Site icon Vistara News

IND VS SL | ನಮ್ಮ ತಂಡದ ಬೌಲರ್​ಗಳು ಕಲಿಕೆಯ ಹಾದಿಯಲ್ಲಿದ್ದಾರೆ, ಟೀಕಿಸುವುದು ಸರಿಯಲ್ಲ; ಕೋಚ್​ ರಾಹುಲ್​ ದ್ರಾವಿಡ್​!

Coach Rahul said that we are here to support Rahul!

Coach Rahul said that we are here to support Rahul!

ಪುಣೆ: ಶ್ರೀಲಂಕಾ ವಿರುದ್ಧದ ದ್ವಿತೀಯ ಟಿ20 ಪಂದ್ಯದಲ್ಲಿ ಟೀಮ್​ ಇಂಡಿಯಾ ಸೋಲಿಗೆ(IND VS SL ) ಬೌಲರ್​ಗಳು ಮಾಡಿದ ಎಡವಟ್ಟು ಪ್ರಮುಖ ಕಾರಣ ಎಂದು ಹಲವು ಕಡೆಯಿಂದ ಟೀಕೆಗಳು ವ್ಯಕ್ತವಾಗಿದೆ. ಸ್ವತಃ ನಾಯಕ ಹಾರ್ದಿಕ್​ ಪಾಂಡ್ಯ ಕೂಡ ಈ ವಿಚಾರದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ ತಂಡದ ಮುಖ್ಯ ಕೋಚ್​ ರಾಹುಲ್​ ದ್ರಾವಿಡ್​ ಯುವ ಬೌಲರ್​ಗಳ ಬೆಂಬಲಕ್ಕೆ ನಿಂತಿದ್ದಾರೆ.

ಪಂದ್ಯದ ಬಳಿಕ ಮಾತನಾಡಿದ ಕೋಚ್​ ರಾಹುಲ್​ ದ್ರಾವಿಡ್​, ಸದ್ಯ ಟೀಮ್​ ಇಂಡಿಯಾದಲ್ಲಿ ಆಡುತ್ತಿರುವುದು ಯುವ ಬೌಲರ್​ಗಳು. ಅವರು ಇನ್ನೂ ಕಲಿಕೆಯ ಹಾದಿಯಲ್ಲಿದ್ದಾರೆ. ಈ ವೇಳೆ ತಪ್ಪುಗಳು ಸಹಜ. ಹೀಗಾಗಿ ತಾಳ್ಮೆಯಿಂದ ಇರುವಂತೆ ಟೀಕೆ ಮಾಡುವವರಿಗೆ ಸೂಕ್ತ ಸಲಹೆ ನೀಡಿದ್ದಾರೆ. ಜತೆಗೆ ಯುವ ಬೌಲರ್​ಗಳ ಬೆಂಬಲಕ್ಕೆ ನಿಂತು ಅವರ ಆತ್ಮವಿಶ್ವಾಸ ಕುಗ್ಗದಂತೆ ಜಾಣ್ಮೆ ತೋರಿದ್ದಾರೆ.

“ಈ ಚಿಕ್ಕ ಹುಡುಗರ ಬಗ್ಗೆ ನಾವು ತಾಳ್ಮೆಯಿಂದ ಇರಬೇಕು. ಭಾರತ ತಂಡದಲ್ಲಿ ಬಹಳಷ್ಟು ಯುವಕರು ಆಡುತ್ತಿದ್ದಾರೆ. ವಿಶೇಷವಾಗಿ ನಮ್ಮ ಬೌಲಿಂಗ್ ದಾಳಿ ಸಂಪೂರ್ಣ ಯುವ ಆಟಗಾರರನ್ನು ಹೊಂದಿದೆ. ಅವರಿನ್ನೂ ಚಿಕ್ಕವರು. ಈ ರೀತಿಯ ಆಟಗಳು ನಡೆಯಬಹುದು ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಕಲಿಕೆಯ ಹಾದಿಯಲ್ಲಿ ಇವೆಲ್ಲ ಸಾಮಾನ್ಯ. ಈ ಹಂತದಲ್ಲಿ ನಾವು ಆಟಗಾರರ ಬೆಂಬಲಕ್ಕೆ ನಿಲ್ಲಬೇಕು ಹೊರತು ದೂಷಿಸುವುದು ಸರಿಯಲ್ಲ” ಎಂದು ದ್ರಾವಿಡ್ ಹೇಳಿದ್ದಾರೆ.

ಈ ಪಂದ್ಯದಲ್ಲಿ ಅರ್ಶ್​ದೀಪ್​ ಸಿಂಗ್​ ಹ್ಯಾಟ್ರಿಕ್​ ಸಹಿತ ಒಟ್ಟು 5 ನೋಬಾಲ್​ ಎಸೆದು ಎರಡು ಓವರ್‌ಗಳಲ್ಲಿ 37 ರನ್‌ಗಳನ್ನು ಬಿಟ್ಟು ದುಬಾರಿಯಾಗಿದ್ದರು. ಜತೆಗೆ ಉಮ್ರಾನ್​ ಮಲಿಕ್​ ಮತ್ತು ಶಿವಂ ಮಾವಿ ತಲಾ ಒಂದು ನೋಬಾಲ್​ ಎಸೆದಿದ್ದರು. ಇದುವೇ ಸೋಲಿಗೆ ಪ್ರಮುಖ ಕಾರಣ ಎಂದು ಟೀಮ್​ ಇಂಡಿಯಾ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ | IND VS SL | ನೋಬಾಲ್ ಎಸೆಯುವುದು ಅಪರಾಧ; ಪಾಂಡ್ಯ ಹೀಗೆ ಹೇಳಿದ್ದು ಯಾರಿಗೆ?

Exit mobile version