Site icon Vistara News

INDvsAUS : ಕೆ ಎಲ್ ರಾಹುಲ್ ಕುರಿತು ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ನುಡಿದ ಭವಿಷ್ಯ ಏನು?

K. Former spinner Harbhajan Singh predicted L Rahul

ಮುಂಬಯಿ: ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ (BCCI) ಭಾನುವಾರ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್​ ಸರಣಿಯ ಮುಂದಿನೆರಡು ಪಂದ್ಯಗಳಿಗೆ ತಂಡ ಪ್ರಕಟಿಸಿದೆ. ಈ ವೇಳೆ ಕೆ. ಎಲ್​ ರಾಹುಲ್​ ಅವರಿಗೆ ನೀಡಲಾಗಿದ್ದ ಉಪನಾಯಕನ ಸ್ಥಾನವನ್ನು ತೆಗೆಯಲಾಗಿದೆ. ಅದು ಯಾಕೆ ಎಂಬುದಾಗಿ ಭಾರತ ತಂಡದ ಮಾಜಿ ಸ್ಪಿನ್ನರ್​ ಹರ್ಭಜನ್​ ಸಿಂಗ್​ ವಿವರಣೆ ನೀಡಿದ್ದಾರೆ. ಮಾರ್ಚ್​ 1ರಿಂದ ಇಂದೋರ್​ನಲ್ಲಿ ಮೂರನೇ ಪಂದ್ಯ ನಡೆಯಲಿದ್ದು, ಆ ಪಂದ್ಯದ ವೇಳೆ ಕೆ. ಎಲ್​ ರಾಹುಲ್ ಭವಿಷ್ಯ ನಿರ್ಧಾರವಾಗಲಿದೆ ಎಂಬುದಾಗಿ ಅವರು ಹೇಳಿದ್ದಾರೆ. ಫಾರ್ಮ್ ಕಳೆದುಕೊಂಡಿರುವ ಕೆ. ಎಲ್​ ರಾಹುಲ್​ ಅವರನ್ನು ತಂಡದಲ್ಲಿ ಉಳಿಸುವುದೇ, ಕಳುಹಿಸುವುದೇ ಎಂಬ ತೀರ್ಮಾನಕ್ಕೆ ಬಿಸಿಸಿಐ ಬರಲಿದೆ ಎಂಬುದಾಗಿಯೂ ಅವರು ಹೇಳಿದ್ದಾರೆ.

ತಂಡ ಆಯ್ಕೆ ಕುರಿತು ಇಂಡಿಯಾ ಟಿವಿ ಜತೆ ಮಾತನಾಡಿದ ಹರ್ಭಜನ್​ ಸಿಂಗ್​, ಬಿಸಿಸಿಐ ಉದ್ದೇಶಪೂರ್ವಕವಾಗಿ ಕೆ. ಎಲ್​ ರಾಹುಲ್ ಅವರನ್ನು ಉಪನಾಯಕನ ಪಟ್ಟದಿಂದ ಕೆಳಕ್ಕೆ ಇಳಿಸಿದೆ. ಯಾಕೆಂದರೆ, ಆ ಸ್ಥಾನದಿಂದ ತೆಗೆದು ಹಾಕಿದರೆ ಟೀಮ್​ ಮ್ಯಾನೇಜ್ಮೆಂಟ್​ಗೆ ಅವರನ್ನು ಮುಂದಿನ ಪಂದ್ಯದಲ್ಲಿ ಆಡುವ 11ರ ಬಳಗಕ್ಕೆ ಆಯ್ಕೆ ಮಾಡದೇ ಇರಲು ಸಾಧ್ಯ. ಉಪನಾಯಕರಾಗಿರುವ ಹೊತ್ತು ಅವರನ್ನು ತಂಡದಿಂದ ಇಳಿಸುವುದು ಸುಲಭವಲ್ಲ ಹರ್ಭಜನ್​ ಸಿಂಗ್ ಹೇಳಿಕೊಂಡಿದ್ದಾರೆ.

ಕೆ ಎಲ್​ ರಾಹುಲ್​ ಅತ್ಯಂತ ಗುಣಮಟ್ಟದ ಬ್ಯಾಟರ್​. ಆದರೆ ಈಗ ಫಾರ್ಮ್ ಕಳೆದುಕೊಂಡಿದ್ದಾರೆ. ಹೀಗಾಗಿ ಸ್ಕೋರ್​ ಬಾರಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ. ಒಂದಲ್ಲ ಒಂದು ದಿನ ಅವರು ಉತ್ತಮ ಪ್ರದರ್ಶನದೊಂದಿಗೆ ತಂಡಕ್ಕೆ ವಾಪಸಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ. ಆದರೀಗ ಅವರಿಗೆ ಉಪನಾಯಕತ್ವದ ಟ್ಯಾಗ್​ ಇಲ್ಲ. ಹೀಗಾಗಿ ಶುಭ್​ಮನ್ ಗಿಲ್​ಗೆ ಮುಂದಿನ ಪಂದ್ಯದಲ್ಲಿ ಅವಕಾಶ ಸಿಗುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂಬುದಾಗಿ ಅವರು ಹೇಳಿದ್ದಾರೆ.

ಇದನ್ನೂ ಓದಿ : KL Rahul | ಅವರೊಬ್ಬ ಆಲ್‌ರೌಂಡರ್‌; ಕೆ ಎಲ್ ರಾಹುಲ್‌ ಮೌಲ್ಯಯುತ ಆಟಗಾರ ಎಂದ ಮಾಜಿ ನಾಯಕ

ಶುಭ್​ಮನ್​ ಗಿಲ್​ ಸದ್ಯ ಅತ್ಯುತ್ತಮ ಫಾರ್ಮ್​ನಲ್ಲಿ ಇದ್ದಾರೆ. ಆದಾಗ್ಯೂ ಅವರನ್ನು ಬೆಂಚು ಕಾಯಿಸುವಂತೆ ಮಾಡಿದ ಕೆ ಎಲ್​ ರಾಹುಲ್​ಗೆ ಮೊದಲೆರಡು ಟೆಸ್ಟ್​ಗಳಲ್ಲಿ ಅವಕಾಶ ನೀಡಲಾಗಿತ್ತು. ಅದರೆ, ಮೊದಲ ಟೆಸ್ಟ್​ನಲ್ಲಿ 22 ರನ್​ಗಳಿಗೆ ಔಟಾಗಿದ್ದ ಅವರು ಎರಡನೇ ಟೆಸ್ಟ್​​ನಲ್ಲಿ 10 ಮತ್ತು 2 ರನ್​ ಬಾರಿಸಿದ್ದರು. ಭಾರತ ತಂಡಕ್ಕೆ ಅಗತ್ಯ ಸಂದರ್ಭದಲ್ಲಿ ಅವರು ನೆರವಾಗಿರಲಿಲ್ಲ.

Exit mobile version