Site icon Vistara News

Team India | ಟೀಮ್‌ ಇಂಡಿಯಾ ಬಸ್‌ಗೆ ಮುತ್ತಿಗೆ ಹಾಕಿದ ಅಭಿಮಾನಿಗಳ ಗುಂಪು, ಅವರ ಆಗ್ರಹವೇನು?

TEAM INDIA

ತಿರುವನಂಪುರ : ಟೀಮ್‌ ಇಂಡಿಯಾದ ಆಟಗಾರರು ದಕ್ಷಿಣ ಆಫ್ರಿಕಾ ವಿರುದ್ಧದ ಟಿ೨೦ ಸರಣಿಗಾಗಿ ತಿರುವನಂತಪುರ ತಲುಪಿದ್ದ ಟೀಮ್‌ ಇಂಡಿಯಾದ ಅಟಗಾರರ ಬಸ್‌ಗೆ ಅಲ್ಲಿನ ಕ್ರಿಕೆಟ್‌ ಅಭಿಮಾನಿಗಳು ಮುತ್ತಿಗೆ ಹಾಕಿದ ಪ್ರಸಂಗ ನಡೆದಿದೆ. ತಮ್ಮ ರಾಜ್ಯದ ಕ್ರಿಕೆಟಿಗ ಸಂಜು ಸ್ಯಾಮ್ಸನ್‌ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಬೇಕು ಎಂಬುದೇ ಅವರ ಹಕ್ಕೊತ್ತಾಯವಾಗಿದೆ.

ತಿರುವನಂತಪುರದಲ್ಲಿ ಬುಧವಾರ ಮೊದಲ ಟಿ೨೦ ಪಂದ್ಯ ಆಯೋಜನೆಗೊಂಡಿದೆ. ಹೀಗಾಗಿ ಆಟಗಾರರು ಸೋಮವಾರ ಕೇರಳದ ರಾಜಧಾನಿ ತಲುಪಿದ್ದರು. ಇನ್ನೇನು ಅವರ ಏರ್‌ಪೋರ್ಟ್‌ನಿಂದ ತಮ್ಮ ಹೋಟೆಲ್‌ಗೆ ಹೋಗುವ ಸಂದರ್ಭದಲ್ಲಿ ಅಲ್ಲಿನ ಕ್ರಿಕೆಟ್‌ ಅಭಿಮಾನಿಗಳು ಏಕಾಏಕಿ ಬಸ್‌ಗೆ ಮುತ್ತಿಗೆ ಹಾಕಿದ್ದಾರೆ. ಬಳಿಕ ಸಂಜು ಸ್ಯಾಮ್ಸನ್‌ ಎಂದು ಕೂಗಿದ್ದಾರೆ. ಬಸ್‌ನಲ್ಲಿದ್ದ ಕ್ರಿಕೆಟಿಗರಾದ ಆರ್‌. ಅಶ್ವಿನ್‌, ಸೂರ್ಯಕುಮಾರ್‌ ಯಾದವ್‌ ಹಾಗೂ ಯಜ್ವೇಂದ್ರ ಚಹಲ್‌ ಅವರು ಸಂಜ್ಞೆ ಮೂಲಕ ಅವರ ಮಾತನಾಡಿದ್ದಾರೆ

ಸಂಜು ಸ್ಯಾಮ್ಸನ್‌ ಅವರಿಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ನೀಡುತ್ತಿಲ್ಲ ಎಂಬುದು ಅವರ ಅಭಿಮಾನಿಗಳು ಹಾಗೂ ಕೇರಳ ಮೂಲದ ಕ್ರಿಕೆಟ್‌ ಅಭಿಮಾನಿಗಳ ಒತ್ತಾಯವಾಗಿದೆ. ಈ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಅಭಿಯಾನ ಕೂಡ ನಡೆಸಿದ್ದರು. ಇದೀಗ ಬಸ್‌ಗೆ ಮುತ್ತಿಗೆ ಹಾಕಿ ತಮ್ಮ ಆಗ್ರಹ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ | Sanju Samson | ನಮ್ಮವರನ್ನೇ ಕೆಳಕ್ಕೆ ತಳ್ಳಿ ತಂಡಕ್ಕೆ ಸೇರುವ ಅಭಿಲಾಷೆ ನನಗಿಲ್ಲ ಎಂದು ಸಂಜು ಸ್ಯಾಮ್ಸನ್​

Exit mobile version