Site icon Vistara News

World Cup 2023 : ಭಾರತ, ಪಾಕ್ ಸೆಮಿಫೈನಲ್​ಗೇರಿದರೆ ಮತ್ತೆ ಪಂದ್ಯದ ತಾಣ ಬದಲಾಗೋದು ಖಚಿತ! ಯಾಕೆ ಗೊತ್ತೇ?

India Pakistan Cricket

#image_title

ಮುಂಬಯಿ : ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಜೂನ್​ 27ಂದು ಮುಂಬರುವ ಪುರುಷರ ಏಕದಿನ ಕ್ರಿಕೆಟ್ ವಿಶ್ವಕಪ್ 2023ರ ವೇಳಾಪಟ್ಟಿ ಪ್ರಕಟಿಸಿದೆ. ಅಕ್ಟೋಬರ್ 5ರಿಂದ ನವೆಂಬರ್ 19 ರವರೆಗೆ 10 ತಾಣಗಳಲ್ಲಿ ಪಂದ್ಯಾವಳಿ ನಡೆಯಲಿದ್ದು, ಇದುವರೆಗಿನ ಅತಿದೊಡ್ಡ ವಿಶ್ವಕಪ್ ಎನಿಸಿಕೊಳ್ಳಲಿದೆ. ಈ ಟೂರ್ನಿಯಲ್ಲಿ ಹತ್ತು ತಂಡಗಳು ಭಾಗವಹಿಸಲಿವೆ. ಅಹಮದಾಬಾದ್​​ನ ನರೇಂದ್ರ ಮೋದಿ ಸ್ಟೇಡಿಯಂ ಟೂರ್ನಿಯ ಆರಂಭಿಕ ಮತ್ತು ಫೈನಲ್ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ. ಬೆಂಗಳೂರು, ಚೆನ್ನೈ, ದೆಹಲಿ, ಧರ್ಮಶಾಲಾ, ಹೈದರಾಬಾದ್, ಕೋಲ್ಕತಾ, ಲಕ್ನೋ, ಮುಂಬೈ ಮತ್ತು ಪುಣೆಯಲ್ಲಿ ಉಳಿದ ಪಂದ್ಯಗಳು ನಡೆಯಲಿವೆ. ಏತನ್ಮಧ್ಯೆ, ಹೈದರಾಬಾದ್ ಜೊತೆಗೆ ಗುವಾಹಟಿ ಮತ್ತು ತಿರುವನಂತಪುರಂ ಅಭ್ಯಾಸ ಪಂದ್ಯಗಳಿಗೆ ತಾಣಗಳಾಗಿವೆ.

ಅಹ್ಮದಾಬಾದ್​ನಲ್ಲಿ ಅಕ್ಟೋಬರ್​ 15ರಂದು ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ವೇಳಾಪಟ್ಟಿಯ ಕೇಂದ್ರ ಬಿಂದುವಾಗಿತ್ತು. ಅಕ್ಟೋಬರ್ 8ರಂದು ಚೆನ್ನೈನಲ್ಲಿ ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ಮತ್ತು ಅಕ್ಟೋಬರ್ 11ರಂದು ನವದೆಹಲಿಯಲ್ಲಿ ಅಫ್ಘಾನಿಸ್ತಾನವನ್ನು ಎದುರಿಸಿದ ನಂತರ ರೋಹಿತ್ ಶರ್ಮಾ ನೇತೃತ್ವದ ತಂಡವು ಪಾಕ್​ ವಿರುದ್ಧ ಸೆಣಸಾಡಲಿದೆ. ಮತ್ತೊಂದೆಡೆ, ಪಾಕಿಸ್ತಾನವು ಅಕ್ಟೋಬರ್ 6 ಮತ್ತು 12 ರಂದು ಹೈದರಾಬಾದ್​ನಲ್ಲಿ ನಡೆಯಲಿರುವ ಎರಡು ಹಣಾಹಣಿಗಳಲ್ಲಿ ಅರ್ಹತಾ ಸುತ್ತಿನಿಂದ ಪಂದ್ಯಗಳ ವಿರುದ್ಧ ಆಡಲಿದೆ.

ಇದನ್ನೂ ಓದಿ : World Cup 2023 : ವೇಳಾಪಟ್ಟಿ ಪ್ರಕಟಗೊಂಡಿದ್ದರೂ ಪಾಕಿಸ್ತಾನ ತಂಡ ಬರುವುದು ಖಾತರಿಯಿಲ್ಲ!

2023 ರ ವಿಶ್ವಕಪ್​ನಲ್ಇ ಭಾರತವು ಒಟ್ಟು 10 ಸ್ಥಳಗಳಲ್ಲಿ ಒಂಬತ್ತರಲ್ಲಿ ಆಡಲಿದೆ. ಪಾಕಿಸ್ತಾನದ ಅಭಿಯಾನವು ಹೈದರಾಬಾದ್, ಚೆನ್ನೈ, ಬೆಂಗಳೂರು, ಕೋಲ್ಕತಾ ಮತ್ತು ಅಹಮದಾಬಾದ್ ಐದು ಸ್ಥಳಗಳಿಗೆ ಮಾತ್ರ ಸೀಮಿತವಾಗಿದೆ. ಆದಾಗ್ಯೂ, ಭಾರತ ಮತ್ತು ಪಾಕಿಸ್ತಾನ ಎರಡೂ ಸೆಮಿಫೈನಲ್ ಪ್ರವೇಶಿಸಿದರೆ ಮತ್ತೆ ತಾಣ ಬದಲಾವಣೆಯ ಪ್ರಸಂಗ ಶುರುವಾಗಲಿದೆ. ಭಾರತವೇನಾದರೂ ಸೆಮಿಫೈನಲ್​​ಗೇರಿದರೆ ಆ ಪಂದ್ಯವನ್ನು ಮುಂಬಯಿಯನ್ನು ಆಯೋಜಿಸುವುದು ಬಿಸಿಸಿಐ ಗುರಿ. ಆದರೆ, ಭಾರತ ಮತ್ತು ಪಾಕ್​ ತಂಡ ಮುಖಾಮುಖಿಯಾಗುವುದಾದರೆ ಅದು ಸಾಧ್ಯವಿಲ್ಲ. ಪಾಕಿಸ್ತಾನ ತಂಡ ಮುಂಬಯಿ ನಗರವನ್ನು ಯಾವತ್ತೂ ಆಯ್ಕೆ ಮಾಡಿಕೊಳ್ಳುವುದಿಲ್ಲ. ಹೀಗಾಗಿ ಕೋಲ್ಕೊತಾದಲ್ಲಿ ಪಂದ್ಯ ನಡೆಸಬೇಕಾಗುತ್ತದೆ. ಕೋಲ್ಕೊತಾದಲ್ಲಿ ನಿಗದಿಯಾಗಬೇಕಾಗಿರುವ ಪಂದ್ಯ ಮುಂಬಯಿಗೆ ಬರಲಿದೆ.

ವೇಳಾಪಟ್ಟಿಯಲ್ಲೇನಿದೆ?

ಮಂಗಳವಾರ ಬಿಡುಗಡೆಯಾದ ವೇಳಾಪಟ್ಟಿ ಪ್ರಕಾರ, ಮುಂಬೈನ ವಾಂಖೆಡೆ ಕ್ರೀಡಾಂಗಣವು ಮೊದಲ ಸೆಮಿಫೈನಲ್​​ಗೆ ಆತಿಥ್ಯ ವಹಿಸಿದರೆ, ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಎರಡನೇ ಸೆಮಿಫೈನಲ್​ಗೆ ಆತಿಥ್ಯ ವಹಿಸಲಿದೆ. ಭದ್ರತಾ ಕಾರಣಗಳನ್ನು ಉಲ್ಲೇಖಿಸಿ ಮುಂಬೈನಲ್ಲಿ ತಮ್ಮ ಯಾವುದೇ ವಿಶ್ವಕಪ್ ನಿಯೋಜಿಸದಂತೆ ಪಿಸಿಬಿ ವಿನಂತಿಸಿದೆ. ಆಗ ಸೆಮಿಫೈನಲ್ ಪಂದ್ಯವನ್ನು ಕೋಲ್ಕತ್ತಾಗೆ ವರ್ಗಾವಣೆ ಮಾಡಬೇಕಾಗುತ್ತದೆ. ಒಂದು ವೇಳೆ ಭಾರತ ಸೆಮಿಫೈನಲ್​ಗೆ ಅರ್ಹತೆ ಪಡೆದರೆ ಪಾಕಿಸ್ತಾನ ವಿರುದ್ಧ ಆಡದ ಹೊರತು ಮುಂಬೈನಲ್ಲೇ ಆಡಲಿದೆ.

ವಿಶ್ವಕಪ್ ವೇಳಾಪಟ್ಟಿಗಾಗಿ ಐಸಿಸಿ ಇನ್ನೂ ಎರಡು ಷರತ್ತುಗಳನ್ನು ಹೊರಡಿಸಿದೆ. ವೆಸ್ಟ್ ಇಂಡೀಸ್ ಅರ್ಹತೆ ಪಡೆದರೆ, ಅರ್ಹತಾ ತಂಡಗಳ ಪೈಕಿ ಕ್ವಾಲಿಫೈಯರ್ 1 ಎಂದು ಹೇಳಲಾಗುತ್ತದೆ. ಒಂದು ವೇಳೆ ಶ್ರೀಲಂಕಾ ತಂಡ ಫೈನಲ್ ಪ್ರವೇಶಿಸಿದರೆ ಕ್ವಾಲಿಫೈಯರ್ 2ರಲ್ಲಿ ಸ್ಥಾನ ಪಡೆಯಲಿದೆ.

Exit mobile version