Site icon Vistara News

IND VS ZIM | ಜಿಂಬಾಬ್ವೆ ವಿರುದ್ಧ ಎಚ್ಚರ ಅಗತ್ಯ; ಭಾರತ ತಂಡಕ್ಕೆ ಗವಾಸ್ಕರ್ ಕಿವಿಮಾತು​

t20

ಮುಂಬಯಿ: ಟಿ20 ವಿಶ್ವ ಕಪ್​ನಲ್ಲಿ ಬಲಿಷ್ಠ ಪಾಕಿಸ್ತಾನ ತಂಡವನ್ನು ಒಂದು ರನ್​ ಅಂತರದಿಂದ ಮಣಿಸಿ ಗೆದ್ದು ಬೀಗಿರುವ ಜಿಂಬಾಬ್ವೆ (IND VS ZIM ) ವಿರುದ್ಧ ಭಾರತ ತಂಡ ಎಚ್ಚರಿಕೆಯಿಂದ ಆಡಬೇಕೆಂದು ಮಾಜಿ ಕ್ರಿಕೆಟಿಗ ಸುನೀಲ್​ ಗವಾಸ್ಕರ್​ ಅಭಿಪ್ರಾಯಪಟ್ಟಿದ್ದಾರೆ.

“ಜಿಂಬಾಬ್ವೆ ತಂಡ ಪಾಕಿಸ್ತಾನವನ್ನು ಸೋಲಿಸಿದ ಕಾರಣ ಭಾರತ ತಂಡವೂ ಜಿಂಬಾಬ್ವೆ ವಿರುದ್ಧ ಬಹಳ ಎಚ್ಚರಿಕೆಯಿಂದ ಇರಬೇಕು. ಪಾಕಿಸ್ತಾನದ ವಿರುದ್ಧದ ಗೆಲುವಿನಿಂದ ಜಿಂಬಾಬ್ವೆ ಹುಮ್ಮಸ್ಸಿನಲ್ಲಿದೆ” ಎಂದು ಗವಾಸ್ಕರ್ ಹೇಳಿದ್ದಾರೆ. ಜತೆಗೆ ” ಪಾಕಿಸ್ತಾನ ತಮ್ಮ ಉಳಿದ ಮೂರು ಪಂದ್ಯಗಳನ್ನು ದೊಡ್ಡ ಅಂತರದಿಂದ ಗೆಲ್ಲಬೇಕಾಗಿದೆ ಮತ್ತು ಅವರು ದಕ್ಷಿಣ ಆಫ್ರಿಕಾ ವಿರುದ್ಧ ಆಡುತ್ತಿರುವುದರಿಂದ ಅದು ಸುಲಭವಲ್ಲ, ಅದು ಅಗ್ರ ತಂಡವಾಗಿದೆ. ಭಾರತ ತಂಡವೂ ದಕ್ಷಿಣ ಆಫ್ರಿಕಾ ವಿರುದ್ಧ ಆಡುವಾಗ ಬಹಳ ಎಚ್ಚರಿಕೆಯಿಂದ ಇರಬೇಕು,” ಎಂದು ಕಿವಿಮಾತು ಹೇಳಿದ್ದಾರೆ.

“ಟಿ20 ಪಂದ್ಯಗಳಲ್ಲಿ ಏನು ಬೇಕಾದರೂ ಆಗಬಹುದು. ಪಾಕಿಸ್ತಾನ ಕೆಟ್ಟ ತಂಡ ಎಂದು ನಾನು ಭಾವಿಸುವುದಿಲ್ಲ, ಅವರ ತಂಡದಲ್ಲಿಯೂ ಉತ್ತಮ ಗುಣಮಟ್ಟದ ಆಟಗಾರರಿದ್ದಾರೆ. ಆದರೆ ಈ ಪಂದ್ಯಾವಳಿಯಲ್ಲಿ ಸಮಗ್ರ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ” ಎಂದು ಸುನಿಲ್ ಗವಾಸ್ಕರ್ ತಿಳಿಸಿದರು.

ಇದನ್ನೂ ಓದಿ | T20 World Cup | ಜಿಂಬಾಬ್ವೆ ವಿರುದ್ಧದ ಸೋಲಿಗೆ ಕಣ್ಣೀರು ಸುರಿಸಿದ ಪಾಕಿಸ್ತಾನ ಕ್ರಿಕೆಟಿಗ

Exit mobile version