Site icon Vistara News

IPL 2024: ಆರ್​ಸಿಬಿ ಸೋಲಿಗೆ ವಿರಾಟ್​ ಕೊಹ್ಲಿಯೇ ಕಾರಣ ಎಂದ ಮಾಜಿ ಆಟಗಾರ

IPL 2024

ಮುಂಬಯಿ: ರಾಯಲ್​ ಚಾಲೆಂಜರ್ಸ್​ ಬೆಂಗಳೂರು(RCB) ತಂಡ ಮೂರು ಪಂದ್ಯಗಳನ್ನು ಆಡಿ ಕೇವಲ ಒಂದು ಪಂದ್ಯದಲ್ಲಿ ಮಾತ್ರ ಗೆಲುವು ಸಾಧಿಸಿದೆ. ಕಳೆದ ಕೆಕೆಆರ್​ ವಿರುದ್ಧದ ಸೋಲಿಗೆ(IPL 2024) ವಿರಾಟ್​ ಕೊಹ್ಲಿಯ(Virat Kohli) ನಿಧಾನಗತಿಯ ಬ್ಯಾಟಿಂಗ್​ ಪ್ರಮುಖ ಕಾರಣ ಎಂದು ಮಾಜಿ ಆಟಗಾರ ಆಕಾಶ್​ ಚೋಪ್ರಾ(Aakash Chopra) ಹೇಳಿದ್ದಾರೆ.

ವಿರಾಟ್​ ಕೊಹ್ಲಿ ಕೆಕೆಆರ್​ ವಿರುದ್ಧ 83 ರನ್​ ಗಳಿಸಿದ್ದರೂ ಕೂಡ ಈ ಮೊತ್ತವನ್ನು ಪೇರಿಸಲು 59 ಎಸೆತಗಳನ್ನು ಎದುರಿಸಬೇಕಾಯಿತು. ಇದು ಟಿ20 ಕ್ರಿಕೆಟ್​ನಲ್ಲಿ ಯಾವುದೇ ಪ್ರಯೋಜನಕ್ಕೆ ಬರುವುದಿಲ್ಲ. ಅದರಲ್ಲೂ ಆರಂಭಿನಾಗಿ ಕಣಕ್ಕಿಳಿದು ಇಷ್ಟು ನಿಧಾನಗತಿಯ ಬ್ಯಾಟಿಂಗ್​ ನಡೆಸುವುದರಲ್ಲಿಯೂ ಅರ್ಥವಿಲ್ಲ. ಇವರ ನಿಧಾನ ಗತಿಯ ಬ್ಯಾಟಿಂಗ್​ನಿಂದ ಉತ್ತಮವಾಗಿ ಬ್ಯಾಟ್​ ಬೀಸುವ ದಿನೇಶ್​ ಕಾರ್ತಿಕ್​ ಮತ್ತು ಮಹಿಪಾಲ್ ಲೋಮ್ರೋರ್ ಅವರಿಗೆ ಹೆಚ್ಚಿನ ಎಸೆತಗಳು ಸಿಗುತ್ತಿಲ್ಲ. ಆದರೂ ಕೂಡ ಈ ಉಭಯ ಆಟಗಾರರು ಸಿಕ್ಕ ಒಂದೆಡರು ಎಸೆತಗಳಲ್ಲಿ ದೊಡ್ಡ ಮೊತ್ತ ಕಲೆಹಾಕಿ ತಂಡದ ಮೊತ್ತವನ್ನು ಹಿಗ್ಗಿಸುತ್ತಿದ್ದಾರೆ. ತಂಡದ ಸೋಲಿಗೆ ಕೊಹ್ಲಿಯ ಆಮೆ ಗತಿಯ ಬ್ಯಾಟಿಂಗೇ ಪ್ರಮುಖ ಕಾರಣ ಎಂದು ಆಕಾಶ್​ ಚೋಪ್ರಾ ಅವರು ಕೊಹ್ಲಿ ಮೇಲೆ ನೇರ ಆರೋಪ ಹೊರಿಸಿದ್ದಾರೆ.

ಇದನ್ನೂ ಓದಿ IPL 2024: ಐಪಿಎಲ್​ ಪ್ರಿಯರಿಗೆ ಇಂದು ಡಬಲ್​ ಧಮಾಕಾ

ಕೊಹ್ಲಿ ತಂಡಕ್ಕೆ ಆಸರೆಯಾಗುತ್ತಿರುವುದು ನಿಜ. ಆದರೆ ನಿಧಾನಗತಿಯ ಬ್ಯಾಟಿಂಗ್​ ಸಲ್ಲದು. ಏಕದಿನ, ಟೆಸ್ಟ್​ ಕ್ರಿಕೆಟ್​ಗೆ ಈ ಪ್ರದರ್ಶನ ಓಕೆ. ಹೊಡಿಬಡಿ ಶೈಲಿಯ ಟಿ20ಗೆ ಇದು ಸಲ್ಲದು ಎನ್ನುವುದು ಆಕಾಶ್​ ಚೋಪ್ರಾ ಅಭಿಪ್ರಾಯ. ಕಳೆದ ವರ್ಷದ ಆವೃತ್ತಿಯಲ್ಲಿ ಕೊಹ್ಲಿ ಬಿರುಸಿನ ಬ್ಯಾಟಿಂಗ್​ ನಡೆಸಿದ್ದರು. ಆದರೆ ಈ ಬಾರಿ ರನ್​ ಗಳಿಸಿದರೂ ಕೂಡ ಇದಕ್ಕಾಗಿ ಹೆಚ್ಚಿನ ಎಸೆತಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಹೀಗಾಗಿ ಕೊಹ್ಲಿ ಮುಂದಿನ ಪಂದ್ಯಲ್ಲಿ ತಮ್ಮ ಬ್ಯಾಟಿಂಗ್​ ಶೈಲಿಗೆ ಚುರುಕು ಮುಟ್ಟಿಸಿಬೇಕಿದೆ.

ಬೌಲಿಂಗ್​ ಕೂಡ ಸುಧಾರಣೆ ಕಾಣಬೇಕಿದೆ


ಕೊಹ್ಲಿಯ ನಿಧಾನಗತಿಯ ಬ್ಯಾಟಿಂಗ್​ ಮಾತ್ರವಲ್ಲದೆ ತಂಡದ ಬೌಲಿಂಗ್​ ಕೂಡ ಸುಧಾರಣೆ ಕಾಣಬೇಕು ಎಂದು ಚೋಪ್ರಾ ಸಲಹೆ ನೀಡಿದ್ದಾರೆ. ವಿಕೆಟ್​ ಟೇಕರ್​ ಬೌಲರ್​ ಎನಿಸಕೊಂಡಿದ್ದ ಮೊಹಮ್ಮದ್​ ಸಿರಾಜ್​ ವಿಕೆಟ್​ ಲೆಸ್​ ಎನಿಸಿಕೊಳ್ಳುತ್ತಿದ್ದಾರೆ. ಅಲ್ಜಾರಿ ಜೋಸೆಫ್​ ಪ್ರತಿ ಪಂದ್ಯದಲ್ಲಿಯೂ ದುಬಾರಿಯಾದರೂ ಕೂಡ ಅವರಿಗೆ ಮತ್ತೆ ಮತ್ತೆ ಅವಕಾಶ ನೀಡುತ್ತಿರುವುದು ಕೂಡ ತಂಡ ಸೋಲಿನ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಅನುಭವಿ ಆಟಗಾರರು ತಂಡದಲ್ಲಿದ್ದರೂ ಕೂಡ ಅವರನ್ನು ಬೆಂಚ್​ ಬಿಸಿ ಮಾಡಿಸುವ ಪದ್ಧತಿಯನ್ನು ಕೈ ಬಿಟ್ಟರೆ ಆರ್​ಸಿಬಿ ಗೆಲುವಿನ ಹಳಿ ಏರಬಹುದು. ಇಲ್ಲವಾದಲ್ಲಿ ಲೀಗ್​ನಿಂದಲೇ ಹೊರಬಿಳುವುದು ಖಚಿತ ಎಂದು ಚೋಪ್ರಾ ಹೇಳಿದ್ದಾರೆ.

Exit mobile version