Site icon Vistara News

IND VS NZ | ರಿಷಭ್​ ಪಂತ್​ ಮ್ಯಾಚ್​ ವಿನ್ನಿಂಗ್​ ಆಟಗಾರ; ಧವನ್ ಹೀಗೆ ಹೇಳಿದ್ದು ಏಕೆ?

pant vs dhawan

ಕ್ರೇಸ್ಟ್​ಚರ್ಚ್​: ಸತತ ಬ್ಯಾಟಿಂಗ್​ ವೈಫಲ್ಯದ ಹೊರತಾಗಿಯೂ ರಿಷಭ್ ಪಂತ್‌ ತಂಡದಲ್ಲಿ ಸ್ಥಾನ ಪಡೆಯುತ್ತಿರುವ ಕುರಿತು ಮಾತನಾಡಿದ ಶಿಖರ್​ ಧವನ್​, ಪಂತ್​ ಓರ್ವ ಮ್ಯಾಚ್ ವಿನ್ನರ್​​ ಆದ್ದರಿಂದ ಅವರಿಗೆ ತಂಡದಲ್ಲಿ ಸ್ಥಾನ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.

ನ್ಯೂಜಿಲ್ಯಾಂಡ್​ ವಿರುದ್ಧದ ಅಂತಿಮ ಏಕದಿನ ಪಂದ್ಯ ಮಳೆಯಿಂದ ರದ್ದುಗೊಂಡಿತು. ಈ ಬಳಿಕ ಮಾತನಾಡಿದ ಶಿಖರ್​ ಧವನ್​ ಅವರು ರಿಷಭ್ ಪಂತ್ ಮ್ಯಾಚ್ ವಿನ್ನರ್ ಆಗಿದ್ದು, ಸಂಜು ತಮ್ಮ ಅವಕಾಶಕ್ಕಾಗಿ ಕಾಯಬೇಕಾಗಿದೆ ಎಂದು ಹೇಳಿದ್ದಾರೆ.

ಈಗಾಗಲೇ ಸಂಜು ಸ್ಯಾಮ್ಸನ್‌ಗೆ ಅವಕಾಶ ನೀಡದ ಕುರಿತು ಆಕ್ರೋಶ ವ್ಯಕ್ತವಾಗಿರುವುದು ನನ್ನ ಗಮನಕ್ಕೆ ಬಂದಿದೆ. ಆದರೆ ಕಳಪೆ ಫಾರ್ಮ್‌ನಿಂದಾಗಿ ಕಠಿಣ ಸಮಯ ಎದುರಿಸುತ್ತಿರುವ ಪಂತ್​ಗೆ ಬೆಂಬಲಿಸಬೇಕಾಗುತ್ತದೆ. ಸಂಜು ನಿಸ್ಸಂಶಯವಾಗಿಯೂ ಅವಕಾಶ ಸಿಕ್ಕಾಗಲೆಲ್ಲಾ ಅತ್ಯುತ್ತಮವಾಗಿ ಆಡುತ್ತಿದ್ದಾರೆ. ಆದರೆ ಕೆಲವೊಮ್ಮೆ ಅವಕಾಶಕ್ಕಾಗಿ ಕಾಯಬೇಕಾಗಿದೆ. ಏಕೆಂದರೆ ಪಂತ್ ಕೂಡ ಮ್ಯಾಚ್ ವಿನ್ನರ್ ಆಗಿದ್ದು, ಕಠಿಣ ಸಮಯದಲ್ಲಿ ಅವರ ಬೆಂಬಲಕ್ಕೆ ನಿಲ್ಲುವುದು ನಮ್ಮ ಕರ್ತವ್ಯ ಎಂದು ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರು.

ಇದನ್ನೂ ಓದಿ | IND VS AUS | ಹಾಕಿ ಟೆಸ್ಟ್​; ಬಲಿಷ್ಠ ಆಸ್ಟ್ರೇಲಿಯಾಕ್ಕೆ ಸೋಲುಣಿಸಿದ ಟೀಮ್​ ಇಂಡಿಯಾ

Exit mobile version