Site icon Vistara News

Indian Cricket Team | ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಸಂಜುಗೆ ಚಾನ್ಸ್​ ಎಂದು ಭವಿಷ್ಯ ನುಡಿದ ಜಾಫರ್​

sanju samson

ಮುಂಬಯಿ : ಕೇರಳ ಮೂಲದ ವಿಕೆಟ್​ಕೀಪರ್​ ಬ್ಯಾಟರ್​ ಸಂಜು ಸ್ಯಾಮ್ಸನ್​ ಅವರಿಗೆ ಟೀಮ್​ ಇಂಡಿಯಾದಲ್ಲಿ (Indian Cricket Team) ಅವಕಾಶ ಕೊಡಲಾಗುತ್ತಿಲ್ಲ ಎಂಬುದು ಭಾರತದ ಕ್ರಿಕೆಟ್​ ಕಾರಿಡಾರ್​ನ ದೊಡ್ಡ ಚರ್ಚೆ. ಅದಕ್ಕೆ ಪೂರಕವಾಗಿ ಅವರು ಸರಣಿಗಳಲ್ಲಿ ಅವರು ಅವಕಾಶಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಟೀಮ್​ ಇಂಡಿಯಾದಲ್ಲಿ ವಿಕೆಟ್​ಕೀಪಿಂಗ್​ ಬ್ಯಾಟರ್​ ಕೋಟಾಗೆ ಹೆಚ್ಚು ಪೈಪೋಟಿ ಇರುವುದೇ ಅದಕ್ಕೆ ಕಾರಣ. ಕೆ. ಎಲ್​ ರಾಹುಲ್​, ರಿಷಭ್​ ಪಂತ್​, ಇಶಾನ್​ ಕಿಶನ್ ಈ ಸ್ಥಾನಕ್ಕೆ ಪೈಪೋಟಿ ಒಡುತ್ತಿರುವ ಆಟಗಾರರು. ಇದರಿಂದಾಗಿ ಸಂಜುಗೆ ಅವಕಾಶ ನಷ್ಟವಾಗುತ್ತಿದೆ. ಅವರ ಕುರಿತು ಮಾತನಾಡಿದ ಟೀಮ್​ ಇಂಡಿಯಾದ ಮಾಜಿ ಬ್ಯಾಟರ್​ ವಾಸಿಮ್​ ಜಾಫರ್​, ಮುಂಬರುವ ಪ್ರವಾಸಿ ಶ್ರೀಲಂಕಾ ವಿರುದ್ಧದ ಸೀಮಿತ ಓವರ್​ಗಳ ಸರಣಿಯಲ್ಲಿ ಸಂಜು ಸ್ಯಾಮ್ಸನ್​ಗೆ ಅವಕಾಶ ಸಿಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಬಾಂಗ್ಲಾದೇಶ ವಿರುದ್ಧದ ಏಕ ದಿನ ಸರಣಿಯಲ್ಲಿ ಕೆ. ಎಲ್​ ರಾಹುಲ್​ ವಿಕೆಟ್​ಕೀಪಿಂಗ್​ ಮಾಡಿದ್ದರು. ಕಾಯಂ ವಿಕೆಟ್​ಕೀಪರ್​ ರಿಷಭ್​ ಪಂತ್​ ಅವರನ್ನು ಬೆಂಚು ಕಾಯಿಸಲಾಗಿತ್ತು. ಆದರೆ, ರಾಹುಲ್​ ಅವರು ಟೆಸ್ಟ್​​ ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿದ ಬಳಿಕ ಅವರನ್ನು ಲಂಕಾ ವಿರುದ್ಧದ ಸರಣಿಯಲ್ಲಿ ಮುಂದುವರಿಸುವ ಸಾಧ್ಯತೆಗಳು ಕಡಿಮೆ. ಇದೇ ಅಂದಾಜಿನ ಮೇಲೆ ಮಾತನಾಡಿದ ಜಾಫರ್​, ಸಂಜುಗೆ ಅವಕಾಶ ಲಭಿಸಲಿದೆ ಎಂದಿದ್ದಾರೆ.

ಈ ಬಗ್ಗೆ ಟ್ವೀಟ್​ ಮಾಡಿರುವ ವಾಸಿಮ್​ ಜಾಫರ್​ “ಈ ಬಾರಿ ಸಂಜು ಸ್ಯಾಮ್ಸನ್​ ಅವರು ಟೀಮ್​ ಇಂಡಿಯಾದ ಭಾಗವಾಗಿ ಇರಲಿದ್ದಾರೆ. ಅವರು ಏಕದಿನ ಹಾಗೂ ಟಿ20 ಸರಣಿಯಲ್ಲಿ ಆಡಲಿದ್ದಾರೆ. ಅದೇ ರೀತಿ ಸ್ಥಿರತೆಯಿಂದ ರನ್​ ಗಳಿಸಲಿದ್ದಾರೆ,” ಎಂದು ಬರೆದುಕೊಂಡಿದ್ದಾರೆ.

ಸಂಜು ಸ್ಯಾಮ್ಸನ್​ ಅವರು ಇತ್ತೀಚೆಗಿನ ನ್ಯೂಜಿಲ್ಯಾಂಡ್​ ಪ್ರವಾಸದಲ್ಲಿ ಭಾರತ ತಂಡದ ಭಾಗವಾಗಿದ್ದರು. ಆದರೆ, ಮೂರು ಪಂದ್ಯಗಳ ಸರಣಿಯಲ್ಲಿ ಅವರು ಅವಕಾಶ ಪಡೆದಿರಲಿಲ್ಲ. ಅದೇ ರೀತಿ ಕಳೆದ ಆಗಸ್ಟ್​​ನಲ್ಲಿ ವೆಸ್ಟ್​ ಇಂಡೀಸ್​ ವಿರುದ್ಧ ಕೊನೇ ಬಾರಿ ಟಿ20 ಮಾದರಿಯಲ್ಲಿ ಆಡಿದ್ದರು.

ಇದನ್ನೂ ಓದಿ | Sanju Samson | ನಮ್ಮ ತಂಡಕ್ಕೆ ಬನ್ನಿ; ಸಂಜು ಸ್ಯಾಮ್ಸನ್​ಗೆ ಆಫರ್​ ನೀಡಿದ ಐರ್ಲೆಂಡ್​ ಕ್ರಿಕೆಟ್ ಮಂಡಳಿ!

Exit mobile version