Site icon Vistara News

Gautam Gambhir: ಮತ್ತೆ ಪಾಕ್​ ಆಟಗಾರನ ಬೆಂಬಲಕ್ಕೆ ನಿಂತ ಗೌತಮ್​ ಗಂಭೀರ್

Gautam Gambhir

ನವದೆಹಲಿ: ಸದಾ ಭಾರತೀಯ ಆಟಗಾರರ ಮೇಲೆ ಕಿಡಿ ಕಾರಿ ದೇಶ ಪ್ರೇಮದ ಪಾಠ ಮಾಡುವ ಗೌತಮ್​ ಗಂಭೀರ್(Gautam Gambhir), ಪಾಕ್ಕಿಸ್ತಾನ ಆಟಗಾರ ಬಾಬರ್​ ಅಜಂ(Babar Azam) ಅವರ ಕ್ರಿಕೆಟ್​ ಭವಿಷ್ಯ ನುಡಿದಿದ್ದಾರೆ. ಪಾಕಿಸ್ತಾನ ಕ್ರಿಕೆಟ್​ ಕಂಡ ಅತ್ಯುತ್ತಮ ಬ್ಯಾಟರ್​ ಆಗುವ ಎಲ್ಲ ಸಾಮರ್ಥ್ಯ ಬಾಬರ್​ಗೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಾಬರ್​ ಕಮ್​ಬ್ಯಾಕ್​ ಗ್ಯಾರಂಟಿ

ಬಾಬರ್​ ಅಜಂ ಅವರು ನಾಯಕತ್ವ ವಹಿಸಿಕೊಳ್ಳುವ ಮುನ್ನ ಉತ್ತಮ ಬ್ಯಾಟಿಂಗ್​ ಪ್ರದರ್ಶನ ತೋರುತ್ತಿದ್ದರು. ನಾಯಕತ್ವ ನೀಡಿದ ಬಳಿಕ ಅವರ ಮೇಲೆ ಹೆಚ್ಚಿನ ಒತ್ತಡವನ್ನು ಪಾಕ್​ ಕ್ರಿಕೆಟ್​ ಮಂಡಳಿ ಹಾಕಿದ ಪರಿಣಾಮ ಅವರಿಗೆ ಬ್ಯಾಟಿಂಗ್​ ಕಡೆ ಗಮನ ನೀಡಲು ಸಾಧ್ಯವಾಗಲಿಲ್ಲ. ಈಗ ಅವರು ನಾಯಕತ್ವದಿಂದ ಕೆಳಗಿಳಿದಿದ್ದಾರೆ. ಜತೆಗೆ ಚಿಂತೆ ಮುಕ್ತರಾಗಿದ್ದಾರೆ. ಇನ್ನು ಅವರ ಅಸಲಿ ಆಟ ಪ್ರಾರಂಭವಾಗುತ್ತದೆ. ಮುಂದಿನ 10 ವರ್ಷಗಳ ಕಾಲ ಕ್ರಿಕೆಟ್​ನಲ್ಲಿ ಅವರ ಹೆಸರೇ ರಾರಾಜಿಸಲಿದೆ ಎಂದು ಗಂಭೀರ್​ ಹೇಳಿದ್ದಾರೆ.

ಇದನ್ನೂ ಓದಿ Gautam Gambhir : ಮೋದಿಯನ್ನು ಪನೌತಿ ಎಂದವರಿಗೆ ತಿರುಗೇಟು ಕೊಟ್ಟ ಗೌತಮ್​ ಗಂಭೀರ್​

ಸ್ಪೋರ್ಟ್ಸ್‌ಕೀಡಾ ಶೋನಲ್ಲಿ ಪಾಕಿಸ್ತಾನದ ಮಾಜಿ ಆಟಗಾರ ವಾಸಿಮ್ ಅಕ್ರಮ್ ಜತೆ ಮಾತನಾಡುವ ವೇಳೆ ಗಂಭೀರ್​ ಈ ವಿಚಾರವನ್ನು ಹೇಳಿದ್ದಾರೆ. “29 ವರ್ಷದ ಬಾಬರ್ ಇನ್ನು ಮೂರು ಮಾದರಿಯ ಕ್ರಿಕೆಟ್​ನಲ್ಲಿ ಸುನಾಮಿ ಸೃಷ್ಟಿಸಲಿದ್ದಾರೆ. ಜತೆಗೆ ಅನೇಕ ಆಟಗಾರರ ದಾಖಲೆಯನ್ನು ಮುರಿಯಲಿದ್ದಾರೆ. ಬಾಬರ್ ನೈಜ ಸಾಮರ್ಥ್ಯ ಇನ್ನು ಮುಂದೆ ತಿಳಿಯಲಿದೆ. ಆತ ಪಾಕಿಸ್ತಾನ ಕ್ರಿಕೆಟ್​ ಇದುವರೆಗೆ ಕಾಣದಂತಹ ಬ್ಯಾಟರ್ ಆಗಿ ಇತಿಹಾಸದ ಪುಟ ಸೇರಲಿದ್ದಾರೆ. ಮುಂದಿನ 10 ವರ್ಷಗಳ ಕಾಲ ಕ್ರಿಕೆಟ್​ ಲೋಕವನ್ನು ಆಳಲಿದ್ದಾರೆ” ಎಂದು ಹೇಳಿದರು.

ದೇಶ ವಿರೋಧಿ

ಏಷ್ಯಾ ಕಪ್​ನಲ್ಲಿ ವಿರಾಟ್​ ಕೊಹ್ಲಿ ಸೇರಿ ಕೆಲ ಭಾರತೀಯ ಆಟಗಾರರು ಪಾಕಿಸ್ತಾನ ಆಟಗಾರರ ಜತೆ ಮಾತನಾಡಿದ ವಿಚಾರವಾಗಿ ಗಂಭೀರ್​ ಕಿಡಿ ಕಾರಿದ್ದರು. ಬದ್ಧ ಎದುರಾಳಿ ಪಾಕ್​ ಆಟಗಾರರಲ್ಲಿ ಮಾತನಾಡುವುದು ಸರಿಯಲ್ಲ. ಇದೇನಿದ್ದರು ಮೈದಾನದ ಹೊರಗಡೆ ಇರಲಿ ಎಂದು ದೇಶ ಪ್ರೇಮದ ಪಾಠ ಮಾಡಿದ್ದ ಗಂಭೀರ್​ ತಾನು ಮಾತ್ರ ಪಾಕ್​ ಆಟಗಾರರನ್ನು ಒಲೈಕೆ ಮಾಡುತ್ತಿದ್ದಾರೆ. ಈ ಕ್ರಮವನ್ನು ನೆಟ್ಟಿಗರು ಪ್ರಶ್ನಿಸಿದ್ದು ಗಂಭೀರ್​ ಅವರನ್ನು ದೇಶ ವಿರೋಧಿ ಎಂದಿದ್ದಾರೆ.

2007ರ ಟಿ20 ವಿಶ್ವಕಪ್​ ಫೈನಲ್​ ಮತ್ತು 2011 ಏಕದಿನ ವಿಶ್ವಕಪ್​ ಫೈನಲ್​ನಲ್ಲಿ ಅಮೋಘ ಪ್ರದರ್ಶನ ತೋರಿದ ಗಂಭೀರ್​ ಭಾರತ ಕಪ್​ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಆದರೆ ಕ್ರಿಕೆಟ್​ಗೆ ವಿದಾಯ ಹೇಳಿದ ಬಳಿಕ ಪದೇಪದೆ ಭಾರತೀಯ ಆಟಗಾರ ಮತ್ತು ತಂಡದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡುತ್ತಾ ತಮ್ಮ ವರ್ಚಸ್ಸನ್ನು ಕಡಿಮೆ ಮಾಡಿಕೊಳ್ಳುತ್ತಿದ್ದಾರೆ.

ಶ್ರೀಶಾಂತ್​ ಜತೆ ಕಿರಿಕ್​

ಕೆಲ ದಿನಗಳ ಹಿಂದಷ್ಟೇ ಲೆಜೆಂಡ್ಸ್ ಲೀಗ್ ಕ್ರಿಕೆಟ್‌ ಪಂದ್ಯದಲ್ಲಿ ಮೈದಾನದಲ್ಲೇ ಗಂಭೀರ್​ ಅವರು ಎಸ್​.ಶ್ರೀಶಾಂತ್(S. Sreesanth)​ ಜತೆ ಕಿರಿಕ್ ಮಾಡಿಕೊಂಡಿದ್ದರು. ಶ್ರೀಶಾಂತ್ ಅವರನ್ನು ಫಿಕ್ಸರ್​ ಎಂದು ಪದೇಪದೆ ಹೇಳುವ ಮೂಲಕ ಹೀಯಾಳಿಸಿದ್ದರು. ಇದು ಭಾರಿ ಚರ್ಚೆಗೆ ಕಾರಣವಾಗಿತ್ತು.

Exit mobile version