Site icon Vistara News

IND VS SL | ನೋಬಾಲ್ ಎಸೆಯುವುದು ಅಪರಾಧ; ಪಾಂಡ್ಯ ಹೀಗೆ ಹೇಳಿದ್ದು ಯಾರಿಗೆ?

arshdeep singh

ಪುಣೆ: ಶ್ರೀಲಂಕಾ(IND VS SL)ವಿರುದ್ಧದ ದ್ವಿತೀಯ ಟಿ20 ಪಂದ್ಯದಲ್ಲಿ ಭಾರತ 16 ರನ್​ಗಳ ಸೋಲನುಭವಿಸಿದೆ. ಪಂದ್ಯದ ಸೋಲಿಗೆ ಪ್ರಮುಖ ಕಾರಣವಾದ ನೋಬಾಲ್ ಬಗ್ಗೆ ನಾಯಕ ಹಾರ್ದಿಕ್ ಪಾಂಡ್ಯ ಮಹತ್ವದ ಹೇಳಿಕೆ ನೀಡಿದ್ದಾರೆ.

ಗುರುವಾರ ಪುಣೆಯಲ್ಲಿ ನಡೆದ ಪಂದ್ಯದಲ್ಲಿ ನಮ್ಮ ತಂಡದ ಬೌಲರ್​ಗಳು ಎಸೆದ ನೋ ಬಾಲ್ ಸೋಲಿಗೆ ಪ್ರಮುಖ ಕಾರಣ ಎಂದು ಪಂದ್ಯದ ಬಳಿಕ ​ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ. ಈ ಪಂದ್ಯದಲ್ಲಿ ವೇಗಿ ಅರ್ಶ್​ದೀಪ್ ಸಿಂಗ್ ಮೊದಲ ಓವರ್​ನಲ್ಲಿ ಹ್ಯಾಟ್ರಿಕ್ ನೋಬಾಲ್​ ಸೇರಿ ಒಟ್ಟು ಐದು ನೋಬಾಲ್‌ಗಳನ್ನು ಎಸೆದರು. ಶಿವಂ ಮಾವಿ ಮತ್ತು ಉಮ್ರಾನ್ ಮಲಿಕ್ ತಲಾ ಒಂದು ನೋಬಾಲ್ ಎಸೆದು ಒಟ್ಟು 12 ಹೆಚ್ಚುವರಿ ರನ್‌ಗಳನ್ನು ಎದುರಾಳಿ ತಂಡಕ್ಕೆ ಬಿಟ್ಟು ಕೊಟ್ಟಿದ್ದು ತಂಡಕ್ಕೆ ಹಿನ್ನಡೆಯಾಯಿತು ಎಂದರು.

“ಅರ್ಶ್​ದೀಪ್ ಸಿಂಗ್​​ ಉತ್ತಮ ಬೌಲರ್​. ಇದರಲ್ಲಿ ಎರಡು ಮಾತಿಲ್ಲ. ಇಲ್ಲಿ ಅವರನ್ನು ದೂಷಿಸುತ್ತಿಲ್ಲ. ಆದರೆ ಈ ರೀತಿ ನೋ ಬಾಲ್ ಎಸೆಯುವುದು ದೊಡ್ಡ ಅಪರಾಧ ಎಂದು ಪಾಂಡ್ಯ ಪರೋಕ್ಷವಾಗಿ ಅರ್ಶ್​ದೀಪ್​ಗೆ ಎಚ್ಚರಿಕೆ ನೀಡಿದ್ದಾರೆ.

ಪವರ್​ ಪ್ಲೇಯಲ್ಲಿ ಹಿನ್ನಡೆ

ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡೂ ಪವರ್‌ ಪ್ಲೇಯಲ್ಲಿ ನಮಗೆ ಹಿನ್ನಡೆಯಾದದ್ದೂ ಕೂಡ ಸೋಲಿಗೆ ಪ್ರಮುಖ ಕಾರಣ. ನಾವು ಈ ಮಟ್ಟದಲ್ಲಿ ಕೆಲ ತಪ್ಪುಗಳನ್ನು ಮಾಡಿದೆವು. ಇದು ನಮಗೆ ಪಂದ್ಯದ ಮೇಲೆ ಪರಿಣಾಮ ಬೀರಿತು. ಆದರೆ ಎಲ್ಲ ತಪ್ಪುಗಳನ್ನು ತಿದ್ದಿಕೊಂಡು ಮುಂದಿನ ಪಂದ್ಯದಲ್ಲಿ ಗ್ರೇಟ್​ ಕಮ್​ಬ್ಯಾಕ್​ ಮಾಡುತ್ತೇವೆ ಎಂದು ವಿಶ್ವಾಸದ ಮಾತುಗಳನ್ನಾಡಿದ್ದಾರೆ.

ಇದನ್ನೂ ಓದಿ | IND VS SL | ಲಂಕಾ ವಿರುದ್ಧ ಸ್ಫೋಟಕ ಬ್ಯಾಟಿಂಗ್​ ನಡೆಸಿ ಮೂರು ಪ್ರಮುಖ ದಾಖಲೆ ಬರೆದ ಅಕ್ಷರ್​ ಪಟೇಲ್​!

Exit mobile version