Site icon Vistara News

IPL 2023: ಆರ್​ಸಿಬಿ ಸೋಲಿಗೆ ಕಾರಣ ತಿಳಿಸಿದ ಜಹೀರ್​ ಖಾನ್​

IPL 2023: Zaheer Khan explained the reason for RCB's defeat

IPL 2023: Zaheer Khan explained the reason for RCB's defeat

ಬೆಂಗಳೂರು: ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ 8 ರನ್​ಗಳ ಅಂತರದಿಂದ ಸೋಲು ಕಂಡಿದೆ. ಈ ಸೋಲಿಗೆ ಟೀಮ್​ ಇಂಡಿಯಾದ ಮಾಜಿ ವೇಗಿ ಜಹೀರ್​ ಖಾನ್ ಅವರು ಪ್ರಮುಖ ಕಾರಣವನ್ನು​ ತಿಳಿಸಿದ್ದಾರೆ.

ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಚೆನ್ನೈ ಸೂಪರ್​ ಕಿಂಗ್ಸ್​ ತಂಡ 6 ವಿಕೆಟಿಗೆ 226 ರನ್‌ ಪೇರಿಸಿತು. ಬೃಹತ್​ ಮೊತ್ತವನ್ನು ದಿಟ್ಟ ರೀತಿಯಲ್ಲೇ ಬೆನ್ನಟ್ಟಿದ ಆರ್‌ಸಿಬಿ 8 ವಿಕೆಟಿಗೆ 218 ರನ್‌ ಮಾಡಿ ಸಣ್ಣ ಅಂತರದ ಸೋಲ ಕಂಡಿತು. ತಂಡದ ಈ ಸೋಲಿಗೆ ದಿನೇಶ್​ ಕಾರ್ತಿಕ್​ ಅವರ ಬ್ಯಾಟಿಂಗ್​ ವೈಫಲ್ಯವೇ ಕಾರಣ ಎಂದು ಜಹೀರ್​ ಖಾನ್​ ಹೇಳಿದ್ದಾರೆ.

ಜಿಯೋ ಸಿನಿಮಾ ನಡೆಸಿಕೊಟ್ಟ ಕಾರ್ಯಕ್ರಮದಲ್ಲಿ ಮಾತನಾಡಿದ ಜಹೀರ್​ ಖಾನ್​, ವಿರಾಟ್‌ ಕೊಹ್ಲಿ (6) ಮತ್ತು ಮಹಿಪಾಲ್‌ ಲೊಮ್ರೊರ್‌ (0) ಅವರನ್ನು ಆರಂಭದಲ್ಲೇ ಕಳೆದುಕೊಂಡು ಆರ್​ಸಿಬಿ ಸಂಕಷ್ಟಕ್ಕೆ ಸಿಲುಕಿತು. ಆದರೆ ನಾಯಕ ಫಾ ಡು ಪ್ಲೆಸಿಸ್‌ ಮತ್ತು ಗ್ಲೆನ್‌ ಮ್ಯಾಕ್ಸ್‌ವೆಲ್‌ ಆಧಾರವಾದರು. ಚೆನ್ನೈಯ ಬೌಲಿಂಗ್​ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಈ ಜೋಡಿ ಚಿನ್ನಸ್ವಾಮಿಯಲ್ಲಿ ಸಿಕ್ಸರ್​ ಮತ್ತು ಬೌಂಡರಿಗಳ ಸುರಿಮಳೆಗೈದರು. ಜತೆಗೆ ಆಕರ್ಷಕ ಅರ್ಧಶತವನ್ನು ಬಾರಿಸಿ ಮಿಂಚಿದರು. ಇವರಿಬ್ಬರೇ ಸೇರಿಕೊಂಡು ಪಂದ್ಯವನ್ನು ಗೆಲ್ಲಿಸುತ್ತಾರೆ ಎಂದು ಭಾವಿಸಲಾಗಿತ್ತು. ಆದರೆ ಈ ವಿಕೆಟ್​ ಪತನದ ಬಳಿಕ ಆಡಲಿಳಿದ ಯಾವುದೇ ಬ್ಯಾಟರ್​ ಜವಾಬ್ದಾರಿಯು ಬ್ಯಾಟಿಂಗ್​ ನಡೆಸಲಿಲ್ಲ. ಇದು ಸೋಲಿಗೆ ಪ್ರಮುಖ ಕಾರಣ ಎಂದು ಜಹೀರ್​ ಹೇಳಿದರು.

ಇದನ್ನೂ ಓದಿ IPL 2023: ಪಂದ್ಯದ ವೇಳೆ ತಾಳ್ಮೆ ಕಳೆದುಕೊಂಡ ಮಹೇಂದ್ರ ಸಿಂಗ್​ ಧೋನಿ; ವಿಡಿಯೊ ವೈರಲ್​

ಡು ಪ್ಲೆಸಿಸ್ ಮತ್ತು ಮ್ಯಾಕ್ಸ್​ವೆಲ್​ ವಿಕೆಟ್​ ಪತನಗೊಂಡರು ಆರ್​ಸಿಬಿಗೆ ಗೆಲ್ಲಬಹುದಾಗಿತ್ತು. ಏಕೆಂದರೆ ಓವರ್​ಗೆ 7 ರಿಂದ ಎಂಟು ರನ್​ ಗಳಿಸುವ ಸವಾಲು ಮಾತ್ರ ಇತ್ತು. ಆದರೆ ದಿನೇಶ್‌ ಕಾರ್ತಿಕ್‌ ಅವರು ಅವಸರದ ಆಟಕ್ಕೆ ಮುಂದಾದದ್ದು ಪಂದ್ಯದ ಸೋಲಿಗೆ ಪ್ರಮುಖ ಕಾರಣ. ಅವರು ಈ ಹಿಂದಿನ ಫಿನಿಷರ್‌ ಪಾತ್ರವನ್ನು ವಹಿಸಿಕೊಳ್ಳುವಲ್ಲಿ ಸಂಪೂರ್ಣ ವಿಫಲರಾಗುತ್ತಿದ್ದಾರೆ. ಜತೆಗೆ ಆರ್​ಸಿ ತಂಡದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್​ ಕೊರತೆ ಎದ್ದು ಕಾಣುತ್ತಿದೆ ಎಂದು ಜಹೀರ್​ ಅಭಿಪ್ರಾಯಪಟ್ಟರು.

Exit mobile version