Site icon Vistara News

IND VS SL | ಟಾಸ್​ ಬಳಿಕ ನಾಯಕ ಹಾರ್ದಿಕ್​ ಪಾಂಡ್ಯ ನೀಡಿದ ಪ್ರತಿಕ್ರಿಯೆ ವೈರಲ್​; ಪಾಂಡ್ಯ ಹೇಳಿದ ಉತ್ತರವಾದರೂ ಏನು?

Hardik Pandya wrote a new record on social media; What an achievement

ಪುಣೆ: ಶ್ರೀಲಂಕಾ ವಿರುದ್ಧ ಗುರುವಾರ ನಡೆದ ದ್ವಿತೀಯ ಟಿ20 ಪಂದ್ಯದಲ್ಲಿ ಭಾರತ(IND VS SL) 16 ರನ್​ ಅಂತರದ ಸೋಲು ಕಂಡಿದೆ. ಆದರೆ ಟಾಸ್​ ವೇಳೆ ನಾಯಕ ಹಾರ್ದಿಕ್​ ಪಾಂಡ್ಯ ನೀಡಿದ ಒಂದು ಉತ್ತರ ಇದೀಗ ವೈರಲ್​ ಆಗಿದೆ.

ಪುಣೆಯಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಗೆದ್ದ ಹಾರ್ದಿಕ್​ ಪಾಂಡ್ಯ ಮೊದಲು ಬೌಲಿಂಗ್​ ಆಯ್ಕೆ ಮಾಡಿಕೊಂಡರು. ಇದೇ ವೇಳೆ ಪಂದ್ಯದ ನಿರೂಪಕ ಮುರಳಿ ಕಾರ್ತಿಕ್​ ಅವರು ಪಾಂಡ್ಯ ಬಳಿ ಪ್ರಶ್ನೆಯೊಂದನ್ನು ಕೇಳಿದ್ದಾರೆ. “ಇತಿಹಾಸ ನೋಡಿದರೆ, ಈ ಪಿಚ್​ನಲ್ಲಿ​ ಮೊದಲು ಬ್ಯಾಟಿಂಗ್‌ ಮಾಡಿದ ತಂಡಗಳೇ ಬಹುತೇಕ ಬಾರಿ ಗೆದ್ದಿದೆ. ಹೀಗಿರುವಾಗ ಟಾಸ್‌ ಗೆದ್ದು ಮೊದಲು ಬೌಲಿಂಗ್‌ ಆಯ್ದುಕೊಳ್ಳಲು ಕಾರಣವೇನು” ಎಂದರು.

ಇದಕ್ಕೆ ಉತ್ತರಿಸಿದ ಪಾಂಡ್ಯ “ಓ ಹೌದಾ ನನಗಿದು ತಿಳಿದಿರಲಿಲ್ಲ” ಎಂದು ಉತ್ತರಿಸಿದರು. ಇದೀಗ ಪಾಂಡ್ಯ ನೀಡಿದ ಈ ಉತ್ತರ ವೈರಲ್​ ಆಗಿದೆ. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ಲಂಕಾ ಮೇಲುಗೈ ಸಾಧಿಸಿತು. ಪಾಂಡ್ಯ ಸರಿಯಾಗಿ ಪಿಚ್​ ಬಗ್ಗೆ ತಿಳಿಯದೇ ಇದ್ದ ಕಾರಣದಿಂದ ಪಂದ್ಯ ಸೋಲಿಗೆ ಪ್ರಮುಖ ಕಾರಣ ಎನ್ನುವ ಮಾತುಗಳು ಇದೀಗ ಕೇಳಿಬರಲಾರಂಭಿಸಿದೆ. ಟಾಸ್​ ಗೆದ್ದು ಪಾಂಡ್ಯ ಮೊದಲು ಬ್ಯಾಟಿಂಗ್ ಆಯ್ಕೆ ಮಾಡುತ್ತಿದ್ದರೆ ಭಾರತ ಗೆಲುವು ದಾಖಲಿಸುತ್ತಿತ್ತು ಎಂದು ನೆಟ್ಟಿಗರು ಇದೀಗ ಪಾಂಡ್ಯ ವಿರುದ್ಧ ಕಿಡಿಕಾರಿದ್ದಾರೆ.

ಇನ್ನಾದರೂ ಹಾರ್ದಿಕ್​ ಪಾಂಡ್ಯ ಪಂದ್ಯಕ್ಕೂ ಮುನ್ನ ಮೈದಾನದ ಮತ್ತು ಪಿಚ್​ ಬಗೆಗಿನ ಇತಿಹಾಸ ತಿಳಿದು ಸೂಕ್ತ ನಿರ್ಧಾರ ತೆಗೆದುಕೊಳ್ಳಲಿ ಎಂದು ಕೆಲವು ನೆಟ್ಟಿಗರು ಸಲಹೆ ನೀಡಿದ್ದಾರೆ.

ಇದನ್ನೂ ಓದಿ | INDvsSL | ಎರಡನೇ ಟಿ20 ಪಂದ್ಯದಲ್ಲಿ ಭಾರತ ತಂಡಕ್ಕೆ 16 ರನ್​ ಸೋಲು, 1-1 ಅಂತರದಲ್ಲಿ ಸರಣಿ ಸಮಬಲ

Exit mobile version