Site icon Vistara News

BCCI Meeting | ಹೊಸ ವರ್ಷಕ್ಕೆ ಸಭೆ ಕರೆದ ಬಿಸಿಸಿಐ; ಕೋಚ್ ದ್ರಾವಿಡ್​, ನಾಯಕ ರೋಹಿತ್​ಗೆ ನಡುಕ!

rohit sharma and dravid

ಮುಂಬಯಿ: ಕಳೆದ ಕೆಲ ವರ್ಷಗಳಿಂದ ಐಸಿಸಿ ಟೂರ್ನಿಗಳಲ್ಲಿ ಮತ್ತು ಟಿ20 ವಿಶ್ವ ಕಪ್​ನಲ್ಲಿ ಟೀಮ್​ ಇಂಡಿಯಾ ಸೋಲು ಕಂಡ ಬಗ್ಗೆ ಪರಾಮರ್ಶಿಸುವ ಸಲುವಾಗಿ ಬಿಸಿಸಿಐ(BCCI Meeting) ಮಹತ್ವದ ಸಭೆ ಕರೆದಿದೆ. ಈ ಮೂಲಕ ವರ್ಷಾರಂಭದಲ್ಲೇ ಬಿಸಿಸಿಐ ಮೇಜರ್​ ಸರ್ಜರಿ ನಡೆಸಲು ಮುಂದಾಗಿದೆ. ಇದರೊಂದಿಗೆ ಟೀಮ್ ಇಂಡಿಯಾದಲ್ಲಿ ಹೊಸ ಯುಗ ಆರಂಭವಾಗುವ ಸೂಚನೆ ಲಭಿಸಿದೆ.

ಭಾನುವಾರ(ಜನವರಿ 1) ಮುಂಬಯಿಯಲ್ಲಿ ಸಭೆ ನಡೆಯಲಿದೆ. ಅದರಂತೆ ಈ ಸಭೆಯಲ್ಲಿ ಪಾಲ್ಗೊಳ್ಳಲು ರೋಹಿತ್ ಶರ್ಮ, ರಾಹುಲ್​ ದ್ರಾವಿಡ್​, ವಿವಿಎಸ್​ ಲಕ್ಷ್ಮಣ್ ಮತ್ತು ಚೇತನ್​ ಶರ್ಮಾಗೆ ಬಿಸಿಸಿಐ ಸೂಚನೆ ನೀಡಿದೆ. ಸಭೆಯಲ್ಲಿ ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ, ಅಧ್ಯಕ್ಷ ರೋಜರ್​ ಬಿನ್ನಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.

ಶ್ರೀಲಂಕಾ ವಿರುದ್ಧದ ಸರಣಿಗೂ ಮುನ್ನ ಬಿಸಿಸಿಐ ಈ ಸಭೆ ಕರೆದಿರುವುದು ಕುತೂಹಲ ಮೂಡಿಸಿದೆ.ಲಂಕಾ ವಿರುದ್ಧದ ಸರಣಿ ಜನವರಿ 3ರಿಂದ ಆರಂಭವಾಗಲಿದೆ. ಇನ್ನು ಈ ಸಭೆಯಲ್ಲಿ ಟಿ20 ಸೋಲಿಗೆ ಕಾರಣ ಮತ್ತು ನಾಯಕತ್ವದ ಬದಲಾವಣೆ ಜತೆಗೆ ಟಿ20 ಮಾದರಿಗೆ ನೂತನ ಕೋಚ್​ ನೇಮಕ ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ.

ಮೂಲಗಳ ಪ್ರಕಾರ ಟೀಮ್​ ಇಂಡಿಯಾದ ಟಿ20 ಕ್ರಿಕೆಟ್​ಗೆ ವಿವಿಎಸ್​ ಲಕ್ಷ್ಮಣ್​ ಅವರನ್ನು ಕೋಚ್​ ಆಗಿ ನೇಮಕ ಮಾಡುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಈಗಾಗಲೇ ಅವರು ದ್ರಾವಿಡ್​ ಅನುಪಸ್ಥಿತಿಯಲ್ಲಿ ಹಲವು ಬಾರಿ ತಂಡದ ಕೋಚ್​ ಆಗಿ ಕರ್ತವ್ಯ ನಿರ್ವಹಿಸಿ ಯಶಸ್ಸು ಕಂಡಿದ್ದಾರೆ. ಈ ನಿಟ್ಟಿನಲ್ಲಿ ಅವರನ್ನು ಸಭೆಯಲ್ಲಿ ಪಾಲ್ಗೊಳ್ಳಲು ಬಿಸಿಸಿಐ ಆಹ್ವಾನಿಸಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ | BCCI | ಟೀಮ್​ ಇಂಡಿಯಾ ಟಿ20 ತಂಡಕ್ಕೆ ವಿದೇಶಿ ಕೋಚ್?​ ದ್ರಾವಿಡ್​​ಗೆ ಗೇಟ್​ ಪಾಸ್​ ಸಾಧ್ಯತೆ!

Exit mobile version