Site icon Vistara News

Asia Cup 2023 : ಏಷ್ಯಾ ಕಪ್ ಕ್ರಿಕೆಟ್​ ಟೂರ್ನಿ ನಡೆಸಲು ಪಾಕಿಸ್ತಾನ ಸುರಕ್ಷಿತವಲ್ಲ, ಪದೇ ಪದೆ ನಡೆಯುತ್ತಿವೆ ಬಾಂಬ್​ ಬ್ಲಾಸ್ಟ್​​ಗಳು

pakistan bomb blast

#image_title

ನವ ದೆಹಲಿ : ಮುಂಬರುವ ಏಷ್ಯಾ ಕಪ್​ ಕ್ರಿಕೆಟ್​ ಟೂರ್ನಿಯನ್ನು ಪಾಕಿಸ್ತಾನದಲ್ಲೇ ನಡೆಸಬೇಕು ಎಂದು ಅಲ್ಲಿನ ಕ್ರಿಕೆಟ್​ ಮಂಡಳಿ ಮೊಂಡು ವಾದ ಮಾಡುತ್ತಿದೆ. ಏಷ್ಯಾ ಕ್ರಿಕೆಟ್​ ಕೌನ್ಸಿಲ್​ಗೆ ಭಯೋತ್ಪಾದನಾ ಚಟುವಟಿಕೆಗಳು ಹೆಚ್ಚಿರುವ ಆ ದೇಶದಲ್ಲಿ ಅಯೋಜನೆ ಮಾಡುವುದು ಕೊಂಚವೂ ಇಷ್ಟವಿಲ್ಲ. ಬಿಸಿಸಿಐ ಕೂಡ ಪಾಕ್​ ವಾದಕ್ಕೆ ವಿರೋಧ ವ್ಯಕ್ತಪಡಿಸಿವೆ. ಭಾರತ ಕ್ರಿಕೆಟ್​ ತಂಡದ ಆಟಗಾರರು ಪಾಕಿಸ್ತಾನದಲ್ಲಿ ಸುರಕ್ಷಿತವಲ್ಲ ಎಂಬುದೇ ಅವರ ವಾದ. ಅದಕ್ಕೆ ಪೂರಕವಾಗಿ ಈಗ ಅಲ್ಲಿ ಬಾಂಬ್​ ಬ್ಲಾಸ್ಟ್​ ಪ್ರಕರಣಗಳೂ ನಡೆಯುತ್ತಿವೆ. ಹೀಗಾಗಿ ಅದು ಸುರಕ್ಷಿತವಲ್ಲ ಎಂದೇ ಹೇಳಬಹುದು.

ಫೆಬ್ರವರಿ 5ರಂದು ಪಾಕಿಸ್ತಾನ ಕ್ರಿಕೆಟ್​ ಲೀಗ್​ (ಪಿಎಸ್​ಎಲ್​) ಕ್ರಿಕೆಟ್​ನ ಪ್ರದರ್ಶನ ಪಂದ್ಯ ಆಯೋಜನೆಗೊಂಡಿದ್ದ ಬುಗ್ತಿ ಸ್ಟೇಡಿಯಮ್​ ಇರುವ ಕ್ವೆಟ್ಟಾ ನಗರದಲ್ಲಿ ಬಾಂಬ್​ ಬ್ಲಾಸ್ಟ್​ ನಡೆದಿದೆ. ಘಟನೆಯಲ್ಲಿ ಐವರು ಗಾಯಗೊಂಡಿದ್ದಾರೆ ಎನ್ನಲಾಗಿದೆ. ಘಟನೆಯಿಂದ ಪ್ರದರ್ಶನ ಪಂದ್ಯವೇ ರದ್ದಾಗಿದೆ. ಕೆಲವು ದಿನಗಳ ಹಿಂದೆ ಪೆಶಾವರಲ್ಲಿ ನಡೆದ ಬಾಂಬ್​ ಬ್ಲಾಸ್ಟ್​ನಲ್ಲಿ 101 ಮಂದಿ ಮೃತಪಟ್ಟಿದ್ದಾರೆ. ಭಯೋತ್ಪಾದಕರ ತಾಣವಾಗಿರುವ ಪಾಕಿಸ್ತಾನದಲ್ಲಿ ಇಂಥ ಘಟನೆಗಳು ಪದೇ ಪದೆ ನಡೆಯುವ ಕಾರಣ ಭಾರತ ತಂಡದ ಆಟಗಾರರು ಅಲ್ಲಿಗೆ ಹೋಗುವುದು ಸುರಕ್ಷಿತವಲ್ಲ ಎಂಬುದೇ ಪಾಕಿಸ್ತಾನ ಕ್ರಿಕೆಟ್​ ಮಂಡಳಿಯ ವಾದವಾಗಿದೆ.

2009ರಲ್ಲಿ ಶ್ರೀಲಂಕಾ ಕ್ರಿಕೆಟ್​ ತಂಡದ ಮೇಲೆ ಪಾಕಿಸ್ತಾನದಲ್ಲಿ ಗುಂಡಿನ ದಾಳಿ ನಡೆದ ಬಳಿಕ ಅಲ್ಲಿಗೆ ಕ್ರಿಕೆಟ್​ ತಂಡಗಳು ಹೋಗುತ್ತಿರಲಿಲ್ಲ. ಇತ್ತೀಚಿಗೆ ನ್ಯೂಜಿಲ್ಯಾಂಡ್​, ಇಂಗ್ಲೆಂಡ್​ ಮತ್ತು ಆಸ್ಟ್ರೇಲಿಯಾ ತಂಡಗಳು ಅಲ್ಲಿಗೆ ಪ್ರವಾಸ ಮಾಡಿದ್ದವು. ಆದರೆ, ಭಾರತ ಮತ್ತು ಪಾಕಿಸ್ತಾನ ನಡುವೆ ಗಡಿ ತಂಟೆ ಜತೆಗೆ ರಾಜಕೀಯ ಮನಸ್ತಾಪ ಇರುವ ಕಾರಣ ಎರಡೂ ದೇಶಗಳ ನಡುವಿನ ಕ್ರಿಕೆಟ್​ ಸಂಬಂಧವೂ ಮುರಿದು ಬಿದ್ದಿದೆ. ಹೀಗಾಗಿ 2006ರ ಬಳಿಕ ಭಾರ ಕ್ರಿಕೆಟ್​ ತಂಡ ನೆರೆಯ ದೇಶಕ್ಕೆ ಕಾಲಿಟ್ಟಿಲ್ಲ. ಸದ್ಯದ ವೈಷಮ್ಯ ನೋಡಿದರೆ ಎರಡೂ ದೇಶಗಳು ಪರಸ್ಪರ ಪ್ರವಾಸ ಮಾಡುವುದು ಸಾಧ್ಯತೇ ಇಲ್ಲ.

ಮುಂಬರುವ ಏಷ್ಯಾ ಕಪ್​ನ ಆತಿಥ್ಯ ಪಡೆದ ಪಾಕಿಸ್ತಾನ ನಮ್ಮ ದೇಶದಲ್ಲಿಯೇ ಟೂರ್ನಿ ನಡೆಸಬೇಕು ಎಂದು ಪಟ್ಟು ಹಿಡಿದಿದೆ. ಆದರೆ, ಭಾರತ ತಂಡ ಅಲ್ಲಿಗೆ ಹೋಗಲು ಒಪ್ಪುತ್ತಿಲ್ಲ. ಏಷ್ಯ ಕ್ರಿಕೆಟ್​ ಕೌನ್ಸಿಲ್​ ಕೂಡ ಅದೇ ಮಾತನ್ನು ಹೇಳುತ್ತಿದೆ. ಇದೀಗ ಆಗಿರುವ ಬಾಂಬ್​ ಬ್ಲಾಸ್ಟ್​ ಪ್ರಕರಣವೂ ಬಿಸಿಸಿಐ ನಿರಾಕರಣೆಗೆ ಇನ್ನೊಂದು ಸಾಕ್ಷಿ ಸಿಕ್ಕಂತಾಗಿದೆ.

ಇದನ್ನೂ ಓದಿ : Quetta Blast: ಕ್ರಿಕೆಟ್​ ಸ್ಟೇಡಿಯಂ ಬಳಿ ಬಾಂಬ್​ ಸ್ಫೋಟ; ಪಾಕ್ ನಾಯಕ ಬಾಬರ್​ ಅಜಂ ಬಚಾವ್​! ​

Exit mobile version