Site icon Vistara News

ಕೊಹ್ಲಿಗೆ ಖಡಕ್​ ಎಚ್ಚರಿಕೆ ನೀಡಿದ ಬಿಸಿಸಿಐ; ಇನ್ನೊಂದು ಬಾರಿ ನಿಯಮ ಉಲ್ಲಂಘಿಸಿದರೆ ಕಠಿಣ ಶಿಕ್ಷೆ

Virat Kohli posts

ಬೆಂಗಳೂರು: ಏಷ್ಯಾಕಪ್(Asia Cup 2023)​ಗೆ ಸಿದ್ಧತೆ ನಡೆಸುತ್ತಿರುವ ಟೀಮ್​ ಇಂಡಿಯಾ ಆಟಗಾರರು ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ(NCA)ಯಲ್ಲಿ ಗುರುವಾರ ಫಿಟ್​ನೆಸ್​ ಪರೀಕ್ಷೆಯಾದ ಯೋ-ಯೋ(Yo-Yo Test) ಟೆಸ್ಟ್‌ಗೆ ಒಳಪಟ್ಟಿದ್ದರು. ಯೋ-ಯೋ ಟೆಸ್ಟ್‌ಗೆ ಒಳಗಾದ ಬಗ್ಗೆ ವಿರಾಟ್​ ಕೊಹ್ಲಿ(Virat Kohli) ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಪೋಸ್ಟ್​ ಒಂದನ್ನು ಮಾಡಿದ್ದರು. ಈ ಪೋಸ್ಟ್​ ಇದೀಗ ಕೊಹ್ಲಿಗೆ ಕಂಟಕ ತಂದಿದೆ.

ಗುರುವಾರ ಯೋ-ಯೋ ಟೆಸ್ಟ್‌ಗೆ ಒಳಗಾದ ಕೊಹ್ಲಿ, ತಮ್ಮ ಫೋಟೊವನ್ನು ಹಂಚಿಕೊಂಡು ತಾನು ಯೋ-ಯೋ ಟೆಸ್ಟ್​ನಲ್ಲಿ 17.2 ಅಂಕ ಪಡೆಯುವ ಮೂಲಕ ಈ ಫಿಟ್​ನೆಸ್​ ಪರೀಕ್ಷೆಯಲ್ಲಿ ತೇರ್ಗಡೆಗೊಂಡಿದ್ದೇನೆ(Virat Kohli passed the Yo-Yo Test) ಎಂದು ಸ್ವತಃ ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಮಾಹಿತಿ ನೀಡಿದ್ದರು. ಆದರೆ ಕೊಹ್ಲಿಯ ಈ ಪೋಸ್ಟ್​ ಬಿಸಿಸಿಐ(BCCI) ಕೆಂಗಣ್ಣಿಗೆ ಗುರಿಯಾಗಿದೆ.

ಕೊಹ್ಲಿಗೆ ವಾರ್ನಿಂಗ್​

ಆಟಗಾರರು ತಮ್ಮ ಫಿಟ್‌ನೆಸ್ ಅಂಕಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಯಾವುದೇ ಹಂಚಿಕೊಳ್ಳಬಾರದು, ತಂಡದ ಗೌಪ್ಯ ವಿಷಯವನ್ನು ಎಲ್ಲೂ ಬಹಿರಂಗ ಪಡಿಸಿಕೊಳ್ಳಬಾರದು ಎಂದು ಎಲ್ಲ ಆಟಗಾರರಿಗೂ ಟೀಮ್​ ಮ್ಯಾನೆಜ್​ಮೆಂಟ್​ ಖಡಕ್​ ಎಚ್ಚರಿಕೆ ನೀಡಿರುವುದಾಗಿ ಐಟಿಐ ವರದಿ ಮಾಡಿದೆ. ಇದೇ ವಿಚಾರವಾಗಿ ಕೊಹ್ಲಿಗೂ ಕೂಡ ಬಿಸಿಸಿಐ ಈ ರಿತಿಯ ತಪ್ಪುಗಳು ಇನ್ನೊಂದು ಸಾರಿ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿರುವುದಾಗಿ ವರದಿಯಾಗಿದೆ.

ಬಿಸಿಸಿಐ ಏಷ್ಯಾಕಪ್ ಆಡುವ 17 ಮಂದಿ ಆಟಗಾರರಿಗೆ ಬೆಂಗಳೂರಿನ ಎನ್​ಸಿಎಯಲ್ಲಿ 6 ​​ದಿನಗಳ ಶಿಬಿರವನ್ನು ಏರ್ಪಡಿಸಿದೆ. ಈ ವೇಳೆ ಎಲ್ಲ ಆಟಗಾರರು ಯೋ-ಯೋ ಟೆಸ್ಟ್‌ ಮತ್ತು ಡೆಕ್ಸಾ ಪರೀಕ್ಷೆಗೆ (ಮೂಳೆಗಳ ಸಾಂದ್ರತೆಯನ್ನು ಅಳೆಯುವ ವಿಶೇಷ ರೀತಿಯ ಎಕ್ಸ್‌-ರೇ, ಡ್ಯುಯೆಲ್‌ ಎನರ್ಜಿ ಎಕ್ಸ್‌-ರೇ ಎಬಾಪ್ಟಿಮೆಟ್ರಿ) ಒಳಪಡೆಸಲಾಗುತ್ತದೆ. ಇದೀಗ ಕೊಹ್ಲಿ ತಮ್ಮ ಯೋ-ಯೋ ಟೆಸ್ಟ್​ ಅಂಕವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಹಿನ್ನಲೆ ಬಿಸಿಸಿಐ ಆಟಗಾರರು ಬೇಕಿದ್ದರೆ ಟ್ರ್ಯಾಕ್​ನಲ್ಲಿ ಓಡುವ ಫೋಟೋಗಳನ್ನು ಪೋಸ್ಟ್ ಮಾಡಬಹುದು. ಆದರೆ ಯೋ ಯೋ ಟೆಸ್ಟ್​ನಲ್ಲಿ ಪಡೆದ ಅಂಕಗಳನ್ನು ಪೋಸ್ಟ್ ಮಾಡುವುದು ನಿಯಮ ಉಲ್ಲಂಘನೆ ಎಂದು ತಿಳಿಸಿದೆ. ಹೀಗಾಗಿ ಎಲ್ಲ ಆಟಗಾರರಿಗೂ ಸ್ಪಷ್ಟ ಸಂದೇಶ ನೀಡಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ Virat Kohli: ಯೋ-ಯೋ ಟೆಸ್ಟ್ ಪಾಸ್​ ಆದ ಕೊಹ್ಲಿ; ಗಳಿಸಿದ ಅಂಕವೆಷ್ಟು?

ಯೋ-ಯೋ ಟೆಸ್ಟ್‌ ಪಾಸ್​ ಆದ ನಾಯಕ ರೋಹಿತ್​

ತಂಡದ ನಾಯಕ ರೋಹಿತ್ ಶರ್ಮಾ(Rohit Sharma) ಹಾಗೂ ಉಪ ನಾಯಕ ಹಾರ್ದಿಕ್ ಪಾಂಡ್ಯ(Hardik Pandya) ಇಬ್ಬರು ಯೋ-ಯೋ ಟೆಸ್ಟ್​ನಲ್ಲಿ ಪಾಸ್ ಆಗಿದ್ದಾರೆ ಎಂದು ತಿಳಿದುಬಂದಿದೆ. ಕೆಎಸ್‌ಸಿಎ-ಆಲೂರು ಮೈದಾನದಲ್ಲಿ ರೋಹಿತ್ ಮತ್ತು ಹಾರ್ದಿಕ್ ಪರೀಕ್ಷೆಯಲ್ಲಿ ಭಾಗವಹಿಸಿ ಯಶಸ್ವಿಯಾಗಿದ್ದಾರೆ ಎಂದು ಪಿಟಿಐ ತಿಳಿಸಿದೆ. ಆದರೆ ಗಾಯದಿಂದ ಚೇತರಿಕೆ ಕಂಡಿರುವ ಕನ್ನಡಿಗ ಕೆ.ಎಲ್​ ರಾಹುಲ್(KL Rahul)​ ಅವರು ಈ ಟೆಸ್ಟ್​ಗೆ ಒಳಪಟ್ಟಿಲ್ಲ ಎಂದು ತಿಳಿದುಬಂದಿದೆ.

ಮುಂದಿನ ವಾರ ಟೀಮ್​ ಇಂಡಿಯಾ ಲಂಕಾ ಪ್ರಯಾಣ

ಆಗಸ್ಟ್ 29ರ ವರೆಗೆ ಎನ್​ಸಿಎಯಲ್ಲಿ ಶಿಬಿರ ನಡೆಯಲಿದ್ದು ಇದು ಮುಕ್ತಾಯ ಕಂಡ ಬೆನ್ನಲ್ಲೇ ಆಟಗಾರರು ಶ್ರೀಲಂಕಾಕ್ಕೆ ಪ್ರಯಾಣಿಸಲಿದ್ದಾರೆ. ಭಾರತ ತನ್ನ ಮೊದಲ ಪಂದ್ಯವನ್ನು ಸಂಪ್ರದಾಯಿಕ ಬದ್ದ ಎದುರಾಳಿ ಪಾಕಿಸ್ತಾನ ವಿರುದ್ಧ ಸೆಪ್ಟಂಬರ್​ 2ರಂದು ಲಂಕಾದ ಕ್ಯಾಂಡಿಯಲ್ಲಿ ಆಡಲಿದೆ. ಏಷ್ಯಾಕಪ್ ಕ್ರಿಕೆಟ್ ಟೂರ್ನಿ ಆಗಸ್ಟ್ 30ರಿಂದ ಸೆಪ್ಟೆಂಬರ್ 17ರ ವರೆಗೆ ಪಾಕಿಸ್ತಾನ, ಶ್ರೀಲಂಕಾದಲ್ಲಿ ನಡೆಯಲಿದೆ. ಒಟ್ಟು 13 ಪಂದ್ಯಗಳ ಪೈಕಿ ಪಾಕಿಸ್ತಾನದಲ್ಲಿ 4 ಪಂದ್ಯಗಳು ಮತ್ತು ಶ್ರೀಲಂಕಾದಲ್ಲಿ 9 ಪಂದ್ಯಗಳು ನಡೆಯಲಿದೆ.

Exit mobile version