Site icon Vistara News

INDvsNZ ODI | ನ್ಯೂಜಿಲ್ಯಾಂಡ್​ ವಿರುದ್ಧ ಭಾರತ ತಂಡವನ್ನು ಗೆಲ್ಲಿಸಿದ್ದು ನಾಯಕ ರೋಹಿತ್ ಶರ್ಮಾ ಅಲ್ಲ, ವಿರಾಟ್​ ಕೊಹ್ಲಿ!

shardul takur

ಹೈದರಾಬಾದ್​: ಪ್ರವಾಸಿ ನ್ಯೂಜಿಲ್ಯಾಂಡ್​​ ವಿರುದ್ಧದ ಏಕ ದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ 12 ರನ್​ಗಳ ವಿಜಯ ಸಾಧಿಸಿದೆ. ಹಾಗೆಂದು ಈ ಜಯ ಸುಲಭವಾಗಿರಲಿಲ್ಲ. ಯಾಕೆಂದರೆ ಶಾರ್ದೂಲ್​ ಠಾಕೂರ್ ಎಸೆದ ಕೊನೇ ಓವರ್​ನಲ್ಲಿ ಎದುರಾಳಿ ತಂಡದ ಗೆಲುವಿಗೆ 20 ರನ್​ಗಳು ಬೇಕಾಗಿತ್ತು. ಮೊದಲ ಎಸೆತದಲ್ಲಿಯೇ ಬ್ರೇಸ್​ವೆಲ್ ಸಿಕ್ಸರ್​ ಬಾರಿಸಿದ್ದರು. ನಂತರದ ಎಸೆತ ವೈಡ್. ಹೀಗಾಗಿ ಕೊನೇ ಐದು ಎಸೆತಗಳಲ್ಲಿ 13 ರನ್​ ಸಾಕಾಗಿತ್ತು. ಸ್ಫೋಟಕ ಬ್ಯಾಟರ್​ ಬ್ರೇಸ್​ವೆಲ್ 140 ರನ್​ ಬಾರಿಸಿ ​ ಸ್ಟ್ರೈಕ್​ನಲ್ಲಿದ್ದರು. ಹೀಗಾಗಿ ಭಾರತಕ್ಕೆ ಸೋಲು ಖಚಿತವೆಂದೇ ಹೇಳಲಾಯಿತು. ಆದರೆ, ಠಾಕೂರ್​ ಎಸೆದ ಎರಡನೇ ಎಸೆತಕ್ಕೆ ರಿವರ್ಸ್​ ಸ್ವೀಪ್​ ಮಾಡಲು ಮುಂದಾದ ಬ್ರೇಸ್​ವೆಲ್​ ಎಲ್​ಬಿಡಬ್ಲ್ಯು ಬಲೆಗೆ ಬಿದ್ದರು. ನ್ಯೂಜಿಲ್ಯಾಂಡ್​ ತಂಡ 337 ರನ್​ಗಳಿಗೆ ಸರ್ವಪತನ ಕಂಡಿತು.

ಕೊನೇ ಹಂತದವರೆಗೂ ಭಾರತ ತಂಡದ ಬೌಲರ್​ಗಳನ್ನು ಬೆಂಡೆತ್ತಿದ್ದ ಬ್ರೇಸ್​ವೇಲ್ ಅವರನ್ನು ಶಾರ್ದೂಲ್​ ಠಾಕೂರ್​ ಎಲ್​ಬಿಡಬ್ಲ್ಯು ಬಲೆಗೆ ಕೆಡವಿಚ್ದು ಅಚ್ಚರಿಯ ವಿಷಯ. ಆದರೆ, ಈ ತಂತ್ರವನ್ನು ಶಾರ್ದೂಲ್​ಗೆ ಹೇಳಿ ಕೊಟ್ಟಿರುವುದು ವಿರಾಟ್ ಕೊಹ್ಲಿ. ಯಾರ್ಕರ್​ ಎಸೆತ ಎಸೆಯುವ ಮೂಲಕ ಎಲ್​ಬಿಡಬ್ಲ್ಯು ಬಲೆಗೆ ಬೀಳಿಸುವಂತೆ ವಿರಾಟ್​ ಕೊಹ್ಲಿ ಹೇಳಿದ್ದರು. ಆ ಯೋಜನೆಯನ್ನು ಶಾರ್ದೂಲ್​ ಕಾರ್ಯಗತಗೊಳಿಸಿದ್ದರು.

ಪಂದ್ಯದ ಮುಕ್ತಾಯದ ಬಳಿಕ ಮಾತನಾಡಿದ ಬೌಲರ್​ ಶಾರ್ದೂಲ್ ಠಾಕೂರ್, ಯಾರ್ಕರ್​ ಮೂಲಕ ಬ್ರೇಸ್​ವೆಲ್​ ಅವರನ್ನು ಎಲ್​ಬಿಡಬ್ಲ್ಯು ಬಲೆಗೆ ಕೆಡವಲು ವಿರಾಟ್​ ಕೊಹ್ಲಿ ಹೇಳಿಕೊಟ್ಟರು. ಅದರಂತೆ ಬೌಲಿಂಗ್​ ಮಾಡಿದೆ. ಯೋಜನೆ ಕೆಲಸ ಮಾಡಿತು ಎಂಬುದಾಗಿ ಅವರು ಹೇಳಿದ್ದಾರೆ.

ಈ ಪಂದ್ಯದ ಗೆಲುವಿನ ಬಳಿಕ ಭಾರತ ತಂಡ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ. ಜನವರಿ 21ರಂದು ಎರಡನೇ ಪಂದ್ಯ ನಡೆಯಲಿದ್ದು ಈ ಹಣಾಹಣಿಯಲ್ಲಿ ಗೆದ್ದರೆ ಭಾರತಕ್ಕೆ ಸರಣಿ ಗೆಲುವು ಖಚಿತ.

ಇದನ್ನೂ ಓದಿ | Shardul Thakur | ಫೆಬ್ರವರಿ 27ಕ್ಕೆ ಮದುವೆಯಾಗಲಿದ್ದಾರೆ ಟೀಮ್​ ಇಂಡಿಯಾದ ಆಟಗಾರ​ ಶಾರ್ದೂಲ್​ ಠಾಕೂರ್​!

Exit mobile version