Site icon Vistara News

IPL 2023 : ವರ್ಕ್​ಲೋಡ್​ ಮ್ಯಾನೇಜ್​ ಮಾಡಿ, ಸಹ ಆಟಗಾರರಿಗೆ ರೋಹಿತ್​ ಶರ್ಮಾ ಸಲಹೆ

BCCI does not agree to send cricket team to Asia Cup; Argument, counterargument!

BCCI does not agree to send cricket team to Asia Cup

ಮುಂಬಯಿ: ಮುಂದಿನ ಅಕ್ಟೋಬರ್​ನಿಂದ ಭಾರತದ ಆತಿಥ್ಯದಲ್ಲಿ ಏಕ ದಿನ ವಿಶ್ವ ಕಪ್​ ನಡೆಯಲಿರುವ ಕಾರಣ ಭಾರತ ತಂಡದ ಆಟಗಾರರಿಗೆ ಸವಾಲು ಎದುರಾಗಿದೆ. ಐಪಿಎಲ್​ನಲ್ಲಿ ಫ್ರಾಂಚೈಸಿಗಳಿಂದ ಹಣ ಪಡೆದುಕೊಳ್ಳಲಿರುವ ಈ ಆಟಗಾರರು ಉತ್ತಮ ಪ್ರದರ್ಶನ ನೀಡಿ ಅವರನ್ನು ಮೆಚ್ಚಿಸಲು ಮುಂದಾಗಿರುವಾಗಲೇ ಹೆಚ್ಚು ಪಂದ್ಯಗಳನ್ನು ಆಡಿ ಸುಸ್ತು ಮಾಡಿಕೊಳ್ಳಬೇಡಿ ಎಂದು ನಾಯಕ ರೋಹಿತ್​ ಶರ್ಮಾ ಎಚ್ಚರಿಕೆ ಕೊಟ್ಟಿದ್ದಾರೆ. ಮುಂದಿನ ಏಕದಿನ ವಿಶ್ವ ಕಪ್​ನಲ್ಲಿ ಆಡಬೇಕಾಗಿರುವ ಕಾರಣ ಎಲ್ಲರೂ ಫಿಟ್​ ಆಗಿರುವಂತೆ ನೋಡಿಕೊಳ್ಳಬೇಕು. ಅದಕ್ಕಾಗಿ ವರ್ಕ್​ಲೋಡ್​ ಮ್ಯಾನೇಜ್​ ಮಾಡಿಕೊಳ್ಳಬೇಕು ಎಂದು ಕ್ಯಾಪ್ಟನ್ ಸಲಹೆ ಕೊಟ್ಟಿದ್ದಾರೆ.

ಶ್ರೇಯಸ್ ಅಯ್ಯರ್​ ಗಾಯಗೊಂಡ ಕಾರಣ ಅವರು ಆಸ್ಟ್ರೇಲಿಯಾ ವಿರುದ್ಧದ ಏಕ ದಿನ ಸರಣಿಯಲ್ಲಿ ಆಡಿರಲಿಲ್ಲ. ಹೀಗಾಗಿ ಭಾರತ ತಂಡದ ಮಧ್ಯಮ ಕ್ರಮಾಂಕ ಕುಸಿತಕಂಡಿತ್ತು. ಹೀಗಾಗಿ ಟೀಮ್​ ಇಂಡಿಯಾ ಸರಣಿಯಲ್ಲಿ 2-1 ಅಂತರದಿಂದ ಹಿನ್ನಡೆ ಕಂಡಿತ್ತು. ಅದೇ ರೀತಿ ಜಸ್​ಪ್ರಿತ್​ ಬುಮ್ರಾ ಅವರು ಎಂಟು ತಿಂಗಳಿಂದ ಟೀಮ್​ ಇಂಡಿಯಾದ ಪರ ಆಡುತ್ತಿಲ್ಲ. ಅವರಿಗೂ ಗಾಯದ ಸಮಸ್ಯೆ ಎದುರಾಗಿದೆ. ಹೀಗಾಗಿ ವಿಶ್ವ ಕಪ್​ಗೆ ಪ್ರಮುಖ ಆಟಗಾರರು ಲಭ್ಯರಾಗುವಂತೆ ನೋಡಿಕೊಳ್ಳುವುದು ಟೀಮ್​ ಮ್ಯಾನೇಜ್ಮೆಂಟ್​ ಹೊಣೆಗಾರಿಕೆಯಾಗಿದೆ. ಹೀಗಾಗಿ ಎಲ್ಲರೂ ಒತ್ತಡ ನಿರ್ವಹಣೆ ಮಾಡಿಕೊಳ್ಳಬೇಕು ಎಂದು ರೋಹಿತ್​ ಶರ್ಮಾ ಸಲಹೆ ಕೊಟ್ಟಿದ್ದಾರೆ.

ಬುಧವಾರ ನಡೆದ ಆಸ್ಟ್ರೇಲಿಯಾ ವಿರುದ್ಧದ ಏಕ ದಿನ ಸರಣಿಯ ಕೊನೇ ಪಂದ್ಯದಲ್ಲಿ ಭಾರತ ತಂಡ ಸೋಲುವ ಮೂಲಕ ಸರಣಿಯನ್ನು 1-2 ಅಂತರದಿಂದ ಕಳೆದುಕೊಂಡಿತ್ತು. ಆ ಬಳಿಕ ಮಾತನಾಡಿದ ನಾಯಕ ರೋಹಿತ್​ ಶರ್ಮಾ, ಆಟಗಾರರು ಒತ್ತಡ ನಿರ್ವಹಣೆ ಮಾಡಿಕೊಳ್ಳಬೇಕಾಗಿದೆ. ಆದರೆ, ಫ್ರಾಂಚೈಸಿ ಓನರ್​ಗಳು ಈ ಬಗ್ಗೆ ತೀರ್ಮಾನ ಕೈಗೊಳ್ಳುತ್ತಾರೆ ಎಂಬುದಾಗಿ ರೋಹಿತ್ ಶರ್ಮಾ ಹೇಳಿದ್ದಾರೆ.

ಆಟಗಾರರಿಗೆ ಸೂಚನೆ ಕೊಟ್ಟಿದ್ದೇವೆ

ನಮ್ಮ ತಂಡದ ಎಲ್ಲ ಸದಸ್ಯರಿಗೆ ಒತ್ತಡ ನಿರ್ವಹಣೆ ಮಾಡಿಕೊಳ್ಳುವಂತೆ ಹಾಗೂ ಏಕ ದಿನ ವಿಶ್ವ ಕಪ್​ಗೆ ಮೊದಲ ಫಿಟ್​ ಆಗಿರುವಂತೆ ಸೂಚನೆ ಕೊಟ್ಟಿದ್ದೇವೆ. ಆದರೆ, ಎಲ್ಲವೂ ಆಟಗಾರರು ಹಾಗೂ ಫ್ರಾಂಚೈಸಿಗಳ ನಿರ್ಧಾರಗಳ ಮೇಲೆ ನಿಂದಿದೆ. ಆಟಗಾರರೆಲ್ಲರೂ ತಮಗೆ ಬೇಕಾದ್ದನ್ನು ನಿರ್ಧರಿಸಲು ಶಕ್ತರಾಗಿದ್ದಾರೆ. ಯಾರಿಗಾದರೂ ಆಟ ಹೆಚ್ಚಾಯಿತು ಎಂದು ಅನಿಸಿದರೆ ಆ ತಂಡದ ಜತೆ ಮಾತನಾಡಿ ಕೆಲವೊಂದ ಪಂದ್ಯಗಳಿಂದ ಬ್ರೇಕ್​ ಪಡೆದುಕೊಳ್ಳಬಹುದು ಎಂಬುದಾಗಿ ರೋಹಿತ್​ ಶರ್ಮಾ ಹೇಳಿದ್ದಾರೆ.

ಇದೇ ವೇಳೆ ಅವರು ಸೂರ್ಯಕುಮಾರ್​ ಯಾದವ್​ ಅವರ ಫಾರ್ಮ್​ ಬಗ್ಗೆಯೂ ಮಾತನಾಡಿದರು. ಆದರೆ, ಅವರು ಮೂರು ಪಂದ್ಯಗಳಲ್ಲಿ ಸೊನ್ನೆಗೆ ಔಟಾಗಿರುವದು ದುರದೃಷ್ಟ ಎಂಬುದಾಗಿಯೂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸೂರ್ಯಕುಮಾರ್​ ಯಾದವ್ ಸರಣಿಯ ಮೂರು ಪಂದ್ಯಗಳಲ್ಲಿ ಅತ್ಯಂತ ಕಷ್ಟಕರವಾದ ಎಸೆತಗಳನ್ನು ಎದುರಿಸಿ ಔಟಾಗಿದ್ದಾರೆ. ಹಾಗೆಂದು ಮೂರನೇ ಪಂದ್ಯದಲ್ಲಿ ಅವರು ಕೆಟ್ಟ ಹೊಡೆತವನ್ನು ಹೊಡೆಯಲು ಮುಂದಾಗಿ ಔಟಾಗಿದ್ದಾರೆ. ಆಸ್ಟನ್​ ಅಗರ್​ ಎಸೆತ ಅಷ್ಟೊಂದು ಉತ್ತಮವಾಗಿತ್ತು ಎಂದು ಹೇಳುವುದೂ ಕಷ್ಟ ಎಂದು ರೋಹಿತ್​ ಶರ್ಮಾ ಅಭಿಪ್ರಾಯಪಟ್ಟಿದ್ದಾರೆ.

ಸೂರ್ಯಕುಮಾರ್ ಯಾದವ್​ ಅವರನ್ನು ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ ಮಾಡಬೇಕಾಗಿತ್ತು. ಆದರೆ, ಅವರು ಸ್ಪಿನ್​ ಬೌಲಿಂಗ್​ಗೆ ಚೆನ್ನಾಗಿ ಆಡುತ್ತಾರೆ ಎಂಬ ಕಾರಣಕ್ಕೆ ಏಳನೇ ಕ್ರಮಾಂಕದಲ್ಲಿ ಆಡಿಸಲಾಯಿತು. ಅವರು ಇಡೀ ಸರಣಿಯಲ್ಲಿ ಕೇವಲ ಮೂರು ಎಸೆತಗಳನ್ನು ಮಾತ್ರ ಎದುರಿಸಿದ್ದು ದುರದೃಷ್ಟ. ಇಂಥ ಸಂದರ್ಭವನ್ನು ಎಲ್ಲರೂ ಎದುರಿಸುತ್ತಾರೆ. ಅವರು ತಮ್ಮ ಕಳಪೆ ಫಾರ್ಮ್​ನಿಂದ ಹೊರ ಬರಲಿದ್ದಾರೆ ಎಂದು ರೋಹಿತ್​ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸುಧಾರಿಸಿಕೊಳ್ಳುವುದಕ್ಕೆ ಅವರಿಗೆ ಟೀಮ್​ ಇಂಡಿಯಾ ಮ್ಯಾನೇಜ್ಮೆಂಟ್​ ಸಾಕಷ್ಟು ಅವಕಾಶ ಕೂಡ ನೀಡುತ್ತದೆ ಎಂದು ಹೇಳಿದ್ದಾರೆ.

Exit mobile version