Site icon Vistara News

WTC Final 2023 : ಭಾರತವೇ ಗೆಲ್ಲುತ್ತದೆ ಎಂಬ ಆರ್​ಸಿಬಿ ಮಾಜಿ ಆಟಗಾರನ ಭವಿಷ್ಯ ನಿಜವಾಗುವುದೇ?

ABD Villiers

#image_title

ನವದೆಹಲಿ: ಜೂನ್ 7ರಂದು ಲಂಡನ್ನ ಓವಲ್​ನಲ್ಲಿ ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ 2023ರ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್​​ಷಿಪ್​​ (ಡಬ್ಲ್ಯುಟಿಸಿ) (WTC Final 2023) ಫೈನಲ್ ಪಂದ್ಯದಲ್ಲಿ ಗೆಲ್ಲಲು ಭಾರತಕ್ಕೆ ಹೆಚ್ಚಿನ ಅವಕಾಶವಿದೆ ಎಂದು ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಹಾಗೂ ಆರ್​ಸಿಬಿ ಸ್ಫೋಟಕ ಬ್ಯಾಟರ್​​ ಎಬಿ ಡಿವಿಲಿಯರ್ಸ್ ಅಭಿಪ್ರಾಯಪಟ್ಟಿದ್ದಾರೆ. ಪ್ಯಾಟ್ ಕಮಿನ್ಸ್ ನೇತೃತ್ವದ ಆಸ್ಟ್ರೇಲಿಯಾ ತಂಡವು ತಮ್ಮ ಮೊದಲ ವಿಶ್ವ ಟೆಸ್ಟ್​ ಚಾಂಪಿಯನ್​​ಷಿಪ್​ ಫೈನಲ್ ಪಂದದಲ್ಲಿ ಆಡುತ್ತಿದೆ. ಉದ್ಘಾಟನಾ ಆವೃತ್ತಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋತ ನಂತರ ಭಾರತ ತಂಡಕ್ಕೆ ಇದು ಎರಡನೇ ಫೈನಲ್ ಪಂದ್ಯವಾಗಿದೆ.

ಡಬ್ಲ್ಯುಟಿಸಿ ಫೈನಲ್​​ಗೆ ನೆಚ್ಚಿನ ಆಟಗಾರನನ್ನು ಆಯ್ಕೆ ಮಾಡುವುದು ತನಗೆ ಸಾಕಷ್ಟು ಕಷ್ಟ ಎಂದು ಡಿವಿಲಿಯರ್ಸ್ ಹೇಳಿದ್ದಾರೆ. ಭಾರತ ಮತ್ತು ಆಸ್ಟ್ರೇಲಿಯಾ ಎರಡೂ ತಂಡಗಳು ಇತ್ತೀಚಿನ ದಿನಗಳಲ್ಲಿ ದೀರ್ಘ ಅವಧಿಯ ಕ್ರಿಕೆಟ್​​ನಲ್ಲಿ ಹೆಚ್ಚು ಪಂದ್ಯಗಳನ್ನು ಆಡಿಲ್ಲ. ಆದರೆ ಭಾರತವು ಹಿಂದಿನ ಬಾರಿ ಆಸ್ಟ್ರೇಲಿಯಾಗೆ ಪ್ರವಾಸ ಬಂದಿದ್ದಾಗ ಪ್ರಬಲ ಇಂಗ್ಲೆಂಡ್ ತಂಡವನ್ನು ಸೋಲಿಸಿದ್ದರಿಂದ ಮತ್ತೆ ಗೆಲ್ಲುವ ಹೆಚ್ಚಿನ ಅವಕಾಶ ಹೊಂದಿದೆ ಎಂದು ಹೇಳಿದರು.

ಏಕೈಕ ಟೆಸ್ಟ್​ ಪಂದ್ಯದ ಐದನೇ ದಿನದಂದು ಭಾರತ ತಂಡವು ಮೇಲುಗೈ ಸಾದಿಸಲಿದೆ ಎಂಬುದಾಗಿಯೂ ಲೆಜೆಂಡರಿ ವಿಕೆಟ್​​ಕೀಪರ್ ವಿಲಿಯರ್ಸ್ ಹೇಳಿದ್ದಾಋಎ. ಪಂದ್ಯದ ಕೊನೆಯ ಹಂತಗಳಲ್ಲಿ ಭಾರತೀಯ ಸ್ಪಿನ್ನರ್​ಗಳು ನಿರ್ಣಾಯಕವಾಗುತ್ತಾರೆ ಎಂದು 39 ವರ್ಷದ ಆಟಗಾರ ಅಭಿಪ್ರಾಯಪಟ್ಟಿದ್ದಾರೆ.

“ಟೆಸ್ಟ್ ಪಂದ್ಯದ ಐದನೇ ದಿನದಂದು ಭಾರತವು ಅಗ್ರಸ್ಥಾನವನ್ನು ಪಡೆಯುತ್ತದೆ ಎಂದು ನಾನು ಭಾವಿಸುತ್ತೇನೆ. ಇದು ಎಲ್ಲಾ ರೀತಿಯಲ್ಲಿ ಭಾರತಕ್ಕೆ ಅನುಕೂಲಕರ ಎಂದುನಾನು ಭಾವಿಸುತ್ತೇನೆ. ಇದು ಬ್ಯಾಟಿಂಗ್ ಮಾಡಲು ಉತ್ತಮ ಪಿಚ್​. ಆದರೆ ಟೆಸ್ಟ್ ಪಂದ್ಯದ ಕೊನೆಯ ಹಂತಗಳಲ್ಲಿ ಭಾರತೀಯ ಸ್ಪಿನ್ನರ್​​ಗಳು ಪ್ರಭಾವ ಬೀರುತ್ತಾರೆ ಎಂದು ನಾನು ಭಾವಿಸುತ್ತೇನೆ,” ಎಂದು ಮಾಜಿ ಮಾಜಿ ಆರ್​ಸಿಬಿ ಆಟಗಾರ ಹೇಳಿದ್ದಾರೆ.

ಕೊಹ್ಲಿಯೇ ಸ್ಟಾರ್​

ಪಂದ್ಯದಲ್ಲಿ ಪ್ರಭಾವ ಬೀರಬಹುದಾದ ಭಾರತೀಯ ಬ್ಯಾಟ್ಸ್​ಮನ್ ಅನ್ನು ಆಯ್ಕೆ ಮಾಡುವಂತೆ ಕೇಳಿದಾಗ, ವಿಲಿಯರ್ಸ್​ ವಿರಾಟ್​ ಕೊಹ್ಲಿಯ ಹೆಸರು ಹೇಳಿದರು. ವಿರಾಟ್​ ಎಲ್ಲೇ ಆಡಿದರೂ ತಮ್ಮ ಸಾಮರ್ಥ್ಯ ಸಾಬೀತು ಮಾಡುತ್ತಾರೆ ಎಂದು ಅವರು ಹೇಳಿದರು. ತಮ್ಮ ಆಪ್ತ ಸ್ನೇಹಿತ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ಸಹ ಆಟಗಾರ ಇಂಗ್ಲೆಂಡ್​​ನಲ್ಲಿ ಉತ್ತಮ ಪ್ರದರ್ಶನ ನೀಡುವುದನ್ನು ನಾನು ಎದುರು ನೋಡುತ್ತಿದ್ದೇನೆ ಎಂಬುದಾಗಿ ವಿಲಿಯರ್ಸ್​ ಹೇಳಿದ್ದಾರೆ.

ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಸೇರಿದಂತೆ ಎಲ್ಲ ಪಿಚ್​​ಗಳಲ್ಲಿ ಮಿಂಚಬಲ್ಲವರು ವಿರಾಟ್​ ಕೊಹ್ಲಿ. ಅವರು ಕ್ರಿಕೆಟ್ ಆಟವನ್ನು ಆನಂದಿಸುವುದನ್ನು ನೋಡುವದೇ ಅದ್ಭುತ. ಅವರು ಮತ್ತೆ ಇಂಗ್ಲೆಂಡ್​ನಲ್ಲಿ ಉತ್ತಮವಾಗಿ ಬ್ಯಾಟಿಂಗ್ ಮಾಡುವುದರಲ್ಲಿ ಅನುಮಾನವೇ ಇಲ್ಲ ಎಂದ ಬಲಗೈ ಬ್ಯಾಟರ್ ಅಭಿಮಾನದಿಂದ ಹೇಳಿದರು.

ಇದನ್ನೂ ಓದಿ : WTC Final 2023: ಭಾರತ ತಂಡಕ್ಕೆ ಆಘಾತ; ಸ್ಟಾರ್​ ಆಟಗಾರನಿಗೆ ಗಾಯ, ಫೈನಲ್​ಗೆ ಅನುಮಾನ

ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರ ಅನುಪಸ್ಥಿತಿ ರೋಹಿತ್ ಶರ್ಮಾ ನೇತೃತ್ವದ ತಂಡಕ್ಕೆ ದೊಡ್ಡ ನಷ್ಟವಾಗಿದೆ ಎಂದೂ ಅವರು ಹೇಳಿದ್ದಾರೆ. ಆದರೆ ಏಕೈಕ್​ ಟೆಸ್ಟ್​​​ನಲ್ಲಿ ಭಾರತದ ಬೌಲಿಂಗ್ ದಾಳಿಯಲ್ಲಿ ಮೊಹಮ್ಮದ್ ಸಿರಾಜ್ ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬುಮ್ರಾ ಅಲಭ್ಯತೆ ಭಾರತೀಯ ಬೌಲಿಂಗ್ ವಿಭಾಗಕ್ಕೆ ದೊಡ್ಡ ನಷ್ಟ. ಮೊಹಮ್ಮದ್ ಸಿರಾಜ್ ಕೊರತೆ ನಿಭಾಯಿಸಲಿದ್ದಾರೆ ಎಂದು ನಾನು ಭಾವಿಸುತ್ತೇನೆ. ಅವರು ಉತ್ತಮ ಫಾರ್ಮ್​ನಲ್ಲಿದ್ದಾರೆ. ಅವರು ಹೆಚ್ಚುವರಿ ವೇಗದ ದಾಳಿಯ ಹೊಣೆಯನ್ನು ವಹಿಸಲಿದ್ದಾರೆ. ಭಾರತದ ಬೌಲಿಂಗ್ ದಾಳಿಗೆ ಅವರು ಉತ್ತಮ ಆಸ್ತಿ ಎಂಬುದಾಗಿ ವಿಲಿಯರ್ಸ್​ ಹೇಳಿದ್ದಾರೆ.

Exit mobile version