Site icon Vistara News

Washington Sundar : ನಿಮ್ಮಿಷ್ಟದ ಬಿರಿಯಾನಿ ಸಿಗಲ್ಲ ಎಂದಾದರೆ ಹೋಟೆಲ್​ ಬದಲಿಸುತ್ತೀರಾ? ಸುಂದರ್ ಕೇಳಿದ್ದು ಯಾರಿಗೆ?

Washington sundar

ರಾಂಚಿ: ನ್ಯೂಜಿಲ್ಯಾಂಡ್​ ವಿರುದ್ಧದ ಟಿ20 ಸರಣಿಯ (INDvsNZ t20) ಮೊದಲ ಪಂದ್ಯದಲ್ಲಿ ಆಲ್​ರೌಂಡರ್​ ವಾಷಿಂಗ್ಟನ್​ ಸುಂದರ್ (Washington Sundar)​ ಅಬ್ಬರದ ಪ್ರದರ್ಶನ ನೀಡಿದ್ದಾರೆ. 28 ಎಸೆತಗಳಲ್ಲಿ 50 ರನ್​ ಬಾರಿಸುವ ಜತೆಗೆ ಬೌಲಿಂಗ್​ನಲ್ಲೂ 2 ಪ್ರಮುಖ ವಿಕೆಟ್​ಗಳನ್ನು ಕಬಳಿಸಿದ್ದರು. ಹೀಗಾಗಿ ತಮಿಳುನಾಡು (Tamilnadu) ಮೂಲದ ಈ ಆಟಗಾರ ದಿನ ಹೈಲೈಟ್​ ಎನಿಸಿಕೊಂಡರು. ದಿನದ ತಮ್ಮ ಸಾಧನೆಯ ಬಗ್ಗೆ ಪಂದ್ಯ ಮುಕ್ತಾಯದ ಬಳಿಕ ಹರ್ಷ ವ್ಯಕ್ತಪಡಿಸಿದ್ದಾರೆ ಕೂಡ. ಇದೇ ವೇಳೆ ಅವರು ಬಿರಿಯಾನಿ ಹಾಗೂ ರೆಸ್ಟೋರೆಂಟ್​ನ ಹೋಲಿಕೆಯೊಂದನ್ನು ಮಾಡುವ ಮೂಲಕ ಅನಿರೀಕ್ಷಿತ ಪ್ರಶ್ನೆ ಕೇಳಿದ ಪತ್ರಕರ್ತರೊಬ್ಬರ ಬಾಯಿ ಮುಚ್ಚಿಸಿದ್ದಾರೆ.

ಮೊದಲ ದಿನದ ಪಂದ್ಯದಲ್ಲಿ ಭಾರತ ತಂಡದ ಅಗ್ರ ಕ್ರಮಾಂಕದ ಬ್ಯಾಟರ್​ಗಳ (Top Order Batter) ವೈಫಲ್ಯವೇ ಸೋಲಿಗೆ ಕಾರಣವಾಯಿತು. ಈ ಬಗ್ಗೆ ಕ್ರಿಕೆಟ್​ ಅಭಿಮಾನಿಗಳು ಟೀಕೆ ವ್ಯಕ್ತಪಡಿಸಿದ್ದಾರೆ. ಆದರೆ, ನಾಯಕ ಹಾರ್ದಿಕ್ ಪಾಂಡ್ಯ , ರಾಂಚಿಯ ಪಿಚ್​ ನಿರೀಕ್ಷೆಗಿಂತ ಅಧಿಕ ತಿರುವು ಪಡೆದುಕೊಳ್ಳುತ್ತಿದ್ದ ಕಾರಣ ಬ್ಯಾಟಿಂಗ್ ಕಷ್ಟವಾಯಿತು ಎಂದು ಹೇಳಿದ್ದಾರೆ. ಆದರೆ, ಪತ್ರಕರ್ತರೊಬ್ಬರು ಮಾಧ್ಯಮ ಗೋಷ್ಠಿಯಲ್ಲಿ ಅಗ್ರ ಕ್ರಮಾಂಕ ಬ್ಯಾಟಿಂಗ್ ವೈಫಲ್ಯದ ಬಗ್ಗೆ ವಾಷಿಂಗ್ಟನ್​ ಸುಂದರ್​ ಬಳಿ ಪ್ರಶ್ನೆ ಕೇಳಿದ್ದಾರೆ. ಅಲ್ಲದೆ ಅವರೆಲ್ಲರನ್ನೂ ಮುಂದಿನ ಪಂದ್ಯಕ್ಕೆ ಬದಲಾಯಿಸಬೇಕಾ ಎಂದು ಅನಿರೀಕ್ಷಿತ ಪ್ರಶ್ನೆ ಹಾಕಿದ್ದಾರೆ.

ಪತ್ರಕರ್ತನ ಆಘಾತಕಾರಿ ಪ್ರಶ್ನೆಗೆ ಉತ್ತರಿಸಿದ ವಾಷಿಂಗ್ಟನ್​ ಸುಂದರ್​, ನೀವು ಒಂದು ಹೋಟೆಲ್​ಗೆ ಹೋದಾಗ ನಿಮ್ಮಿಷ್ಟದ ಬಿರಿಯಾನಿ ನಿಮಗೆ ಅಲ್ಲಿ ಸಿಗಲಿಲ್ಲ ಎಂದು ಅಂದುಕೊಳ್ಳೋಣ. ಆಗ ನೀವು ಆ ಹೋಟೆಲ್ ಅನ್ನೇ ಬದಲಾಯಿಸುತ್ತೀರಾ. ಅಂತೆಯೇ ಒಂದು ದಿನದ ಮಟ್ಟಿಗೆ ಕೆಲವು ಬ್ಯಾಟ್ಸ್​ಮನ್​ಗಳು (batter) ವೈಫಲ್ಯ ಕಂಡರೆ ಅವರನ್ನು ಮುಂದಿನ ಪಂದ್ಯಕ್ಕೆ ಬದಲಾಯಿಸಬೇಕು ಎಂಬದು ತಪ್ಪು. ಕ್ರಿಕೆಟ್​ನಲ್ಲಿ ಇವೆಲ್ಲ ಸರ್ವೇ ಸಾಮಾನ್ಯ. ಕೆಲವೊಂದು ದಿನ ಕೆಲವು ಬ್ಯಾಟರ್​ಗಳು ವೈಫಲ್ಯ ಕಾಣುತ್ತಾರೆ. ಅದಕ್ಕೆಲ್ಲ ಬದಲಾವಣೆ ಮಾಡಲು ಹೋಗುವುದು ಕಷ್ಟ ಎಂದು ಹೇಳಿದರು.

ಇದನ್ನೂ ಓದಿ | INDvsNZ T20 | ವಾಷಿಂಗ್ಟನ್​ ಸುಂದರ್​ ಹಿಡಿದ ಅದ್ಭುತ ಕ್ಯಾಚ್​ಗೆ ಶಹಬ್ಬಾಸ್​ ಎಂದ ಕ್ರಿಕೆಟ್​ ಅಭಿಮಾನಿಗಳು

ಇದೇ ವೇಳೆ ಅವರು ಕೊನೇ ಓವರ್​ನಲ್ಲಿ ನೋ ಬಾಲ್​ ಸಮೇತ 27 ರನ್​ ನೀಡಿದ ಅರ್ಶ್​​ದೀಪ್​ ಸಿಂಗ್ ಅವರನ್ನೂ ಬೆಂಬಲಿಸಿದರು. ಅರ್ಶ್​​ದೀಪ್​ ಸಿಂಗ್​ ಐಪಿಎಲ್​ ಹಾಗೂ ಭಾರತ ತಂಡದ ಪರ ಸಾಕಷ್ಟು ವಿಕೆಟ್​ಗಳನ್ನು ಉರುಳಿಸಿದ್ದಾರೆ. ನಾವೆಲ್ಲರೂ ಮನುಷ್ಯರು. ತಪ್ಪುಗಳು ನಡೆಯುತ್ತವೆ. ಎದುರಾಳಿ ತಂಡದ ಆಟಗಾರರು ಗುಣಮಟ್ಟ ಹೊಂದಿರುತ್ತಾರೆ. ಹೀಗಾಗಿ ಸ್ಪರ್ಧೆ ಹೆಚ್ಚಿರುತ್ತದೆ ಎಂದು ಹೇಳಿದರು.

Exit mobile version