Site icon Vistara News

Asia Cup 2023 : ಪಾಕ್​, ಶ್ರೀಲಂಕಾ ತಂಡಗಳೆರಡೂ ಬಾರಿಸಿದ್ದು 252 ರನ್​, ಆದ್ರೆ ಗೆದ್ದಿದ್ದು ಲಂಕಾ ! ಇದ್ಯಾವ ಲೆಕ್ಕಾಚಾರ?

Pakistan Cricket

ಕೊಲೊಂಬೊ: ಇಲ್ಲಿನ ಪ್ರೇಮದಾಸ ಕ್ರಿಕೆಟ್​ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಾಕಿಸ್ತಾನ ವಿರುದ್ಧದ ನಿರ್ಣಾಯಕ ಏಷ್ಯಾ ಕಪ್​ (Asia Cup 2023) ಸೂಪರ್ 4 ಪಂದ್ಯದಲ್ಲಿ ಶ್ರೀಲಂಕಾ 252 ರನ್ ಬಾರಿಸಿ ಗೆಲುವು ಸಾಧಿಸಿದೆ. ಪಾಕಿಸ್ತಾನವು ಅದೇ ಮೊತ್ತವನ್ನು ಬಾರಿಸಿತ್ತು. ಹಾಗಾದರೆ ಪಂದ್ಯ ಟೈ ಅಲ್ಲವೇ? ಶ್ರೀಲಂಕಾ ಗೆದ್ದಿದ್ದು ಹೇಗೆ ಅಭಿಮಾನಿಗಳು ಪ್ರಶ್ನಿಸಿದ್ದಾರೆ. ಅದಕ್ಕೆ ಉತ್ತರ ದೊರಕಿದ್ದು ಡಕ್ವರ್ತ್​ ಲೂಯಿಸ್​ ನಿಯಮದ ಪ್ರಕಾರ ಲಂಕಾ ತಂಡ ಗೆದ್ದಿದೆ. ಈ ಲೆಕ್ಕಾಚಾರ ಸುಲಭವಾಗಿ ಅರ್ಥವಾಗುವುದಿಲ್ಲ . ಆದರೆ, ಮಳೆ ಬರುವ ಮೊದಲಿನ ವಿಕೆಟ್​​ ಲೆಕ್ಕಾಚಾರದ ಪ್ರಕಾರ ಲಂಕಾ ಗೆದ್ದಿದೆ.

ಗುರುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ನಾಯಕ ಬಾಬರ್ ಅಜಮ್​ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದರು. ಮಳೆ ಬಂದ ಕಾರಣ ಓವರ್​ಗಳ ಸಂಖ್ಯೆಯನ್ನು 45ಕ್ಕೆ ಇಳಿಸಲಾಯಿತು. ಆದಾಗ್ಯೂ, ಪಾಕಿಸ್ತಾನದ ಇನ್ನಿಂಗ್ಸ್ ವೇಳೆ ಮಳೆಯಿಂದ ಮತ್ತೊಂದು ವಿರಾಮ ಪಡೆಯಬೇಕಾಯಿತು ಈ ವೇಳೆ ಓವರ್​ಗಳ ಸಂಖ್ಯೆಯನ್ನು ಮತ್ತಷ್ಟು 42 ಕ್ಕೆ ಇಳಿಸಲಾಗಿತ್ತು. ನಿಗದಿತ 42 ಓವರ್​ಗಳಲ್ಲಿ ಪಾಕ್​ ತಂಡ 252 ರನ್ ಗಳಿಸಿದರೂ, ಡಿಎಲ್ಎಸ್ ವಿಧಾನವು ಗೆಲುವಿನ ಗುರಿಯನ್ನು 252ಕ್ಕೆ ಸರಿಹೊಂದಿಸಿತು. ಹೀಗಾಗಿ ಲಂಕಾ ತಂಡ ಗೆಲುವು ಸಾಧಿಸಿದೆ.

45 ನಿಮಿಷಗಳ ಅಡಚಣೆ

ಪಂದ್ಯವು 50 ಓವರ್​ಗಳ ಪಂದ್ಯವಾಗಿದ್ದರೆ ಅಥವಾ 45 ಓವರ್​ಗಳ ಪಂದ್ಯವಾಗಿದ್ದರೆ ಗುರಿಗಿಂತ ಒಂದು ರನ್​ ಹೆಚ್ಚು ಮಾಡಬೇಕಾಗಿತ್ತು. ಒಂದೇ ರೀತಿಯ ಮೊತ್ತ ಬಾರಿಸಿದ್ದರೆ ಟೈನಲ್ಲಿ ಕೊನೆಗೊಳ್ಳುತ್ತಿತ್ತು. ಆಗ ಡಿಎಲ್ಎಸ್ ನಿಯಮ ಜಾರಿಗೆ ಬರುತ್ತಿರಲಿಲ್ಲ. ಯಾಕೆಂದರೆ ಪಂದ್ಯ ಆರಂಭಕ್ಕೆ ಮೊದಲೇ ಓವರ್​ಗಳನ್ನು ಕಡಿತ ಮಾಡಲಾಗಿತ್ತು. ಆದರೆ ಎರಡನೇ ಮಳೆ ಬಂದಾಗ ಪರಿಸ್ಥಿತಿ ಬದಲಾಯಿತು. ಪಾಕಿಸ್ತಾನ 27.4 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 130 ರನ್ ಗಳಿಸಿತ್ತು. ಮಳೆ ಬಂದು ಸುಮಾರು 45 ನಿಮಿಷಗಳ ನಂತರ ಆಟಕ್ಕೆ ತಡೆ ಉಂಟಾಯಿತು. ಈ ವೇಳೆ ಇನ್ನೂ ಮೂರು ಓವರ್​ಗಳನ್ನು ಕಡಿತಗೊಳಿಸಲಾಯಿತು. ಇದು 42 ಓವರ್​ಗಳ ಪಂದ್ಯವಾಯಿತು. ಆದರೆ ಅದಕ್ಕಿಂತ ಮುಖ್ಯವಾಗಿ, ಡಿಎಲ್ಎಸ್ ವಿಧಾನವು ಜಾರಿಗೆ ಬಂದಿತು.

ಪಾಕಿಸ್ತಾನದ ಕೈಯಲ್ಲಿ ಇನ್ನೂ ಮೂರು ವಿಕೆಟ್​ಗಳು ಇದ್ದವು. ಅವರ ಮೊತ್ತಕ್ಕೆ ಅದೂ ಪೂರಕವಾಗಿತ್ತಲ್ಲವೇ ಎಂಬ ಪ್ರಶ್ನೆ ಇದೆ. ಆದರೆ ಡಕ್ವರ್ತ್​ ನಿಯಮದಲ್ಲಿ ಒಂದು ತಂಡವು ತಮ್ಮ ಇನ್ನಿಂಗ್ಸ್ ನ ಕೊನೆಯಲ್ಲಿ ಎಷ್ಟು ವಿಕೆಟ್ ಗಳನ್ನು ಕಳೆದುಕೊಂಡಿದೆ ಎಂಬುದು ಮುಖ್ಯವಲ್ಲ. ಮಳೆ ನಿಲ್ಲುವ ಮೊದಲು ಅವರು ಕಳೆದುಕೊಳ್ಳುವ ವಿಕೆಟ್ ಗಳ ಸಂಖ್ಯೆಯು ಎದುರಾಳಿಯ ಅಂತಿಮ ಗುರಿಯನ್ನು ನಿರ್ಧರಿಸುತ್ತದೆ. ಇದರರ್ಥ, ಡಿಎಲ್ಎಸ್ ವಿಧಾನದ ಪ್ರಕಾರ, ಮಳೆ ವಿರಾಮದ ಮೊದಲು ಐದು ವಿಕಟ್​ಗಳನ್ನು ಕಳೆದುಕೊಂಡಿತ್ತು.

ಇದನ್ನೂ ಓದಿ: ind vs pak : ಪಾಕ್​ ತಂಡದ ಏಷ್ಯಾ ಕಪ್​ ಸೋಲಿನ ಗಾಯಕ್ಕೆ ಉಪ್ಪು ಸವರಿದ ಭಾರತ ತಂಡ

ಮಳೆ ಆರಂಭಕ್ಕೆ ಮೊದಲಿನ ಕೊನೆಯ ಎಸೆತದಲ್ಲಿ ಪಾಕ್​ ತಂಡದ ಮೊಹಮ್ಮದ್ ನವಾಜ್ ಔಟಾಗದಿದ್ದರೆ, ಶ್ರೀಲಂಕಾಕ್ಕೆ 252 ರ ಬದಲು 255 ರನ್​ಗಳ ಗುರಿ ಎದುರಾಗುತ್ತಿತ್ತು. ಅಂತೆಯೇ, ಪಾಕಿಸ್ತಾನವು ನಾಲ್ಕಕ್ಕಿಂತ ಕಡಿಮೆ ವಿಕೆಟ್​ಗಳನ್ನು ಕಳೆದುಕೊಂಡಿದ್ದರೆ, ಅವರ ಅಂತಿಮ ಮೊತ್ತಕ್ಕೆ ಹೆಚ್ಚಿನ ರನ್​ಗಳು ಸೇರುತ್ತಿದ್ದವು. ಇನ್ನೂ ಹೆಚ್ಚು ವಿಕೆಟ್​ಗಳ ಹೆಚ್ಚು ಕಳೆದುಕೊಂಡಿದ್ದರೆ ಅವರ ಒಟ್ಟು ಮೊತ್ತದಿಂದ ಹೆಚ್ಚಿನ ರನ್​ಗಳು ಕಡಿತವಾಗುತ್ತಿದ್ದವು. ಡಿಎಲ್ಎಸ್ ವಿಧಾನವು ಈ ರೀತಿ ಕಾರ್ಯನಿರ್ವಹಿಸುತ್ತದೆ. ಡಿಎಲ್ಎಸ್ ಲೆಕ್ಕಾಚಾರದಲ್ಲಿ ವಿಕೆಟ್​ಗಳು ಪ್ರಮುಖ ಅಂಶವಾಗಿರುತ್ತದೆ.

Exit mobile version