Site icon Vistara News

IND VS BANGLA | ಭಾರತ- ಬಾಂಗ್ಲಾದೇಶ ವಿರುದ್ಧದ ಪಂದ್ಯಕ್ಕೆ ಮಳೆ ಭೀತಿ ಸಾಧ್ಯತೆ

rain2

ಅಡಿಲೇಟ್​: ಬುಧವಾರ ಅಡಿಲೇಡ್ ಓವಲ್ ಮೈದಾನದಲ್ಲಿ ಭಾರತ ಮತ್ತು ಬಾಂಗ್ಲಾದೇಶ (IND VS BANGLA) ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯ ಉಭಯ ತಂಡಗಳಿಗೂ ಅತ್ಯಂತ ಮಹತ್ವದ್ದಾಗಿದೆ. ಐಸಿಸಿ ಟಿ20 ವಿಶ್ವ ಕಪ್‌ನ (T20 World Cup) ಸೆಮಿಫೈನಲ್‌ನಲ್ಲಿ ಸ್ಥಾನ ಪಡೆಯುವ ಉದ್ದೇಶದಿಂದ ಉಭಯ ತಂಡಗಳು ಈ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿವೆ. ಆದರೆ ಈ ಪಂದ್ಯ ನಡೆಯುವುದು ಅನುಮಾನ ಎಂದು ವರದಿಯಾಗಿದೆ.

ಅಡಿಲೇಡ್​ನಲ್ಲಿಯೂ ಮಳೆ ಆತಂಕ

ಮೆಲ್ಬೋರ್ನ್​ ಮತ್ತು ಸಿಡ್ನಿ ಬಳಿಕ ಟೀಮ್​ ಇಂಡಿಯಾಕ್ಕೆ ಅಡಿಲೇಡ್​ನಲ್ಲಿಯೂ ಮಳೆಯ ಭೀತಿ ಎದುರಾಗಿದೆ. ಬುಧವಾರ ಮಳೆ ಬರುವ ಸಾಧ್ಯತೆ ಶೇ.70ರಷ್ಟು ಇದೆ ಎನ್ನಲಾಗಿದೆ. ಇದಕ್ಕೆ ಪೂರಕವೆಂಬಂತೆ ಮಂಗಳವಾರ ಅಡಿಲೇಡ್​ನಲ್ಲಿ ಧಾರಾಕಾರ ಮಳೆಯಾಗಿದ್ದು, ಚಳಿಯೂ ಸಾಕಷ್ಟು ಹೆಚ್ಚಾಗಿದೆ. ಒಂದೊಮ್ಮೆ ಪಂದ್ಯದ ವೇಳೆ ವಿಪರೀತ ಮಳೆಯಾಗದಿದ್ದರೂ ತುಂತುರು ಮಳೆಯಂತು ಕಾಣಿಸಬಹುದು. ಹೀಗಾಗಿ ಓವರ್​ ಕಡಿತಗೊಂಡರು, ಪಂದ್ಯದಲ್ಲಿ ಸ್ಪಷ್ಟ ಫಲಿತಾಂಶ ದಾಖಲಾಗುವ ನಿರೀಕ್ಷೆ ಇದೆ. ಹಾಲಿ ವಿಶ್ವ ಕಪ್​ನಲ್ಲಿ ಈಗಾಗಲೆ ಮಳೆಯಿಂದಾಗಿ 4 ಪಂದ್ಯಗಳು ರದ್ದುಗೊಂಡಿದ್ದು, ಸೆಮಿಫೈನಲ್​ ಲೆಕ್ಕಾಚಾರದಲ್ಲಿ ಸಾಕಷ್ಟು ಏರುಪೇರು ತಂದಿದೆ. ಇನ್ನು ಸೂಪರ್​12 ಹಂತದ ನಿರ್ಣಾಯಕ ಸಮಯದಲ್ಲಿ ಮಳೆ ಕಾಡಿದರೆ ಕೆಲ ತಂಡಗಳ ಅವಕಾಶಕ್ಕೆ ಕಲ್ಲು ಬೀಳಬಹುದು. ಆದರೆ ಭಾರತಕ್ಕೆ ಬಾಂಗ್ಲಾ ವಿರುದ್ಧದ ಒಂದು ಪಂದ್ಯ ಮಳೆಯಿಂದ ರದ್ದುಗೊಂಡರೂ, ಜಿಂಬಾಬ್ಬೆ ವಿರುದ್ಧದ ಕೊನೆಯ ಪಂದ್ಯದಲ್ಲಿ ಗೆದ್ದು ಉಪಾಂತ್ಯಕ್ಕೆರುವ ಅವಕಾಶ ಜೀವಂತವಾಗಿರಲಿದೆ.

ಪಿಚ್​ ರಿಪೋರ್ಟ್

ಅಡಿಲೇಡ್​ ಓವಲ್ ಮೈದಾನ ಬ್ಯಾಟರ್​ಗಳಿಗೆ ಮತ್ತು ಬೌಲರ್​ಗಳಿಗೆ ಅನುಕೂಲಕರವಾಗಿದೆ. ಆದರೆ ಬೌಂಡರಿ ಲೈನ್​ ದೂರ ಇರುವ ಕಾರಣ ಬೌಲರ್​ಗಳಿಗೆ ಅಧಿಕ ಲಾಭ. ಬ್ಯಾಟರ್​ಗಳು ಇಲ್ಲಿ ಸಂಪೂರ್ಣ ಬಲದೊಂದಿಗೆ ಬ್ಯಾಟ್​ ಬೀಸಬೇಕಾಗಿದೆ. ಮಂಜು ಕವಿದ ವಾತಾವರಣ ಇರುವುದರಿಂದ ಇಬ್ಬನಿ ಸಮಸ್ಯೆಯೂ ಕಾಡುವ ಸಾಧ್ಯತೆ ಹೆಚ್ಚಿದೆ. ಈ ನಿಟ್ಟಿನಲ್ಲಿ ಬೌಲರ್​ಗಳಿಗೆ ಚೆಂಡನ್ನು ನಿರ್ಧಿಷ್ಟ ಗುರಿಯೆಡೆಗೆ ಎಸೆಯಲು ಕಷ್ಟಸಾಧ್ಯ.

ಇದನ್ನೂ ಓದಿ | Neeraj Chopra | ಒಂದು ಪರೋಟ ತಿಂದರೂ ಕೋಚ್​ ದಂಡ ವಿಧಿಸುತ್ತಾರೆ; ನೀರಜ್​ ಚೋಪ್ರಾ ಆರೋಪ

Exit mobile version