Site icon Vistara News

Prasidh Krishna : ಕನ್ನಡಿಗ ಪ್ರಸಿದ್ಧ್​ ಕೃಷ್ಣ ವಿಶ್ವ ಕಪ್​ಗೂ ಡೌಟ್​, ಇನ್ನೂ ಸುಧಾರಿಸಿಕೊಳ್ಳದ ವೇಗದ ಬೌಲರ್​

prasiddh krishna

#image_title

ಬೆಂಗಳೂರು: ಮುಂಬರುವ ಏಷ್ಯಾ ಕಪ್​ ಹಾಗೂ ಭಾರತದ ಆತಿಥ್ಯದಲ್ಲಿ ನಡೆಯಲಿರುವ ಏಕದಿನ ವಿಶ್ವ ಕಪ್​ಗೆ (Prasidh Krishna) ಸದೃಢ ತಂಡವನ್ನು ರಚಿಸಲು ಬಿಸಿಸಿಐ ಯೋಜನೆ ರೂಪಿಸಿಕೊಂಡಿದೆ. ಆದರೆ, ಇಬ್ಬರು ಯುವ ಕ್ರಿಕೆಟಿಗರ ಅನುಪಸ್ಥಿತಿ ಭಾರತ ತಂಡಕ್ಕೆ ಕಾಡಲಿದೆ ಎನ್ನಲಾಗುತ್ತಿದೆ. ಅವರೇ ಮಧ್ಯಮ ಕ್ರಮಾಂಕದ ಬ್ಯಾಟರ್​ ಶ್ರೇಯಸ್ ಅಯ್ಯರ್​ ಹಾಗೂ ಕನ್ನಡಿಗ ಪ್ರಸಿದ್ಧ್​ ಕೃಷ್ಣ. ಅದರಲ್ಲೂ ಪ್ರಸಿದ್ಧ್​ ಕೃಷ್ಣ ಅವರು ಸುಧಾರಿಸಿಕೊಳ್ಳುವುದಕ್ಕೆ ಇನ್ನೂ ಆರು ತಿಂಗಳು ಬೇಕು ಎಂದು ಹೇಳಲಾಗುತ್ತಿದೆ. ಹೀಗಾಗಿ ಅವರ ಅಲಭ್ಯತೆ ಅನುಮಾನ ಎನ್ನಲಾಗಿದೆ.

ಪ್ರಸಿದ್ಧ್​ ಕೃಷ್ಣ ಕಳೆದ ಆರು ತಿಂಗಳಿಂದ ಟೀಮ್​ ಇಂಡಿಯಾದ ಪರವಾಗಿ ಆಡುತ್ತಿಲ್ಲ. ಅವರು ಬೆನ್ನು ಒತ್ತಡ ಗಾಯದ ಸಮಸ್ಯೆಯಿಂದಾಗಿ ಅವರು ಆಡುತ್ತಿಲ್ಲ. ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್​ ಅಕಾಡೆಮಿಯಲ್ಲಿ ಪುನಶ್ಚೇತನಕ್ಕೆ ಒಳಗಾಗುತ್ತಿದ್ದಾರೆ. ಆದರೆ ವರದಿಯ ಪ್ರಕಾರ ಇನ್ನೂ ಆರು ತಿಂಗಳು ಅವರು ಆಡುವುದಕ್ಕೆ ಸಾಧ್ಯವಿಲ್ಲ. ಇನ್ನಷ್ಟು ದಿನಗಳ ಕಾಲ ಪುನಶ್ಚೇತನಕ್ಕೆ ಒಳಗಾಗುತ್ತಿದ್ದಾರೆ.

ಪ್ರಸಿದ್ಧ್​ ಕೃಷ್ಣ 2022ರಲ್ಲಿ ಜಿಂಬಾಬ್ವೆ ವಿರುದ್ಧ ಏಕ ದಿನ ಸರಣಿಯಲ್ಲಿ ಆಡಿದ್ದರು. ಅಲ್ಲಿಯವರೆಗೆ 14 ಪಂದ್ಯಗಳಲ್ಲಿ 25 ವಿಕೆಟ್​ಗಳನ್ನು ಕಬಳಿಸಿದ್ದಾರೆ. 5.32 ಎಕಾನಮಿ ರೇಟ್​ ಹಾಗೂ 23.92 ಸರಾಸರಿ ಹೊಂದಿದ್ದಾರೆ.

ಇದನ್ನೂ ಓದಿ : Indian Cricket Team | ರಾಹುಲ್​ಗೆ ಒಡಿಐ ವಿಶ್ವ ಕಪ್​ನಲ್ಲಿ ಅವಕಾಶ ಸಿಗದು ಎಂದು ಭವಿಷ್ಯ ನುಡಿದ ಮಾಜಿ ಕೋಚ್​

ಪ್ರಸಿದ್ಧ್​ ಕೃಷ್ಣಗೆ ಅಗಿರುವ ಒತ್ತಡ ಗಾಯದ ಸಮಸ್ಯೆಯಿಂದ ಹೊರ ಬರಲು ಎಷ್ಟು ದಿನ ಬೇಕಾಗಬಹುದು ಎಂದು ಹೇಳಲಾಗುವುದಿಲ್ಲ. ಪ್ರತಿಯೊಬ್ಬ ಆಟಗಾರನೂ ವಿಭಿನ್ನ ದೇಹ ಲಕ್ಷಣ ಹೊಂದಿರುತ್ತಾರೆ. ಗಾಯದಿಂದ ಗುಣಮುಖರಾಗುವ ಸಮಯವೂ ಭಿನ್ನವಾಗಿರುತ್ತದೆ. ಪ್ರಸಿದ್ಧ್​ ಕೃಷ್ಣ ಇನ್ನೂ ಫಿಟ್​ ಆಗಿಲ್ಲ ಹಾಗೂ ಇನ್ನೂ ಆರು ತಿಂಗಳು ಬೇಕಾಗಬಹುದು ಎಂದು ಬಿಸಿಸಿಯ ಮೂಲಗಳು ತಿಳಿಸಿವೆ.

Exit mobile version