Site icon Vistara News

IPL 2023: ಪದಾರ್ಪಣ ಪಂದ್ಯದಲ್ಲೇ ಸ್ಟೇಡಿಯಂನಿಂದ ಹೊರಕ್ಕೆ ಸಿಕ್ಸರ್​ ಬಾರಿಸಿದ ವಧೇರಾ; ವಿಡಿಯೊ ವೈರಲ್​

IPL 2023: Vadhera hit a six outside the stadium in the debut match; The video is viral

IPL 2023: Vadhera hit a six outside the stadium in the debut match; The video is viral

ಬೆಂಗಳೂರು: ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಮುಂಬೈ ಇಂಡಿಯನ್ಸ್​ ವಿರುದ್ಧ 8 ವಿಕೆಟ್​ ಗೆಲುವು ದಾಖಲಿಸಿದೆ. ಆದರೆ ಪಂದ್ಯದಲ್ಲಿ ಆರ್​ಸಿಬಿ ಗೆಲುವಿಗಿಂತ ಹೆಚ್ಚು ಸುದ್ದಿಯಾಗಿದ್ದು ಮುಂಬೈ ತಂಡದ ಯುವ ಬ್ಯಾಟರ್ ನೆಹಾಲ್​ ವಧೇರಾ(Nehal Wadhera) ಅವರು ಬಾರಿಸಿದ ಒಂದು ಸಿಕ್ಸರ್​. ಪದಾರ್ಪಣ ಪಂದ್ಯದಲ್ಲಿಯೇ ಅವರು ಸ್ಟೇಡಿಯಂನಿಂದ ಹೊರಕ್ಕೆ ಸಿಕ್ಸರ್​ ಹೊಡೆದು ಇದೀಗ ಎಲ್ಲರ ಗಮನ ಸೆಳೆದಿದ್ದಾರೆ. ಅವರ ಸಿಕ್ಸರ್​ನ ಈ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ನೆಹಾಲ್​ ಬ್ಯಾಟಿಂಗ್​ ಶೈಲಿಯನ್ನು ಭಾರತ ತಂಡದ ಮಾಜಿ ದಿಗ್ಗಜ ಯುವರಾಜ್​ ಸಿಂಗ್​ ಅವರಿಗೆ ಹೋಲಿಕೆ ಮಾಡಲಾಗುತ್ತಿದೆ. ಜತೆಗೆ ಈ ಉದಯೋನ್ಮುಖ ಆಟಗಾರನ ಸಾಧನೆಯ ಪಟ್ಟಿಗಳನ್ನು ನೆಟ್ಟಿಗರು ಎಲ್ಲಡೆ ಶೇರ್​ ಮಡಲಾರಂಭಿಸಿದ್ದಾರೆ. ಅಂಡರ್-19ನಿಂದಲೂ ದೇಶಿ ಕ್ರಿಕೆಟ್​ ಟೂರ್ನಿಗಳಲ್ಲಿ ಗಮನಾರ್ಹ ಪ್ರದರ್ಶನ ತೋರುತ್ತಿರುವ ವಧೇರಾ ಮಧ್ಯಮ ಕ್ರಮಾಂಕದಲ್ಲಿ ಆಕ್ರಮಣಕಾರಿ ಬ್ಯಾಟಿಂಗ್​ ತೋರಿದ್ದಾರೆ.

2018ರಲ್ಲಿ ಅಂಡರ್​​-19 ಕೂಚ್ ಬೆಹಾರ್ ಟ್ರೋಫಿಯಲ್ಲಿ ಆರು ಅರ್ಧ ಶತಕಗಳನ್ನು ಬಾರಿಸುವ ಮೂಲಕ ತಮ್ಮ ಸಾಮರ್ತ್ಯವನ್ನು ತೋರಿದ್ದರು. 2022ರ ಪಂಜಾಬ್ ರಾಜ್ಯ ಅಂತರ್​​ ಜಿಲ್ಲಾ ಪಂದ್ಯಾವಳಿಯಲ್ಲಿ ಅಂಡರ್​​-23 ವಿರುದ್ಧ 578 ರನ್​ಗಳ ಬೃಹತ್​ ಮೊತ್ತ ಬಾರಿಸಿ ದಾಖಲೆ ಬರೆದಿದ್ದರು. ರಣಜಿ ಟ್ರೋಫಿ ಕ್ರಿಕೆಟ್​ನಲ್ಲಿ ಪಂಜಾಬ್​ ತಂಡದ ಪರ ಆಡುತ್ತಿರುವ ವಧೇರಾ ಗುಜರಾತ್ ವಿರುದ್ಧದ ಚೊಚ್ಚಲ ರಣಜಿ ಪಂದ್ಯದಲ್ಲಿ ಶತಕ (123) ಬಾರಿಸಿ ಮಿಂಚಿದ್ದರು. 2022-23ರ ಋತುವಿನಲ್ಲಿ ಮಧ್ಯಪ್ರದೇಶ ವಿರುದ್ಧ ದ್ವಿಶತಕ (214) ಗಳಿಸುವ ಮೂಲಕ ಮಿಂಚಿನ ಪ್ರದರ್ಶನ ಮುಂದುವರೆಸಿದ್ದರು. ಇದೀಗ ಐಪಿಎಲ್​ನಲ್ಲಿಯೂ ವಧೇರಾ ತಮ್ಮ ಬ್ಯಾಟಿಂಗ್​ ಪ್ರದರ್ಶನ ತೋರುಲು ಮುಂದಾಗಿದ್ದಾರೆ.

ಇದನ್ನೂ ಓದಿ IPL 2023: ಐಪಿಎಲ್​ನಲ್ಲಿ ನೂತನ ದಾಖಲೆ ಬರೆದ ವಿರಾಟ್​ ಕೊಹ್ಲಿ; ಏನದು?

ಕೊಹ್ಲಿ ಮೆಚ್ಚುಗೆ

22 ವರ್ಷದ ವಧೇರಾ ಅವರ ಬ್ಯಾಟಿಂಗ್​ ಬಗ್ಗೆ ವಿರಾಟ್​ ಕೊಹ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ಮುಂದಿನ ದಿನಗಳಲ್ಲಿ ವಧೇರಾ ಅವರಿಗೆ ಕ್ರಿಕೆಟ್​ನಲ್ಲಿ ಉಜ್ವಲ ಭವಿಷ್ಯವಿದೆ. ಅವರ ಬ್ಯಾಟಿಂಗ್​ ನೋಡುವಾಗ ಮುಂದಿನ ದಿನಗಳಲ್ಲಿ ಟೀಮ್​ ಇಂಡಿಯಾಕ್ಕೆ ಮತ್ತೊಂದು ಯುವರಾಜ್​ ಸಿಂಗ್​ ಲಭ್ಯವಾಗುವ ಸಾಧ್ಯತೆ ಇದೆ” ಎಂದು ಕೊಹ್ಲಿ ಹೇಳಿದ್ದಾರೆ. ಆರ್​ಸಿಬಿ ವಿರುದ್ಧ ಅವರು 13 ಎಸೆತಗಳಿಂದ 21 ರನ್​ ಚಚ್ಚಿದರು. ಇದರಲ್ಲಿ ಎರಡು ಸಿಕ್ಸರ್​ ಮತ್ತು ಒಂದು ಬೌಂಡರಿ ಒಳಗೊಂಡಿತು.

ಇದನ್ನೂ ಓದಿ IPL 2023: ಟಿ20 ಕ್ರಿಕೆಟ್​ನಲ್ಲಿ ವಿಶೇಷ ದಾಖಲೆ ಬರೆದ ಯಜುವೇಂದ್ರ ಚಾಹಲ್

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ ನಡೆಸಿದ ಮುಂಬೈ ತಂಡ ತಿಲಕ್​ ವರ್ಮ(ಅಜೇಯ 84) ಅವರ ಏಕಾಂಗಿಯಾಗಿ ಹೋರಾಟದ ನೆರವಿನಿಂದ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 171 ರನ್​ ಪೇರಿಸಿತು. ದೊಡ್ಡ ಮೊತ್ತವನ್ನು ಲೀಲಾಜಾಲವಾಗಿ ಬೆನ್ನಟ್ಟಿದ ಆರ್​ಸಿಬಿ 16.2 ಓವರ್​ಗಳಲ್ಲಿ 2 ವಿಕೆಟ್​ನಷ್ಟಕ್ಕೆ 172 ರನ್​ ಬಾರಿಸಿ ಗೆಲುವಿನ ನಗೆ ಬೀರಿತು.

Exit mobile version