Site icon Vistara News

Shane Watson Apologize: ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಪುಸ್ತಕ ಬಿಡುಗಡೆಗೊಳಿಸಿ ಆರ್​ಸಿಬಿ ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ ಶೇನ್​ ವಾಟ್ಸನ್

Shane Watson Apologize

ಬೆಂಗಳೂರು: ಆಸ್ಟ್ರೇಲಿಯಾ ಹಾಗೂ ಆರ್​ಸಿಬಿ ತಂಡದ ಮಾಚಿ ಆಟಗಾರ ಶೇನ್​ ವಾಟ್ಸನ್(Shane Watson)​ ಅವರು ಇಂದು(ಮಂಗಳವಾರ) ಬೆಂಗಳೂರಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ(Presidency University in Bengaluru) ‘ವ್ಯಾಟ್ಸನ್​ ದಿ ವಿನ್ನರ್ಸ್ ಮೈಂಡ್ ಸೆಟ್’ ಎನ್ನುವ ಪುಸ್ತಕವನ್ನು ಬಿಡುಗಡೆ ಮಾಡಿದರು. ಇದೇ ವೇಳೆ 2016ರ ಫೈನಲ್​ನಲ್ಲಿ ಕಳಪೆ ಪ್ರದರ್ಶನ ತೋರಿದ್ದಕ್ಕೆ ಆರ್​ಸಿಬಿ ಅಭಿಮಾನಿಗಳಲ್ಲಿ ಕ್ಷಮೆ(Shane Watson Apologize) ಕೇಳಿದ್ದಾರೆ. ಇದರ ವಿಡಿಯೊ ವೈರಲ್​ ಆಗಿದೆ.


ಪುಸ್ತಕ ಬಿಡಿಗಡೆಗೊಳಿಸಿದ ಬಳಿಕ ಮಾತನಾಡಿದ ವಾಟ್ಸನ್​, ಕಾಲೇಜಿಗೆ ಭೇಟಿ ನೀಡಿರುವುದು ನಿಜಕ್ಕೂ ಅದ್ಭುತ. ವಿದ್ಯಾರ್ಥಿಗಳು ಕ್ರಿಕೆಟ್​ ಆಡುವ ಮತ್ತು ವೀಕ್ಷಿಸುವ ಜತೆಗೆ ಶಿಕ್ಷಣದಲ್ಲಿಯೂ ಗಮನಹರಿಸಿ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಇದೇ ವೇಳೆ ವಾಟ್ಸನ್​ ತಮ್ಮ ವಿದ್ಯಾರ್ಥಿ ಜೀವನದ ದಿನಗಳನ್ನು ಮೆಲುಕು ಹಾಕಿದರು.

ಬೆಂಗಳೂರಿನ ಬಗ್ಗೆಯೂ ಅನುಭವ ಹಂಚಿಕೊಂಡ ಅವರು, ಆರ್​ಸಿಬಿ ತಂಡಕ್ಕೆ ಇಲ್ಲಿ ಸಿಕ್ಕಪಟ್ಟೇ ಕ್ರೇಜಿ ಫ್ಯಾನ್ಸ್​ ಇದ್ದಾರೆ. ನಾನು ಕೂಡ ಈ ತಂಡದ ಪರ ಆಡಿರುವ ಕಾರಣ ಬೆಂಗಳೂರು ಮತ್ತು ಇಲ್ಲಿನ ಜನರ ನಂಟು ಈಗಲೂ ಇದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಡಿದ ಕ್ಷಣಗಳು ಅವಿಸ್ಮರಣೀಯ. ಆದರೆ ನನ್ನ ಮನಸ್ಸಲ್ಲಿ ಈಗಲೂ ಇರುವ ನೋವೆಂದರೆ 2016ರ ಐಪಿಎಲ್​ ಫೈನಲ್​ನಲ್ಲಿ ನಾನು ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲವಾದದ್ದು. ನಾನು ಆಡುತ್ತಿದ್ದರೆ ಆರ್​ಸಿಬಿ ಕಪ್​ ಗೆಲ್ಲುತ್ತಿತ್ತು. ಇದೇ ವಿಚಾರವಾಗಿ ನಾನು ನಿಮ್ಮಲ್ಲಿ ಕ್ಷಮೆ ಕೋರುತ್ತೇನೆ ಎಂದು ಹೇಳಿದರು. ಆ ಫೈನಲ್​ ಪಂದ್ಯದಲ್ಲಿ ವಾಟ್ಸನ್​ 11 ರನ್​ ಗಳಿಸಿ ಔಟಾಗಿದ್ದರು.

ಇದನ್ನೂ ಓದಿ RCB IPL Records: ಕಳೆದ 16 ಆವೃತ್ತಿಯ ಐಪಿಎಲ್​ನಲ್ಲಿ ಆರ್​ಸಿಬಿ ಎಷ್ಟು ಬಾರಿ ಪ್ಲೇ ಆಫ್​ಪ್ರವೇಶಿಸಿದೆ?: ತಂಡದ ದಾಖಲೆ ಹೇಗಿದೆ?


ಈ ಬಾರಿ ಆರ್​ಸಿಬಿ ತಂಡ ಉತ್ತಮವಾಗಿ ಆಡಿದೆ. ಆರಂಭಿಕ ಹಂತದಲ್ಲಿ 7 ಸೋಲು ಕಂಡರೂ ಕೂಡ ಆ ಬಳಿಕ ಸತತವಾಗಿ 6 ಮತ್ತು ಒಟ್ಟಾರೆ 7 ಗೆಲುವಿನೊಂದಿಗೆ ಪ್ಲೇ ಆಫ್​ ಪ್ರವೇಶಿಸಿದೆ. ನಾಳೆ ರಾಜಸ್ಥಾನ್​ ವಿರುದ್ಧ ಆಡಲಿದೆ. ತಂಡಕ್ಕೆ ಶುಭವಾಗಲಿ ಎಂದು ಹಾರೈಸಿದರು. ಇದೇ ವೇಳೆ ಯೂನಿವರ್ಸಿಟಿ ಕ್ಯಾಂಪಸ್‌ನಲ್ಲಿ ಕುಲಪತಿ ಡಾ. ನಿಸ್ಸಾರ್ ಅಹಮದ್ ಜತೆ ವಾಟ್ಸನ್​ ಕ್ರಿಕೆಟ್ ಆಡಿ ಸಂಭ್ರಮಿಸಿದರು.


ಸದ್ಯ ನಿವೃತ್ತಿ ಜೀವನ ನಡೆಸುತ್ತಿರುವ ವಾಟ್ಸನ್​ ಕ್ರಿಕೆಟ್​ ಕಾಮೆಂಟ್ರಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಐಪಿಎಲ್​ ಮಾತ್ರವಲ್ಲದೆ ಇತರ ಕ್ರಿಕೆಟ್​ ಲೀಗ್ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್​ ಪಂದ್ಯಗಳ ಕಾಮೆಂಟ್ರಿ ಮಾಡುತ್ತಿದ್ದಾರೆ. ‘ವ್ಯಾಟ್ಸನ್​ ದಿ ವಿನ್ನರ್ಸ್ ಮೈಂಡ್ ಸೆಟ್’ ಈ ಪುಸ್ತಕದಲ್ಲಿ ಆರ್​ಸಿಬಿ ಮತ್ತು ಐಪಿಎಲ್​ ಕುರಿತ ವಿಚಾರವು ಅಡಕವಾಗಿದೆ.

Exit mobile version