿಡಿದ ಫುಟ್ಬಾಲ್​ ದಿಗ್ಗಜ

At the RCB camp, football legend Sunil Chhetri shined with a diving catch

#image_title

ಬೆಂಗಳೂರು: ಏಪ್ರಿಲ್​ 2ರಂದು ಬೆಂಗಳೂರಿನಲ್ಲಿ ನಡೆಯಲಿರುವ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಹಾಗೂ ಮುಂಬಯಿ ಇಂಡಿಯನ್ಸ್​ ತಂಡಗಳ ನಡುವಿನ ಪಂದ್ಯಕ್ಕೆ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ. ಇತ್ತಂಡಗಳ ಆಟಗಾರರು ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ. ಏತನ್ಮಧ್ಯೆ, ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಕ್ಯಾಂಪ್​ಗೆ ಭಾರತದ ಫುಟ್ಬಾಲ್​ ದಿಗ್ಗಜ ಸುನೀಲ್​ ಚೆಟ್ರಿ ಭೇಟಿ ನೀಡಿ ಆಟಗಾರರು ಹಾಗೂ ಟೀಮ್​ ಮ್ಯಾನೇಜ್ಮೆಂಟ್​ ಜತೆ ಮಾತುಕತೆ ನಡೆಸಿದರು. ಇದೇ ವೇಳೆ ಅವರು ಡೈವ್ ಹೊಡೆದು ಸೂಪರ್ ಕ್ಯಾಚ್​ ಹಿಡಿಯುವ ಮೂಲಕ ಅಚ್ಚರಿ ಮೂಡಿಸಿದರು.

ಭಾರತ ಫುಟ್ಬಾಲ್ ತಂಡದ ಆಟಗಾರ ಸುನೀಲ್​ ಚೆತ್ರಿ ಆರ್​ಸಿಬಿ ಜೆರ್ಸಿ ಧರಿಸಿಕೊಂಡು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿರುವ ಆರ್​​ಸಿಬಿಗೆ ಕ್ಯಾಂಪ್​ಗೆ ಆಗಮಿಸಿದರು. ಬಳಿಕ ಅಲ್ಲಿದ್ದ ಆಟಗಾರರನ್ನು ಮಾತನಾಡಿ ಹುರಿದುಂಬಿಸಿದರು.

ಆರ್​ಸಿಬಿ ಮಾಜಿ ಕ್ಯಾಪ್ಟನ್​ ವಿರಾಟ್​ಕೊಹ್ಲಿ ಅವರನ್ನು ಮಾತನಾಡಿಸಿದರು. ಬಳಿಕ ಅವರೊಂದಿಗೆ ನಾನಾ ವಿಷಯಗಳ ಬಗ್ಗೆ ಚರ್ಚೆ ನಡೆಸಿದರು.

ಈ ವೇಳೆ ಮಾತನಾಡಿದ ಸುನೀಲ್ ಚೆಟ್ರಿ, ವಿರಾಟ್​ ಕೊಹ್ಲಿ ಅದ್ಭುತ ಮನುಷ್ಯ. ಅವರ ಜತೆಗೆ ಸಾಕಷ್ಟು ಮಾತನಾಡಿದೆ. ಕ್ರೀಡೆ ಮತ್ತು ತಮಾಷೆಯ ವಿಚಾರಗಳೇ ತುಂಬಿಕೊಂಡಿದ್ದವು. ವಿರಾಟ್​ಕೊಹ್ಲಿಯ ಬಗ್ಗೆ ಸಾಕಷ್ಟು ಜನರಿಗೆ ಗೊತ್ತಿದೆ. ಅದರೆ, ಅವರೊಬ್ಬ ಅದ್ಭುತ ಮನುಷ್ಯ ಎಂಬುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಅವರು ಹೇಳಿದರು.

ಇದೇ ವೇಳೆ ಅವರು ಆರ್​ಸಿಬಿ ಜೆರ್ಸಿಯ ಬಗ್ಗೆಯೂ ಮಾತನಾಡಿದರು. ನನಗೆ ಆರ್​ಸಿಬಿ ಜೆರ್ಸಿಯ ಬಗ್ಗೆ ಕುತೂಹಲವಿದೆ. ಖುಷಿಯಿದೆ. ಅದನ್ನು ಧರಿಸಲು ನನಗೆ ಖುಷಿಯಾಗುತ್ತಿದೆ ಎಂದು ಅವರು ಹೇಳಿದರು.

ಆರ್​ಸಿಬಿಗೆ ಯಾಕೆ ಬೆಂಬಲ ಮಾಡುತ್ತಿರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಬಿಎಫ್​ಸಿ ತಂಡದ ಆಟಗಾರ. ಬೆಂಗಳೂರಿನ ತಂಡದಲ್ಲಿ ಅಡುವ ನಾನು ಬೆಂಗಳೂರಿಗೆ ಬೆಂಬಲ ನೀಡುತ್ತೇನೆ. ವಿರಾಟ್​ ಕೊಹ್ಲಿಯ ಜತೆ ಮಾತನಾಡುವ ಮೂಲಕ ವಿಶೇಷ ಬೆಂಬಲ ನನಗೆ ದೊರಕಿದೆ. ಹೀಗಾಗಿ ಆರ್​ಸಿಬಿ ಜತೆ ಇರುವುದೇ ಸಂತಸದ ವಿಷಯ ಎಂದು ಅವರು ಹೇಳಿದರು.

ಬ್ರೇಸ್​ವೆಲ್ ಬ್ಯಾಟಿಂಗ್​ ಅಬ್ಬರ

ಬೆಂಗಳೂರು: ಫಾಫ್​ ಡು ಪ್ಲೆಸಿಸ್​ ನೇತೃತ್ವದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಐದು ಬಾರಿಯ ಚಾಂಪಿಯನ್​ ಮುಂಬಯಿ ಇಂಡಿಯನ್ಸ್ ತಂಡವನ್ನು ಎದುರಿಸಲು ಸಜ್ಜಾಗಿದೆ. ಏಪ್ರಿಲ್​ 2ರಂದು ಬೆಂಗಳೂರಿನ ಚಿನ್ನ ಸ್ವಾಮಿ ಸ್ಟೇಡಿಯಮ್​ನಲ್ಲಿ ಪಂದ್ಯ ನಡೆಯಲಿದೆ. ಈ ಹಣಾಹಣಿಗಾಗಿ ಕಾಯುತ್ತಿರುವ ಆರ್​ಸಿಬಿ ತಂಡದ ಅಭಿಮಾನಿಗಳಿಗೆ ಅತ್ಯಂತ ಖುಷಿಯ ವಿಷಯವೊಂದಿದೆ. ತಡವಾರಿ ಆರ್​ಸಿಬಿ ಬಳಗ ಸೇರಿಕೊಂಡ ನ್ಯೂಜಿಲ್ಯಾಂಡ್​ನ ಮೈಕೆಲ್​ ಬ್ರೇಸ್​​ವೆಲ್​ ಅಭ್ಯಾಸ ಪಂದ್ಯದಲ್ಲಿ ಭರ್ಜರಿ ಶತಕ ಬಾರಿಸಿ ಮಿಂಚಿದ್ದಾರೆ. ಈ ಮೂಲಕ ಅವರು ಹಾಲಿ ಆವೃತ್ತಿಯ ಟೂರ್ನಿಯಲ್ಲಿ ಬೆಂಗಳೂರು ತಂಡದ ನೆರವಿಗೆ ನಿಲ್ಲುವ ಮುನ್ಸೂಚನೆ ಕೊಟ್ಟಿದ್ದಾರೆ.

ಮುಂಬೈ ಇಂಡಿಯನ್ಸ್​ ವಿರುದ್ಧದ ಪಂದ್ಯಕ್ಕೆ ಮೊದಲು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಸತತವಾಗಿ ಅಭ್ಯಾಸ ನಡೆಸಿದೆ. ಅಂತೆಯೇ ಶುಕ್ರವಾರ ಆರ್​ಸಿಬಿ ಬಳಗವನ್ನು ಎರಡು ತಂಡಗಳಾಗಿ ವಿಂಗಡಿಸಿ ಪಂದ್ಯವೊಂದನ್ನು ಆಡಿಸಿದ್ದರು. ಅದಲ್ಲಿ ಮೈಕೆಲ್ ಬ್ರೇಸ್​ವೆಲ್​ ಬೌಲರ್​ಗಳ ವಿರುದ್ಧ ಸವಾರಿ ಮಾಡಿದ್ದಾರೆ. ಬೌಂಡರಿ ಸಿಕ್ಸರ್​ಗಳ ಮಳೆ ಸುರಿಸಿ ಅಲ್ಲಿದ್ದವರೆಲ್ಲರೂ ನಿಬ್ಬೆರಗಾಗುವಂತೆ ಮಾಡಿದ್ದಾರೆ. ಕೇವಲ 55 ಎಸೆತಗಳಲ್ಲಿ 105 ರನ್​ ಬಾರಿಸಿ ಮಿಂಚಿದ್ದಾರೆ. ಈ ಮೂಲಕ ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ನೆರವಾಗುವ ಸೂಚನೆ ಕೊಟ್ಟಿದ್ದಾರೆ.

ತಡವಾಗಿ ತಂಡ ಸೇರಿದ ಬ್ರೇಸ್​ವೆಲ್​

ನ್ಯೂಜಿಲ್ಯಾಂಡ್​ನ ಸ್ಪಿನ್ ಆಲ್​ರೌಂಡರ್​ ಮೈಕೆಲ್​ ಬ್ರೇಸ್​ವೆಲ್​ ಆರಂಭದಲ್ಲಿ ಬೆಂಗಳೂರು ತಂಡದ ಭಾಗವಾಗಿರಲಿಲ್ಲ. ಐಪಿಎಲ್​ ಆಟಗಾರರ ಮಿನಿ ಹರಾಜಿನಲ್ಲಿ ಅವರನ್ನು ಯಾರು ಕೂಡ ತಂಡಕ್ಕೆ ಸೇರಿಸಿಕೊಂಡಿರಲಿಲ್ಲ. ಸ್ಫೋಟಕ ಬ್ಯಾಟರ್​ ಆಗಿರುವ ಹೊರತಾಗಿಯೂ ಒಂದು ಕೋಟಿ ರೂಪಾಯಿ ಮೂಲ ಬೆಲೆ ಹೊಂದಿದ್ದ ಕಾರಣ ಯಾವ ತಂಡವೂ ಖರೀದಿ ಮಾಡಿರಲಿಲ್ಲ. ಆದರೆ ಅವರ ಅದೃಷ್ಟ ಬೇರೆ ರೀತಿಯದ್ದಾಗಿತ್ತು. ಯಾಕೆಂದರೆ ಹರಾಜಿನಲ್ಲಿ ಆರ್​ಸಿಬಿ ತಂಡ ಖರೀದಿ ಮಾಡಿದ್ದ ಇಂಗ್ಲೆಂಡ್​ನ ಆಲ್​ರೌಂಡರ್​ ವಿಲ್​ ಯಂಗ್​ ಗಾಯದ ಸಮಸ್ಯೆಯಿಂದಾಗಿ ಈ ಬಾರಿಯ ಐಪಿಎಲ್​ನಲ್ಲಿ ಪಾಲ್ಗೊಳ್ಳುತ್ತಿಲ್ಲ. ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ ಗಾಯಗೊಂಡಿರುವ ಅವರು ಸರ್ಜರಿಗೆ ಒಳಗಾಗಿದ್ದಾರೆ. ಅವರ ಅಲಭ್ಯತೆ ಗೊತ್ತಾಗುತ್ತಿದ್ದಂತೆ ಅನ್​ಸೋಲ್ಡ್​​ ಆಗಿರುವ ಆಟಗಾರರಾಗಿದ್ದ ಬ್ರೇಸ್​ವೇಲ್​ ಅವರನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ. ಅದಕ್ಕಾಗಿ ಮೂಲ ಬೆಲೆ ಒಂದು ಕೋಟಿ ರೂಪಾಯಿ ಸಲ್ಲಿಸಿದೆ.

ಸುಯಾಶ್​ ಪಡೆಗೆ ಗೆಲುವು

Exit mobile version