Site icon Vistara News

INDvsNZ T20 : ಆರಂಭಿಕ ಬ್ಯಾಟರ್​ ಋತುರಾಜ್​ ಗಾಯಕ್ವಾಡ್​ಗೆ ಗಾಯ, ಟೂರ್ನಿಯಿಂದ ಔಟ್​

Ruturaj Gaikwad

ರಾಂಚಿ : ಪ್ರವಾಸಿ ನ್ಯೂಜಿಲ್ಯಾಂಡ್​ ವಿರುದ್ಧದ ಟಿ20 (INDvsNZ T20) ಸರಣಿಯ ಮೊದಲ ಪಂದ್ಯಕ್ಕೆ ಮೊದಲು ಭಾರತ ತಂಡಕ್ಕೆ ಆಘಾತ ಎದುರಾಗಿದೆ. ಆರಂಭಿಕ ಬ್ಯಾಟರ್​ ಋತುರಾಜ್​ ಗಾಯಕ್ವಾಡ್​ (Ruturaj Gaikwad) ಗಾಯದ ಸಮಸ್ಯೆಗೆ ಒಳಗಾಗಿದ್ದು ಟೂರ್ನಿಯಿಂದ ಹೊರಕ್ಕೆ ಬಿದಿದ್ದಾರೆ ಎಂಬುದಾಗಿ ಕ್ರಿಕ್​ಬಜ್ (Cricbuzz) ವರದಿ ಮಾಡಿದೆ. 25 ವರ್ಷದ ಯುವ ಆಟಗಾರ ಮಣಿಗಟ್ಟಿನ ನೋವಿನ ಸಮಸ್ಯೆಗೆ ಒಳಗಾಗಿದ್ದಾರೆ. ಅವರು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್​ ಅಕಾಡೆಮಿಗೆ ತೆರಳಲಿದ್ದು ಅವರಲ್ಲಿ ಪುನಶ್ಚೇತನಕ್ಕೆ ಒಳಗಾಗಲಿದ್ದಾರೆ.

ಋತುರಾಜ್​ ಗಾಯಕ್ವಾಡ್ ಅವರು ಮುಂಬಯಿ ತಂಡದ ಪರ ರಣಜಿ ಟ್ರೋಫಿಯಲ್ಲಿ ಆಡಿದ್ದರು. ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಎರಡು ಇನಿಂಗ್ಸ್​ಗಳಲ್ಲಿ ಅವರು 8 ಹಾಗೂ 0 ರನ್​ಗಳಿಗೆ ವಿಕೆಟ್​ ಒಪ್ಪಿಸಿದ್ದರು. ಈ ವೇಳೆ ಅವರಿಗೆ ಕೈ ನೋವಿನ ಸಮಸ್ಯೆ ಎದುರಾಗಿತ್ತು. ಅದೇ ಸಮಸ್ಯೆಯ ಕಾರಣಕ್ಕೆ ನ್ಯೂಜಿಲ್ಯಾಂಡ್ ವಿರುದ್ಧದ ಸರಣಿಯಲ್ಲಿ ಆಡಲು ಸಾಧ್ಯವಾಗುತ್ತಿಲ್ಲ ಎಂಬುದಾಗಿ ಟೀಮ್​ ಇಂಡಿಯಾದ ಮೂಲಗಳು ತಿಳಿಸಿವೆ. ಗಾಯದ ವಿಚಾರದಲ್ಲಿ ಋತುರಾಜ್​ ಗಾಯಕ್ವಾಡ್​ ನತದೃಷ್ಟ ಎನಿಸಿಕೊಂಡಿದ್ದಾರೆ. ಶ್ರೀಲಂಕಾ ವಿರುದ್ಧದ ಸರಣಿಯ ವೇಳೆಯೂ ಅವರಿಗೆ ಕೈ ನೋವಿನ ಸಮಸ್ಯೆ ಕಾಣಿಸಿಕೊಂಡು ತಂಡದಲ್ಲಿ ಆಡುವ ಅವಕಾಶ ಕಳೆದುಕೊಂಡಿದ್ದರು. ಅದೇ ರೀತಿ ಕಳೆದ ವರ್ಷ ಪ್ರವಾಸಿ ವೆಸ್ಟ್​ ಇಂಡೀಸ್​ ವಿರುದ್ಧದ ಏಕ ದಿನ ಸರಣಿಯನ್ನೂ ಕೊರೊನಾ ಕಾರಣಕ್ಕೆ ಕಳೆದುಕೊಂಡಿದ್ದರು.

ಇದನ್ನೂ ಓದಿ : Vijay Hazare Trophy | ಸೌರಾಷ್ಟ್ರ ತಂಡಕ್ಕೆ ವಿಜಯ್‌ ಹಜಾರೆ ಟ್ರೋಫಿ; ಋತುರಾಜ್‌ ಹೋರಾಟ ವ್ಯರ್ಥ

ಋತುರಾಜ್​ ಗಾಯಕ್ವಾಡ್​ ಪದೇಪದೆ ಗಾಯಗೊಳ್ಳುತ್ತಿರುವುದು ಟೀಮ್​ ಇಂಡಿಯಾದ ಮ್ಯಾನೇಜ್ಮೆಂಟ್​ಗೆ ತಲೆಬಿಸಿಯ ವಿಚಾರವಾಗಿ ಪರಿಣಮಿಸಿದೆ. ಆದಾಗ್ಯೂ ಅವರು ಸುಧಾರಿಸಿಕೊಂಡು ವಾಪಸ್​ ಬರುವ ನಿರೀಕ್ಷೆಯಿದೆ. ಹೀಗಾಗಿ ನ್ಯೂಜಿಲ್ಯಾಂಡ್​ ವಿರುದ್ಧದ ಸರಣಿಗೆ ಪರ್ಯಾಯ ಆಟಗಾರನನ್ನು ಆಯ್ಕೆ ಮಾಡಿಲ್ಲ.

Exit mobile version