Site icon Vistara News

IND VS AUS: ಹಲವು ಜೀವದಾನ ಪಡೆದರೂ ಸದುಪಯೋಗ ಪಡಿಸಿಕೊಳ್ಳದ ಭಾರತೀಯ ಆಟಗಾರರ ವಿರುದ್ಧ ನೆಟ್ಟಿಗರ ಆಕ್ರೋಶ

IND VS AUS: Netizens' outrage against Indian players who received many life donations but did not make good use of them

IND VS AUS: Netizens' outrage against Indian players who received many life donations but did not make good use of them

ಇಂದೋರ್​: ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೂರನೇ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ ಭಾರತ(IND VS AUS) ತಂಡವು ಅಲ್ಪಮೊತ್ತಕ್ಕೆ ಆಲೌಟಾಗಿದೆ. ಆಸ್ಟ್ರೇಲಿಯಾದ ಸ್ಪಿನ್​ ಮ್ಯಾಜಿಕ್​ಗೆ ತಿಣುಕಾಡಿದ ರೋಹಿತ್​ ಪಡೆ ಕೇವಲ 109 ರನ್​ ಗಳಿಗೆ ಸರ್ವಪತನ ಕಂಡಿತು. ಆದರೆ ಈ ಪಂದ್ಯದಲ್ಲಿ ಹಲವು ಜೀವದಾನ ಪಡೆದ ಟೀಮ್​ ಇಂಡಿಯಾ ಆಟಗಾರರು ಇದರ ಲಾಭವೆತ್ತದ ಕುರಿತು ಸಾಮಾಜಿಕ ಜಾಲತಣದಲ್ಲಿ ಟೀಕೆಗಳು ವ್ಯಕ್ತವಾಗಿದೆ.

ಟಾಸ್​ ಗೆದ್ದು ಭಾರತದ ಇನಿಂಗ್ಸ್​ ಆರಂಭಿಸಿದ ನಾಯಕ ರೋಹಿತ್ ಶರ್ಮಾ ಮೊದಲ ಮೊದಲ ಓವರಿನಲ್ಲಿಯೇ ಔಟಾಗಬೇಕಾಗಿತ್ತು. ಆದರೆ ಆಸೀಸ್ ಆಟಗಾರರ ನಿರ್ಲಕ್ಷ್ಯದಿಂದ ಬದುಕುಳಿದರು. ಸ್ಟಾರ್ಕ್​ ಎಸೆದ ಮೊದಲ ಎಸೆತದಲ್ಲಿಯೇ ರೋಹಿತ್ ಕೀಪರ್ ಕೈಗೆ ಕ್ಯಾಚ್ ನೀಡಿದ್ದರು. ಆದರೆ ಆಸೀಸ್ ಆಟಗಾರರ ಮನವಿಯನ್ನು ಅಂಪೈರ್ ತಿರಸ್ಕರಿಸಿದರು. ಒಂದೊಮ್ಮೆ ನಾಯಕ ಸ್ಮಿತ್​ ರಿವ್ಯೂ ತೆಗೆದುಕೊಳ್ಳುತ್ತಿದ್ದರೆ ರೋಹಿತ್​ ಔಟಾಗಬೇಕಿತ್ತು. ಈ ಮೂಲಕ ರೋಹಿತ್​ ಬಚಾವಾದರು.

ಇದೇ ಓವರ್​ನ 4ನೇ ಎಸೆತದಲ್ಲಿ ರೋಹಿತ್ ಮತ್ತೆ ಎಲ್ ಬಿಡಬ್ಲ್ಯೂ ಬಲೆಗೆ ಬಿದ್ದರು. ಆದರೆ ಇಲ್ಲೂ ಆಸೀಸ್ ಆಟಗಾರರು ತಮ್ಮ ನಿರ್ಲಕ್ಷ್ಯತನ ತೋರುವ ಮೂಲಕ ರೋಹಿತ್​ಗೆ ಮತ್ತೊಂದು ಜೀವದಾನ ನೀಡಿದರು. ಸಿಕ್ಕ ಈ 2 ಜೀವದಾನವನ್ನು ಸರಿಯಾಗಿ ಬಳಸಿಕೊಳ್ಳದ ರೋಹಿತ್ ಸ್ಪಿನ್ನರ್ ಮ್ಯಾಥ್ಯೂ ಕುಹ್ನೆಮನ್ ಎಸೆತದಲ್ಲಿ ಬೀಸಿ ಹೊಡೆಯುವ ಯತ್ನದಲ್ಲಿ ಸ್ಟಂಪ್ ಔಟ್ ಆಗುವ ಮೂಲಕ ಕೇವಲ 12 ರನ್​ಗಳಿಗೆ ತಮ್ಮ ಇನಿಂಗ್ಸ್​ ಮುಗಿಸಿದರು.

ಇದಾದ ಬಳಿಕ ರವೀಂದ್ರ ಜಡೇಜಾ ಅವರು ಕೂಡ ನಥಾನ್​ ಲಿಯೋನ್​ ಎಸೆತದಲ್ಲಿ ಎಲ್ ಬಿಡಬ್ಲ್ಯೂಗೆ ಔಟಾದರು. ಆದರೆ ರಿವ್ಯೂ ಮೂಲಕ ಬಚಾವಾದರು. ಆದರೆ ಮುಂದಿನ ಎಸೆತದಲ್ಲೇ ಕ್ಯಾಚ್​ ನೀಡಿ ಆಟ ಮುಗಿಸಿದರು. ಇದನ್ನು ಕಂಡ ನೆಟ್ಟಿಗರು ಸರಣಿ ಟ್ವೀಟ್​ ಮೂಲಕ ಭಾರತೀಯ ಆಟಗಾರರ ಈ ಕಳಪೆ ಪ್ರದರ್ಶನಕ್ಕೆ ಟೀಕೆ ವ್ಯಕ್ತಪಡಿಸಿದ್ದಾರೆ.

Exit mobile version