Site icon Vistara News

IPL 2024: ಮಿನಿ ಹರಾಜಿನಲ್ಲಿ ಅನ್​ಸೋಲ್ಡ್​ ಆದ ಕರ್ನಾಟಕದ ಆಟಗಾರರ ಪಟ್ಟಿ

shreyas gopal and manish pandey

ಬೆಂಗಳೂರು: ಈ ಬಾರಿಯ ಐಪಿಎಲ್(IPL 2024)​ ಮಿನಿ ಹರಾಜಿನಲ್ಲಿ ಒಟ್ಟು 333 ಆಟಗಾರರ ಪೈಕಿ 14 ಮಂದಿ ಕರ್ನಾಟಕದ ಆಟಗಾರರು ಸ್ಥಾನ ಪಡೆದಿದ್ದರು. ಆದರೆ ಮಾರಾಟವಾದದ್ದು ಕೇವಲ ಇಬ್ಬರು ಮಾತ್ರ. ಅನ್​ಸೋಲ್ಡ್​ ಮತ್ತು ಸೋಲ್ಡ್​ ಆದ ಆಟಗಾರರು ಯಾರೆಂಬ ಮಾಹಿತಿ ಇಂತಿದೆ.

ಸೋಲ್ಡ್​ ಆದ ಆಟಗಾರರು

ಮನೀಶ್ ಪಾಂಡೆ

ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಮನೀಶ್ ಪಾಂಡೆ 50 ಲಕ್ಷ ಮೂಲಬೆಲೆ ಹೊಂದಿದ್ದರು. ಆರಂಭಿಕ ಹಂತದ ಹರಾಜಿನಲ್ಲಿ ಅವರನ್ನು ಯಾವುದೇ ತಂಡ ಖರೀದಿಸಿರಲಿಲ್ಲ. ದ್ವಿತೀಯ ಸುತ್ತಿನಲ್ಲಿ ಅವರನ್ನು ಮೂಲಬೆಲೆಗೆ 2 ಬಾರಿಯ ಚಾಂಪಿಯನ್​ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಖರೀದಿಸಿತು. ಆರ್​ಸಿಬಿ ತಂಡ ಇವರನ್ನು ಖರೀದಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು. ಆದರೆ ಆರ್​ಸಿಬಿ ಖರೀಸಲಿಲ್ಲ. ಅಲ್ಲದೆ ಈ ಬಾರಿಯೂ ಕರ್ನಾಟಕದ ಆಟಗಾರರಿಗೆ ಆರ್​ಸಿಬಿ ಮಣೆ ಹಾಕಿಲ್ಲ. 170 ಐಪಿಎಲ್‌ ಆಡಿರುವ ಪಾಂಡೆ 3808 ರನ್‌ ಬಾರಿಸಿದ್ದಾರೆ. 1 ಶತಕ ಮತ್ತು 22 ಅರ್ಧಶತಕ ಬಾರಿಸಿದ್ದಾರೆ. 114 ಗರಿಷ್ಠ ವೈಯಕ್ತಿಕ ಮೊತ್ತವಾಗಿದೆ.

ಶ್ರೇಯಸ್ ಗೋಪಾಲ್

20 ಲಕ್ಷ ರೂ. ಮೂಲಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ಕರ್ನಾಟಕದ ಸ್ಪಿನ್ನ ಆಲ್​ರೌಂಡರ್​ ಶ್ರೇಯಸ್ ಗೋಪಾಲ್ ಅವರನ್ನು ಮುಂಬೈ ಇಂಡಿಯನ್ಸ್ ಖರೀದಿಸಿದೆ. ಇವರು ಕೂಡ ದ್ವಿತೀಯ ಸುತ್ತಿನಲ್ಲಿ ಸೇಲ್​ ಆದರು. 30 ವರ್ಷದ ಶ್ರೇಯಸ್ ಗೋಪಾಲ್ ಇದುವರೆಗೆ 49 ಐಪಿಎಲ್​ ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದಾರೆ. 49 ವಿಕಟ್​ ಕೂಡ ಪಡೆದಿದ್ದಾರೆ. 16 ರನ್​ಗೆ 4 ವಿಕೆಟ್​ ಕಿತ್ತಿರುವುದು ಅವರ ವೈಯಕ್ತಿಕ ಶ್ರೇಷ್ಠ ಸಾಧನೆಯಾಗಿದೆ.

ಹರಾಜಾಗದ ಆಟಗಾರರು

ಕರುಣ್ ನಾಯರ್

ಜಗದೀಶ್ ಸುಚಿತ್

ಶುಭಾಂಗ್ ಹೆಗ್ಡೆ

ನಿಹಾಲ್ ಉಲ್ಲಾಳ್

ಬಿ ಆರ್​ ಶರತ್

ಮನ್ವಂತ್ ಕುಮಾರ್

ಎಲ್​ ಆರ್​ ಚೇತನ್

ಕೆ ಎಲ್​ ಶ್ರೀಜಿತ್​

ಎಂ. ವೆಂಕಟೇಶ್​

ಮೋನಿಶ್​ ರೆಡ್ಡಿ

ಅಭಿಲಾಷ್​ ಶೆಟ್ಟಿ

ಕೆ.ಸಿ ಕಾರ್ಯಪ್ಪ

ಇದನ್ನೂ ಓದಿ IPL 2024: 8.4 ಕೋಟಿಗೆ ಚೆನ್ನೈ ಸೇರಿದ ಸಮೀರ್ ರಿಜ್ವಿ ಯಾರು?, ಈತನ ಹಿನ್ನೆಲೆ ಏನು?

ಮೊತ್ತೊಂದು ಅವಕಾಶವಿದೆ!

ಅನ್​ಸೋಲ್ಡ್​ ಆದ ಆಟಗಾರರಿಗೆ ಇನ್ನು ಕೂಡ ಐಪಿಎಲ್​ ತಂಡ ಸೇರುವ ಅವಕಾಶವಿದೆ. ಇದು ಹೇಗೆ ಎನ್ನುವ ಪ್ರಶ್ನೆ ಕ್ರಿಕೆಟ್​ ಅಭಿಮಾನಿಗಳಲ್ಲಿ ಮೂಡುವುದು ಸಹಜ. ಐಪಿಎಲ್​ ತಂಡ ಸೇರಿದ ಯಾವುದೇ ಆಟಗಾರ ಗಾಯಗೊಂಡು ಅಥವಾ ಇತರ ಕಾರಣಗಳಿಂದ ಟೂರ್ನಿಗೆ ಅಲಭ್ಯರಾದರೆ ಆಗ ಅನ್​ಸೋಲ್ಡ್​ ಆದ ಆಟಗಾರರಿಗೆ ಅದೃಷ್ಟ ಖುಲಾಯಿಸಲಿದೆ.

ಇದಕ್ಕೆ ತಕ್ಕ ನಿದರ್ಶನವೆಂದರೆ, ಕಳೆದ ಬಾರಿಯ ಮಿನಿ ಹರಾಜಿನಲ್ಲಿ 1 ಕೋಟಿ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ಟೀಮ್​ ಇಂಡಿಯಾದ ಹಿರಿಯ ಆಟಗಾರ ಕೇದಾರ್​ ಜಾಧವ್ ಅವರನ್ನು ಯಾವುದೇ ಫ್ರಾಂಚೈಸಿ ಖರೀದಿಸಿರಲಿಲ್ಲ. ಹೀಗಾಗಿ ಅವರು ಅನ್​ಸೋಲ್ಡ್​ ಆಟಗಾರರ ಪಟ್ಟಿಯಲ್ಲಿದ್ದರು. ಆಡುವ ಅವಕಾಶ ಸಿಗದ ಕಾರಣ ಅವರು ಸ್ಟಾರ್​​ ಸ್ಪೋರ್ಟ್ಸ್​ನಲ್ಲಿ ಟೂರ್ನಿಯ ಕಾಮೆಂಟ್ರಿ ನಡೆಸುವು ಕಾರ್ಯದಲ್ಲಿ ತೊಡಗಿಕೊಂಡಿದ್ದರು. ಆರ್​ಸಿಬಿಯ ಬೌಲರ್​ ಡೇವಿಡ್​ ವಿಲ್ಲಿ ಅವರು ಗಾಯಗೊಂಡು ಟೂರ್ನಿಯಿಂದ ಹೊರಬಿದ್ದರು. ಇವರ ಸ್ಥಾನಕ್ಕೆ ಕೇದಾರ್​ ಆಯ್ಕೆಯಾದರು. ಹೀಗಾಗಿ ಈ ಬಾರಿ ಅನ್​ಸೋಲ್ಡ್​ ಆದ ಆಟಗಾರರಿಗೆ ಇದೇ ರೀತಿಯ ಅವಕಾಶ ಸಿಕ್ಕರೂ ಅಚ್ಚರಿಯಿಲ್ಲ. ಆದರ ಅದೃಷ್ಟ ನೆಟ್ಟಗಿರಬೇಕು.

Exit mobile version