Site icon Vistara News

IND v AUS 2023 : ಆಸ್ಟ್ರೇಲಿಯಾ ತಂಡ ಸೋಲಿನ ಭಯದಲ್ಲಿದೆ ಎಂದು ಹೇಳಿದ ಮೊಹಮ್ಮದ್​ ಕೈಫ್​

mohaamed kaif

#image_title

ಬೆಂಗಳೂರು : ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಬಾರ್ಡರ್​- ಗವಾಸ್ಕರ್ ಟ್ರೋಫಿ (IND v AUS 2023) ಇದೀಗ ಕ್ರಿಕೆಟ್​ ಕಾರಿಡಾರ್​ನ ಚರ್ಚೆಯ ವಿಷಯ. ವಿಶ್ವದ ಬಲಿಷ್ಠ ತಂಡಗಳೆರಡು ನಾಲ್ಕು ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಕಾದಾಡಲಿವೆ. ಇತ್ತಂಡಗಳಿಗೂ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ಗೆ ಮುನ್ನ ಕೊನೇ ಸರಣಿಯಾಗಿದೆ. ಪ್ರಮುಖವಾಗಿ ಇತ್ತಂಡಗಳು ನಡುವಿನ ಜಿದ್ದಾಜಿದ್ದಿನ ಕುರಿತು ಹೆಚ್ಚು ಚರ್ಚೆಗಳು ನಡೆಯುತ್ತಿವೆ. ಏತನ್ಮಧ್ಯೆ, ಭಾರತ ತಂಡದ ಮಾಜಿ ಆಲ್​ರೌಂಡರ್​ ಮೊಹಮ್ಮದ್​ ಕೈಫ್​ ಸರಣಿಯ ತೀವ್ರತೆಯ ಕುರಿತು ಮಾತನಾಡಿದ್ದು, ಪ್ರವಾಸಿ ತಂಡದ ಹೆಚ್ಚು ಆತಂಕಕ್ಕೆ ಬಿದ್ದಿದೆ ಎಂದು ಹೇಳಿದ್ದಾರೆ.

ಭಾರತದಲ್ಲಿ ಸ್ಪಿನ್​ಗೆ ಪೂರಕವಾದ ಪಿಚ್​ಗಳನ್ನು ಸಿದ್ಧಪಡಿಸುವ ಮೂಲಕ ಆತಿಥೇಯ ತಂಡಕ್ಕೆ ಅನುಕೂಲ ಮಾಡಿಕೊಡುವುದು ಬಿಸಿಸಿಐ ಉದ್ದೇಶವಾಗಿದೆ ಎಂಬುದಾಗಿ ಆಸ್ಟ್ರೇಲಿಯಾದ ಹಲವಾರು ಹಿರಿಯ ಆಟಗಾರರು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದಕ್ಕೆ ಪ್ರತ್ಯುತ್ತರ ನೀಡಿದ ಭಾರತೀಯ ಆಟಗಾರರು ಇದು ಆಸ್ಟ್ರೇಲಿಯಾ ತಂಡದ ಮೈಂಡ್​ ಗೇಮ್​ ಎಂಬುದಾಗಿ ತಿರುಗೇಟು ಕೊಟ್ಟಿದ್ದಾರೆ.

ಅದೇ ದಾಟಿಯಲ್ಲಿ ಮಾತನಾಡಿರುವ ಮೊಹಮ್ಮದ್ ಕೈಫ್​, ಪ್ರವಾಸಿ ತಂಡದ ಆಟಗಾರರು ಸೋಲಿನ ಭಯಕ್ಕೆ ಬಿದಿದ್ದಾರೆ ಎಂದು ಹೇಳಿದ್ದಾರೆ. ಆಸ್ಟ್ರೇಲಿಯಾ ತಂಡ ಎಂದೂ 18 ಸದಸ್ಯರೊಂದಿಗೆ ಭಾರತಕ್ಕೆ ಬಂದಿಲ್ಲ. ಈ ಬಾರಿ 18 ಸದಸ್ಯರ ಬಳಗದೊಂದಿಗೆ ಭಾರತಕ್ಕೆ ಬಂದಿದ್ದಾರೆ. ಆಸ್ಟ್ರೇಲಿಯಾ ತಂಡ ತವರಿನಲ್ಲಿ ಬಲಶಾಲಿ. ಅವರನ್ನು ಸೋಲಿಸುವುದು ಸುಲಭವಲ್ಲ ಎಂದು ಸ್ಟಾರ್​ ಸ್ಪೋರ್ಟ್ಸ್​ನ ವಿಡಿಯೊದಲ್ಲಿ ಅವರು ಹೇಳಿದ್ದಾರೆ.

ಇದನ್ನೂ ಓದಿ : Border Gavaskar Trophy: ಬಾರ್ಡರ್​ ಗವಾಸ್ಕರ್​ ಟ್ರೋಫಿಯಲ್ಲಿ ಗರಿಷ್ಠ ರನ್​ರೇಟ್​ ಹೊಂದಿರುವ ಬ್ಯಾಟರ್​ಗಳು

ಆಸ್ಟ್ರೇಲಯಾ ತಂಡಕ್ಕೆ ಭಾರತದಲ್ಲಿ ಆಡುವ ಭಯವಿದೆ. ಸ್ಪಿನ್ನರ್​ಗಳಾದ ಆರ್​. ಅಶ್ವಿನ್​, ರವೀಂದ್ರ ಜಡೇಜಾ. ಅಕ್ಷರ್ ಪಟೇಲ್​, ಕುಲ್ದೀಪ್​ ಯಾದವ್ ಅವರನ್ನು ಎದುರಿಸುವುದು ಅವರಿಗೆ ಸುಲಭವಲ್ಲ. ಅದೇ ಕಾರಣಕ್ಕೆ ದೊಡ್ಡ ಯೋಜನೆಗಳನ್ನು ರೂಪಿಸಿಕೊಳ್ಳುತ್ತಿದ್ದಾರೆ ಎಂಬುದಾಗಿ ಮೊಹಮ್ಮದ್​ ಕೈಫ್​ ಹೇಳಿದ್ದಾರೆ.

Exit mobile version