Site icon Vistara News

Rishabh Pant | ರಿಷಭ್​ ಪಂತ್​ ಪುನಶ್ಚೇತನದ ಅವಧಿಯ ಮಾಹಿತಿ ಪ್ರಕಟಿಸಿದ ಮುಂಬಯಿ ವೈದ್ಯರು

Rishabh Pant

ಮುಂಬಯಿ : ಭೀಕರ ಅವಘಡದಲ್ಲಿ ಭಾರತ ತಂಡದ ವಿಕೆಟ್​ಕೀಪರ್​ ಬ್ಯಾಟರ್ ರಿಷಭ್​ ಪಂತ್​​ ಪವಾಡಸದೃಶ ಪಾರಾಗಿದ್ದಾರೆ. ಆದರೂ ಅವರಿಗೆ ಸಾಮಾನ್ಯ ರೂಪದ ಗಾಯಗಳಾಗಿವೆ. ಬೆನ್ನಿನ ಚರ್ಮ ಸುಟ್ಟು ಹೋಗಿರುವ ಕಾರಣ ಪ್ಲಾಸ್ಟಿಕ್​ ಸರ್ಜರಿಯ ಅವಶ್ಯಕತೆಯಿದೆ. ಮಂಡಿಗೆ ಆಗಿರುವ ಗಾಯಕ್ಕೆ ಸರ್ಜರಿ ಕೂಡ ಬೇಕಾಗಿದೆ. ಹೀಗಾಗಿ ಅವರನ್ನು ಡೆಹ್ರಾಡೂನ್​ನಿಂದ ಮುಂಬಯಿಯ ಕೋಕಿಲಾಬೆನ್​ ದೀರೂ ಬಾಯಿ ಅಂಬಾನಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಲ್ಲಿನ ತಜ್ಞ ವೈದ್ಯರು ಚಿಕಿತ್ಸೆ ನೀಡಲಿದ್ದಾರೆ.

ಏಷ್ಯಾ ಕಪ್​ ವೇಳೆ ಟೀಮ್ ಇಂಡಿಯಾದ ಆಲ್​ರೌಂಡರ್​ ರವೀಂದ್ರ ಜಡೇಜಾ ಅವರು ಮಂಡಿ ನೋವಿನ ಸಮಸ್ಯೆ ಎದುರಿಸಿದ್ದರು. ಅವರಿಗೆ ಮುಂಬಯಿನಲ್ಲಿ ಸರ್ಜರಿ ಮಾಡಲಾಗಿತ್ತು. ಶಸ್ತ್ರ ಚಿಕಿತ್ಸೆ ಬಳಿಕ ಅವರನ್ನೂ ಸುಧಾರಿಸಿಕೊಂಡಿಲ್ಲ. ಇನ್ನೂ ಕೆಲವು ದಿನಗಳ ವಿಶ್ರಾಂತಿ ಬಳಿಕ ತಂಡಕ್ಕೆ ಮರಳಬಹುದು. ಕಳೆದ ಸೆಪ್ಟೆಂಬರ್​ನಲ್ಲಿ ಅವರಿಗೆ ಗಾಯವಾಗಿತ್ತು. ಅಲ್ಲಿಂದ ನಾಲ್ಕು ತಿಂಗಳು ಕಳೆದಿದ್ದು ಇನ್ನೂ ಪುನಶ್ಚೇತನದ ಅಗತ್ಯವಿದೆ. ಇದೀಗ ರಿಷಭ್​ ಪಂತ್​ ಅವರಿಗೂ ಜಡೇಜಾ ಅವರಿಗೆ ಆದಷ್ಟೆ ಗಾಯಗಳಾಗಿವೆ ಎನ್ನಲಾಗಿದೆ. ಹೀಗಾಗಿ ಅವರಿಗೂ ಕನಿಷ್ಠ 6 ತಿಂಗಳ ವಿಶ್ರಾಂತಿ ಅಗತ್ಯವಿದೆ ಎನ್ನಲಾಗಿದೆ.

ವೈದ್ಯರ ಮೂಲವೊಂದು ಈ ಬಗ್ಗೆ ಮಾಹಿತಿ ನೀಡಿದ್ದು, ಜಡೇಜಾ ಅವರಿಗೆ ಆದಷ್ಟೇ ಸ್ವರೂಪದ ಗಾಯ ರಿಷಭ್ ಪಂತ್​ಗೂ ಆಗಿದೆ. ಹೀಗಾಗಿ ತಕ್ಷಣದಲ್ಲೇ ಅವರಿಗೆ ಶಸ್ತ್ರಚಿಕಿತ್ಸೆ ಮಾಡಿಸಬೇಕಾಗುತ್ತದೆ. ಜತೆಗೆ ಆರು ತಿಂಗಳಿಗೂ ಅಧಿಕ ಕಾಲ ವಿಶ್ರಾಂತಿ ಬೇಕಾಗುತ್ತದೆ ಹೇಳಿದೆ.

ಪ್ರತಿಯೊಬ್ಬರ ದೇಹವೂ ವಿಭಿನ್ನವಾಗಿರುತ್ತದೆ. ಆದರೂ ರಿಷಭ್​ ಪಂತ್​ಗೂ ಶಸ್ತ್ರ ಚಿಕಿತ್ಸೆ ಅಗತ್ಯವಿದೆ. ಸುಧಾರಣೆಯಾಗಲೂ ಸಾಕಷ್ಟು ಸಮಯ ಬೇಕಾಗಬಹುದು ಎಂದು ತಜ್ಞ ವೈದ್ಯರು ತಿಳಿಸಿದ್ದಾರೆ.

ಡಿಸೆಂಬರ್​ 30ರಂದು ರಿಷಭ್​ ಪಂತ್​ ಅವರು ಕಾರು ಅವಘಡಕ್ಕೆ ಒಳಗಾಗಿತ್ತು. ಘಟನೆಯಲ್ಲಿ ಅವರು ಸ್ವಲ್ಪದರಲ್ಲೇ ಜೀವ ಸಹಿತ ಪಾರಾಗಿದ್ದರು. ಅಲ್ಲಿಂದ ಅವರು ಡೆಹ್ರಾಡೂನ್​ನ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಮುಂಬಯಿಗೆ ಕರೆದುಕೊಂಡು ಬರಲಾಗಿದೆ.

ಇದನ್ನೂ ಓದಿ | Rishabh Pant | ಹೆಚ್ಚಿನ ಚಿಕಿತ್ಸೆಗೆ ರಿಷಭ್​ ಪಂತ್​ ಮುಂಬೈಗೆ ಶಿಫ್ಟ್​; ಶ್ಯಾಮ್ ಶರ್ಮಾ ಮಾಹಿತಿ

Exit mobile version