Site icon Vistara News

INDvsPAK : ಭಾರತ ವಿರುದ್ಧದ ಪಂದ್ಯದ ವೇಳೆ ಪಾಕಿಸ್ತಾನದ ನಾಯಕ ಬಾಬರ್​ ಅಜಮ್​ ಹೆದರಿದ್ದರು ಎಂದ ರಿಕಿ ಪಾಂಟಿಂಗ್​

Ricky Ponting opposes impact player rule; What is their argument?

ಮುಂಬಯಿ : ಭಾರತ ಹಾಗೂ ಪಾಕಿಸ್ತಾನ (INDvsPAK) ತಂಡಗಳ ನಡುವಿನ ಟಿ20 ವಿಶ್ವ ಕಪ್​ ಪಂದ್ಯ ಭಾರತ ಕ್ರಿಕೆಟ್​ ಅಭಿಮಾನಿಗಳ ಮನದಲ್ಲಿ ಇನ್ನೂ ಅಚ್ಚಾಗಿಯೇ ಉಳಿದಿದೆ. ಅದರಲ್ಲೂ ವಿರಾಟ್​ ಕೊಹ್ಲಿ (Virat Kohli) ಬಾರಿಸಿದ ಅಜೇಯ 82 ರನ್​ಗಳು ಅವರ ಹಾಗೂ ಭಾರತ ಕ್ರಿಕೆಟ್​ ಇತಿಹಾಸದ ಅವಿಸ್ಮರಣೀಯ ಇನಿಂಗ್ಸ್​ಗಳಲ್ಲೊಂದು. ಅಂದಿನ ಪಂದ್ಯದ ರೋಚಕತೆ ಜಾಗತಿಕ ಕ್ರಿಕೆಟ್​ ಕಾರಿಡಾರ್​ನಲ್ಲಿ ಜೋರು ಸದ್ದು ಮಾಡಿತ್ತು. ಇಡಿ ವಿಶ್ವ ಕಪ್​ನಲ್ಲಿ (t20 world cup) ಅಷ್ಟೊಂದು ಸುಂದರವಾದ ಪಂದ್ಯ ನಡೆದೇ ಇರಲಿಲ್ಲ ಎಂದೆಲ್ಲ ಬಣ್ಣಿಸಲಾಗಿದೆ. ಅದೇ ರೀತಿ ಇನಿಂಗ್ಸ್​ನ ಕೊನೇ ಓವರ್​ನಲ್ಲಿ ಭಾರತ ತಂಡ ತನಗೆ ಬೇಕಾಗಿದ್ದ 16 ರನ್​ಗಳನ್ನು ಗಳಿಸಿದ ರೀತಿಯೂ ಅಪರೂಪದ್ದು. ಈ ಬಗ್ಗೆ ಹಿರಿಯ ಕ್ರಿಕೆಟಿಗರನೇಕರು ನಾನಾ ಬಗೆಯ ವಿಶ್ಲೇಷಣೆ ನೀಡಿದ್ದಾರೆ. ಅಂತೆಯೇ ಇದೀಗ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್​ (Ricky Ponting) ಕೂಡ ಒಂದು ವಿವರಣೆ ಕೊಟ್ಟಿದ್ದಾರೆ.

ಆಸ್ಟ್ರೇಲಿಯಾ ತಂಡದ ಯಶಸ್ವಿ ನಾಯಕ ಹಾಗೂ ಹಾಲಿ ಐಪಿಎಲ್​ನ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಹೆಡ್​ ಕೋಚ್ ಆಗಿರುವ ರಿಕಿ ಪಾಂಟಿಂಗ್ ಪ್ರಕಾರ ಅಂದಿನ ಪಂದ್ಯದಲ್ಲಿ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್​ (Babar azam) ಸಿಕ್ಕಾಪಟ್ಟೆ ಗೊಂದಲಕ್ಕೆ ಬಿದ್ದಿದ್ದರು. ಭಾರತ ತಂಡವನ್ನು ಎದುರಿಸುವಾಗ ಅವರು ತಲ್ಲಣಿಸಿದರು. ಅದೇ ಕಾರಣಕ್ಕೆ ವೈಫಲ್ಯ ಕಂಡರು ಎಂದು ಪಾಂಟಿಂಗ್​ ಹೇಳಿದ್ದಾರೆ. ಸಹ ಆಟಗಾರರರು ಅವರನ್ನು ಸಮಾಧಾನ ಮಾಡುತ್ತಿದ್ದ ಹೊರತಾಗಿಯೂ ಅವರು ದಿಕ್ಕು ತೋಚದಂತೆ ವರ್ತಿಸುತ್ತಿದ್ದರು ಎಂಬುದಾಗಿ ರಿಕಿ ಪಾಂಟಿಂಗ್​ ಐಸಿಸಿ ಜತೆ ಮಾತನಾಡುತ್ತಾ ಹೇಳಿದ್ದಾರೆ.

ಭಾರತ ತಂಡದಕ್ಕೆ ಕೊನೇ ಓವರ್​ನಲ್ಲಿ 16 ರನ್​ಗಳು ಬೇಕಾಗಿದ್ದವು. ವೇಗದ ಬೌಲರ್​ಗಳ ಸ್ಪೆಲ್​ಗಳು ಮುಗಿದು ಹೋಗಿದ್ದವು. ಹೀಗಾಗಿ ಮೊಹಮ್ಮದ್ ನವಾಜ್​ ಕೈಗೆ ಚೆಂಡು ಕೊಡುವುದು ಅನಿವಾರ್ಯವಾಯಿತು. ಈ ವೇಳೆಯೇ ಅವರು ಹೆದರಿಕೊಂಡಿದ್ದರು. ಅದೇ ರೀತಿ ನವಾಜ್​ ನೋ ಬಾಲ್ ಹಾಕಿದ ಬಳಿಕ ಅವರ ಭಯ ಇನ್ನಷ್ಟು ಹೆಚ್ಚಾಯಿತು. ಬಳಿಕದ ಚೆಂಡು ವಿಕೆಟ್​ಗೆ ಬಡಿದು ಬೌಂಡರಿ ಗೆರೆಗೆ ಬಡಿಯಿತು. ಈ ವೇಳೆಯೂ ಅವರು ಅಂಪೈರ್​ಗಳ ಬಳಿ ವಾದಕ್ಕೆ ನಿಂತರು. ಶಾದಬ್​ ಖಾನ್​ ಸೇರಿದಂತೆ ಹಲವರು ಅವರನ್ನು ಸಮಾಧಾನ ಮಾಡಲು ಮುಂದಾದರೂ ನಿಯಂತ್ರಣಕ್ಕೆ ಬಂದಿಲ್ಲ ಎಂಬುದಾಗಿ ಪಾಂಟಿಂಗ್​ ಹೇಳಿದ್ದಾರೆ.

ಇದನ್ನೂ ಓದಿ : Virat Kohli: ವಿಮೆನ್ಸ್‌ ಪ್ರೀಮಿಯರ್‌ ಲೀಗ್‌: ತಂಡ ಖರೀದಿಗೆ ಸಂತಸ ವ್ಯಕ್ತಪಡಿಸಿದ ವಿರಾಟ್​ ಕೊಹ್ಲಿ

ಬಾಬರ್ ಅಜಮ್​ ನಾಯಕತ್ವದ ವಿಚಾರದಲ್ಲಿ ಇನ್ನಷ್ಟು ಸುಧಾರಣೆ ಕಂಡುಕೊಳ್ಳಬೇಕು ಎಂಬುದಾಗಿ ಇದೇ ವೇಳೆ ಬಾಬರ್ ಅಜಮ್​ ಹೇಳಿದರು. ಅವರ ಬ್ಯಾಟಿಂಗ್ ಕೌಶಲ ಅದ್ಭುತ. ಅವರ ಆಟವನ್ನು ನೋಡುವುದು ಕೂಡ ಚಂದ. ಆದರೆ, ನಾಯಕತ್ವದ ವಿಚಾರಕ್ಕೆ ಬಂದಾಗ ಇನ್ನಷ್ಟು ತಂತ್ರಗಳನ್ನು ಕಲಿತುಕೊಳ್ಳಬೇಕು ಎಂದು ಪಾಂಟಿಂಗ್​ ಹೇಳಿದ್ದಾರೆ.

Exit mobile version