Site icon Vistara News

IND VS SL | ಅಂತಿಮ ಟಿ20 ಪಂದ್ಯದಿಂದ ಅರ್ಶ್​ದೀಪ್​ ಸಿಂಗ್​ಗೆ ಕೊಕ್​ ಸಾಧ್ಯತೆ; ಮುಕೇಶ್​ ಕುಮಾರ್​ಗೆ ಅವಕಾಶ?

arshdeep singh

ರಾಜ್​ಕೋಟ್​: ಶ್ರೀಲಂಕಾ ವಿರುದ್ಧದ ದ್ವಿತೀಯ ಟಿ20 ಪಂದ್ಯದಲ್ಲಿ ದುಬಾರಿಯಾಗಿದ್ದ ಅರ್ಶ್​ದೀಪ್​ ಸಿಂಗ್​ ಅವರನ್ನು ಅಂತಿಮ ಟಿ20 ಪಂದ್ಯದಿಂದ(IND VS SL) ಕೈಬಿಡಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ. ಅವರ ಬದಲು ಮುಕೇಶ್​ ಕುಮಾರ್​ ಆಡುವ ಬಳಗ ಸೇರಿಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಾಜ್​ಕೋಟ್​ನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಒಂದೊಮ್ಮೆ ಮುಕೇಶ್​ ಕುಮಾರ್​ಗೆ ಆಡುವ ಅವಕಾಶ ಸಿಕ್ಕರೆ ಅವರಿಗೆ ಇದು ಪದಾರ್ಪಣ ಪಂದ್ಯವಾಗಲಿದೆ. ಅರ್ಶ್​ದೀಪ್​ ಸಿಂಗ್​ ಕಳೆದ ಪಂದ್ಯದಲ್ಲಿ ಹ್ಯಾಟ್ರಿಕ್​ ಸಹಿತ ಒಟ್ಟು 5 ನೋಬಾಲ್​ ಎಸೆದು ಪಂದ್ಯದ ಸೋಲಿಗೆ ಕಾರಣವಾಗಿದ್ದರು.

ಅಂತಿಮ ಪಂದ್ಯದಲ್ಲಿ ಗೆದ್ದು ಸರಣಿಯನ್ನು ವಶಪಡಿಸಿಕೊಳ್ಳುವ ಯೋಜನೆಯಲ್ಲಿರುವ ಭಾರತ, ಆಡುವ ಬಳಗದಲ್ಲಿ ಕೆಲ ಬದಲಾವಣೆ ಮಾಡಲು ಸಿದ್ಧವಾದಂತಿದೆ. ಆದ್ದರಿಂದ ಕಳೆದ ಪಂದ್ಯದಲ್ಲಿ ದುಬಾರಿಯಾಗಿದ್ದ ಅರ್ಶ್​ದೀಪ್​​ ಅವರನ್ನು ಅಂತಿಮ ಪಂದ್ಯದಿಂದ ಕೈಬಿಡಲು ಟೀಮ್​ ಮ್ಯಾನೇಜ್​​ಮೆಂಟ್​ ನಿರ್ಧರಿಸಿದೆ ಎನ್ನಲಾಗಿದೆ.

ಇನ್ನೊಂದು ಮೂಲಗಳ ಪ್ರಕಾರ ರಾಜ್​ಕೋಟ್​ನ ಪಿಚ್ ಹೆಚ್ಚಾಗಿ ಸ್ಪಿನ್​ ಬೌಲರ್​ಗಳಿಗೆ ನೆರವು ನೀಡುವ ಕಾರಣದಿಂದ ಹೆಚ್ಚುವರಿ ಸ್ಪಿನ್ನರ್​​ ಆಗಿ ವಾಷಿಂಗ್ಟನ್​ ಸುಂದರ್​ಗೆ ಅವಕಾಶ​​ ನೀಡುವ ಸಾಧ್ಯತೆಯೂ ಇದೆ. ಒಟ್ಟಾರೆ ಅರ್ಶ್​ದೀಪ್​ ಸಿಂಗ್​ ಅವರನ್ನು ಈ ಪಂದ್ಯದಿಂದ ಕೈಬಿಡುವ ಸಾಧ್ಯತೆ ಹೆಚ್ಚು ಎಂದು ಮ್ಯಾನೇಜ್​​ಮೆಂಟ್​ ಮೂಲಗಳು ತಿಳಿಸಿವೆ​.

ಇದನ್ನೂ ಓದಿ | INDvsSL | ರಾಜ್​ಕೋಟ್​ನಲ್ಲಿ ಟಾಸ್​ ಗೆದ್ದರೆ ಬ್ಯಾಟಿಂಗ್​, ಫೀಲ್ಡಿಂಗ್​ನಲ್ಲಿ ಯಾವ ಆಯ್ಕೆ ಉತ್ತಮ?

Exit mobile version