Site icon Vistara News

IND VS SL | ಅಂತಿಮ ಏಕದಿನ; ಕ್ಲೀನ್ ಸ್ವೀಪ್ ಮುಖಭಂಗದಿಂದ ಪಾರಾದೀತೇ ಪ್ರವಾಸಿ ಶ್ರಿಲಂಕಾ​?

kl rahul practice

ತಿರುವನಂತಪುರ: ಭಾರತ (IND VS SL ) ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಸತತ ಎರಡು ಪಂದ್ಯಗಳನ್ನು ಸೋತಿರುವ ಪ್ರವಾಸಿ ಶ್ರೀಲಂಕಾ ಅಂತಿಮ ಪಂದ್ಯವನ್ನಾಡಲು ಸಜ್ಜಾಗಿದೆ. ಈಗಾಗಲೇ ಸರಣಿಯನ್ನು ಕಳೆದುಕೊಂಡಿರುವ ದಸುನ್​ ಶನಕ ಪಡೆ ಈ ಪಂದ್ಯದಲ್ಲಿ ಗೆದ್ದು ವೈಟ್​ವಾಶ್​ ಅವಮಾನದಿಂದ ಹೊರಬರಲು ತೀವ್ರ ಹೋರಾಟ ನಡೆಸುವ ಯೋಜನೆ ರೂಪಿಸಿದೆ. ಉಭಯ ತಂಡಗಳ ಈ ಮುಖಾಮುಖಿ ಭಾನುವಾರ ತಿರುವನಂತಪುರದಲ್ಲಿ ನಡೆಯಲಿದೆ.

ಸರಣಿಯಲ್ಲಿ ಈಗಾಗಲೇ ಮೇಲುಗೈ ಸಾಧಿಸಿರುವ ಭಾರತ ತಂಡ ಈ ಪಂದ್ಯದಲ್ಲಿಯೂ ಗೆದ್ದು ನ್ಯೂಜಿಲ್ಯಾಂಡ್​ ವಿರುದ್ಧದ ಸರಣಿಗೆ ಭರ್ಜರಿ ಸಿದ್ಧತೆ ನಡೆಸುವ ಯೋಜನೆಯಲ್ಲಿದೆ. ಇನ್ನೊಂದೆಡೆ ಭಾರತ ಈ ಪಂದ್ಯದಲ್ಲಿ ಕೆಲ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡುವ ಸಾಧ್ಯತೆಯೂ ದಟ್ಟವಾಗಿದೆ.

​ಕಿವೀಸ್​​ ವಿರುದ್ಧದ ಸರಣಿಯನ್ನು ಗಮನದಲ್ಲಿಟ್ಟುಕೊಂಡು ವಿರಾಟ್​ ಕೊಹ್ಲಿ, ಮೊಹಮ್ಮದ್​ ಶಮಿ​ಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ. ಇವರ ಬದಲಿಗೆ ಇಶಾನ್​ ಕಿಶನ್​, ಅರ್ಶ್​ದೀಪ್​ ಸಿಂಗ್​ ಅಥವಾ ಸೂರ್ಯಕುಮಾರ್​ ಯಾದವ್​ಗೆ​ ಆಡುವ ಅವಕಾಶ ಸಿಗಬಹುದು. ಇದರ ಜತೆಗೆ ಈ ಸರಣಿಯಲ್ಲಿ ಆಡುವ ಅವಕಾಶ ಸಿಗದೇ ಇರುವ ಆಟಗಾರರಿಗೆ ಈ ಪಂದ್ಯದಲ್ಲಿ ಅವಕಾಶ ನೀಡಿದರೂ ಅಚ್ಚರಿಯಿಲ್ಲ.

ಯಜುವೇಂದ್ರ ಚಹಲ್​ ಬದಲಿಗೆ ಕಳೆದ ಪಂದ್ಯದಲ್ಲಿ ಅವಕಾಶ ಪಡೆದು ಮಿಂಚಿದ ಚೈನಾಮನ್​ ಖ್ಯಾತಿಯ ಸ್ಪಿನ್ನರ್​ ಕುಲ್​ದೀಪ್​ ಯಾದವ್ ಮೇಲೆ ಈ ಪಂದ್ಯದಲ್ಲಿಯೂ ನಿರೀಕ್ಷೆ ಇರಿಸಲಾಗಿದೆ. ಈಡನ್​ ಗಾರ್ಡನ್ಸ್​ನಂತೆಯೇ ಗ್ರೀನ್​ ಪಾರ್ಕ್​ ಪಿಚ್​ನಲ್ಲಿಯೂ ತಮ್ಮ ಸ್ಪಿನ್​ ಮೋಡಿ ಮೂಡಿಬಂದಿತೇ ಎಂಬುದನ್ನು ಕಾದು ನೋಡಬೇಕಿದೆ.

ಲಂಕಾ ತಂಡದಲ್ಲಿ ಬದಲಾವಣೆ ಸಂಭವಿಸುವುದು ಅನುಮಾನ. ಏಕೆಂದರೆ ಲಂಕಾ ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಕ್ಲೀನ್ ಸ್ವೀಪ್ ಅವಮಾನದಿಂದ ಪಾರಾಗುವ ಪಣ ತೊಟ್ಟಿದೆ. ಆದ್ದರಿಂದ ಲಂಕಾ ಆಟಗಾರರು ಕಳೆದ ಪಂದ್ಯದಲ್ಲಿ ಆಡಿದ ತಂಡವನ್ನೇ ಆಡಲಿಳಿಸಬಹುದು.

ಇದನ್ನೂ ಓದಿ | IND VS SL | ಭಾರತ-ಶ್ರೀಲಂಕಾ ವಿರುದ್ಧದ ಅಂತಿಮ ಏಕದಿನ ಪಂದ್ಯದ ಪಿಚ್​ ರಿಪೋರ್ಟ್​, ಸಂಭಾವ್ಯ ತಂಡದ ಮಾಹಿತಿ

Exit mobile version