Site icon Vistara News

Sourav Ganguly : ಗೆಲುವಿನ ತಂಡವೊಂದನ್ನು ಕಟ್ಟಿ ವಿಶ್ವ ಕಪ್​ಗೆ ಸಜ್ಜಾಗಿ; ರೋಹಿತ್​, ದ್ರಾವಿಡ್​ಗೆ ಬಿಸಿಸಿಐ ಮಾಜಿ ಅಧ್ಯಕ್ಷರ ಸಲಹೆ

virat kohli

ಮುಂಬಯಿ : ಪ್ರವಾಸಿ ನ್ಯೂಜಿಲ್ಯಾಂಡ್​ ವಿರುದ್ಧದ ಏಕ ದಿನ ಸರಣಿಯನ್ನು ಭಾರತ ತಂಡ 3-0 ಅಂತರದಿಂದ ಕ್ಲೀನ್​ ಸ್ವೀಪ್​ ಮಾಡಿಕೊಂಡಿದೆ. ಶುಭ್​ಮನ್​ ಗಿಲ್​, ಮೊಹಮ್ಮದ್​ ಸಿರಾಜ್​ ಸೇರಿದಂತೆ ಹಲವು ಆಟಗಾರರು ಉತ್ತಮ ಪ್ರದರ್ಶನ ನೀಡುವ ಮೂಲಕ ಆಯ್ಕೆಗಾರರಿಗೆ ವಿಶ್ವಾಸ ಮೂಡಿಸಿದ್ದಾರೆ. ಇನ್ನೇನು ಆರು ತಿಂಗಳಲ್ಲಿ ಏಕ ದಿನ ವಿಶ್ವ ಕಪ್​ ಭಾರತದ ಆತಿಥ್ಯದಲ್ಲಿ ನಡೆಯುವ ಕಾರಣ ಏಕ ದಿನ ಸರಣಿಗಳ ಗೆಲುವು ಭಾರತ ತಂಡದ ವಿಶ್ವಾಸ ಹೆಚ್ಚಿಸುವುದು ಖಚಿತ. ಇದೇ ಹಿನ್ನೆಲೆಯಲ್ಲಿ ಮಾತನಾಡಿದ ಬಿಸಿಸಿಐ ಮಾಜಿ ಅಧ್ಯಕ್ಷ ಹಾಗೂ ಮಾಜಿ ನಾಯಕ ಸೌರವ್​ ಗಂಗೂಲಿ (Sourav Ganguly) ಕೋಚ್ ರಾಹುಲ್​ ದ್ರಾವಿಡ್​ ಹಾಗೂ ನಾಯಕ ರೋಹಿತ್​ ಶರ್ಮ ಗೆಲುವಿನ ತಂಡವೊಂದು ರಚಿಸಬೇಕು ಎಂಬುದಾಗಿ ಅವರು ಹೇಳಿದರು.

ಭಾರತ ತಂಡ ವಿಶ್ವ ಕಪ್ ತನಕ ಗೆಲ್ಲುತ್ತಲೇ ಹೋಗಬೇಕು. ಅದಕ್ಕೆ ಪೂರಕ ತಂಡವೊಂದನ್ನು ರಚಿಸಬೇಕು. ಜಸ್​ಪ್ರಿತ್​ ಬುಮ್ರಾ, ಶುಬ್ಮನ್ ಗಿಲ್​, ರೋಹಿತ್​ ಶರ್ಮ, ಸೂರ್ಯಕುಮಾರ್ ಯಾದವ್​, ಮೊಹಮ್ಮದ್​ ಶಮಿಯಂಥ ಹಾಗೂ ರವೀಂದ್ರ ಜಡೇಜಾ ಅವರಂಥ ಆಟಗಾರರರು ತಂಡದಲ್ಲಿ ಇರಬೇಕು. ಪದೇಪದೆ ತಂಡವನ್ನು ಬದಲಾಯಿಸುವ ಮೂಲಕ ಸಮತೋಲನ ತಪ್ಪುವಂತೆ ಆಗಬಾರದು ಎಂದು ಸೌರವ್​ ಗಂಗೂಲಿ ಹೇಳಿದರು.

ಇದನ್ನೂ ಓದಿ : Virat vs Sachin | ವಿರಾಟ್​ ಕೊಹ್ಲಿ, ಸಚಿನ್​ ತೆಂಡೂಲ್ಕರ್​ನಡುವಿನ ಹೋಲಿಕೆ ಸರಿಯಲ್ಲ ಎಂದ ಸೌರವ್​ ಗಂಗೂಲಿ

ಭಾರತ ತಂಡ ವಿಶ್ವ ಕಪ್​ ವೇಳೆಗೆ ಒತ್ತಡ ಮುಕ್ತವಾಗಿರಬೇಕು. ಸೋಲುಗಳ ಹೊರೆ ಇರಬಾರದು. ಆಕ್ರಮಣಕಾರಿ ಆಟವನ್ನು ಆಡುವಂತಾಗಬೇಕು. ಬದಲಾವಣೆ ಮತ್ತು ಅನಿವಾರ್ಯತೆಯನ್ನು ಸೃಷ್ಟಿಸಿಕೊಳ್ಳಬಾರದು. ಇದರಿಂದ ವಿಶ್ವ ಕಪ್​ನಲ್ಲಿ ಉತ್ತಮ ಪ್ರದರ್ಶನ ನೀಡುವಂತಾಗಬೇಕು ಎಂದು ಸೌರವ್​ ಗಂಗೂಲಿ ಹೇಳಿದರು.

Exit mobile version