Site icon Vistara News

Gautam Gambhir: ರಾಹುಲ್​ ಶರ್ಮ ಅವರ ಅತ್ತೆಯ ಶಸ್ತ್ರಚಿಕಿತ್ಸೆಗೆ ನೆರವಾದ ಗಂಭೀರ್

Gautam Gambhir

ನವದೆಹಲಿ: ಟೀಮ್​ ಇಂಡಿಯಾದ ಮಾಜಿ ಸ್ಪಿನ್ನರ್​ ರಾಹುಲ್​ ಶರ್ಮ(Rahul Sharma) ಅವರ ಅತ್ತೆಯ ಶಸ್ತ್ರಚಿಕಿತ್ಸೆಗೆ ನೆರವಾಗುವ ಮೂಲಕ ಗೌತಮ್​ ಗಂಭೀರ್​ ಅವರು ಔದಾರ್ಯ ಮೆರೆದಿದ್ದಾರೆ. ಅತ್ತೆಯ ಚಿಕಿತ್ಸೆಗೆ ಸಹಕರಿಸಿದ ವಿಚಾರವನ್ನು ರಾಹುಲ್​ ಶರ್ಮ ಅವರು ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ರಾಹುಲ್​ ಶರ್ಮ ಅವರ ಅತ್ತೆ ಮೆದುಳಿನ ರಕ್ತಸ್ರಾವ ಸಮಸ್ಯೆಯಿಂದ ಬಳಲುತ್ತಿದ್ದರು. ಕಳೆದ ವಾರ ಅವರ ಸ್ಥಿತಿ ತೀರಾ ಚಿಂತಾಜನಕವಾಗಿತ್ತು. ಈ ವೇಳೆ ಗೌತಮ್​ ಗಂಭೀರ್​ ಅವರು ಕ್ಲಿಪ್ತ ಸಮಯದಲ್ಲಿ ನರೆವಿಗೆ ಧಾವಿಸಿ ಶಸ್ತ್ರಚಿಕಿತ್ಸೆಗೆ ಬೇಕಾದ ಎಲ್ಲ ವ್ಯವಸ್ಥೆಯನ್ನು ಮಾಡಿದ್ದಾರೆ. ಗಂಭೀರ್(Gautam Gambhir)​ ಅವರ ಈ ನೆರವಿನಿಂದ ರಾಹುಲ್​ ಶರ್ಮ ಅತ್ತೆಗೆ ಯಶಸ್ವಿ ಶಸ್ತ್ರಚಿಕಿತ್ಸೆಯಾಗಿದೆ. ಸದ್ಯ ಅವರು ಚೇತರಿಕೆ ಕಾಣುತ್ತಿದ್ದಾರೆ.

ಕಷ್ಟದ ಸಮಯದಲ್ಲಿ ನೆರವಿಗೆ ಬಂದ ಗಂಭೀರ್​ ಅವರಿಗೆ ರಾಹುಲ್​ ಶರ್ಮ ಧನ್ಯವಾದ ತಿಳಿಸಿದ್ದಾರೆ. “ನನ್ನ ಅತ್ತೆ ಮೆದುಳಿನ ರಕ್ತಸ್ರಾವದಿಂದ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದರು. ಈ ಸಮಯದಲ್ಲಿ ಗಂಭೀರ್​ ಅವರು ನನಗೆ ದೇವರಂತೆ ಸಹಾಯಕ್ಕೆ ಬಂದು ನನ್ನ ಅತ್ತೆಯ ಜೀವವನ್ನು ಉಳಿಸುವಂತೆ ಮಾಡಿದರು. ಅವರ ಈ ನೆರವಿಗೆ ನಾನು ಯಾವತ್ತೂ ಚಿರಋಣಿಯಾಗಿರುತ್ತೇನೆ” ಎಂದು ಅತ್ತೆಯ ಶಸ್ತ್ರಚಿಕಿತ್ಸೆಯ ಫೋಟೊವನ್ನು ಹಂಚಿಕೊಂಡು ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ IPL 2023: ಗಂಭೀರ್​ಗೆ ವಿಶೇಷ ಸಂದೇಶ ರವಾನಿಸಿದ ಕೊಹ್ಲಿ; ವಿಡಿಯೊ ವೈರಲ್

ಗಂಭೀರ್​ ಅವರು ಎಷ್ಟೇ ಮುಂಗೋಪಿಯಾಗಿದ್ದರೂ, ಕಷ್ಟದ ಕಾಲದಲ್ಲಿ ಸದಾ ಮುಂದಿರುತ್ತಾರೆ. ಬಿಜೆಪಿ ಸಂಸದನೂ ಆಗಿರುವ ಗಂಭೀರ್​ ಪೂರ್ವ ದೆಹಲಿಯ ಬಡವರ ಹಸಿವನ್ನು ನೀಗಿಸುವ ಸಲುವಾಗಿ ಕೇವಲ ಒಂದು ರೂ.ಗೆ ಊಟ ಸಿಗುವ 2 ಕ್ಯಾಂಟೀನ್ ನಡೆಸುತ್ತಿದ್ದಾರೆ. ಈ ಮೂಲಕ ಬಡವರ ಪಾಲಿಗೆ ಅನ್ನದಾಸೋಹಿಯಾಗಿದ್ದಾರೆ. ವಿಶೇಷ ಎಂದರೆ ಗಂಭೀರ್ ಈ ಕ್ಯಾಂಟೀನ್‍ಗೆ ಸಂಸದೀಯ ಅನುದಾನವನ್ನು ಬಳಸದೇ ತಮ್ಮದೇ ಸ್ವಂತ ಹಣವನ್ನು ವ್ಯಯಿಸಿ ಕ್ಯಾಂಟೀನ್ ನಡೆಸುತ್ತಿದ್ದಾರೆ. ಇಲ್ಲಿನ ಆಹಾರವು ಪೌಷ್ಠಿಕತೆಯಿಂದ ಕೂಡಿದ್ದು, ನೈರ್ಮಲ್ಯಕ್ಕೆ ಹೆಚ್ಚು ಒತ್ತು ಕೊಡಲಾಗಿದೆ.

Exit mobile version