Site icon Vistara News

Pant Car Accident | ಪಂತ್ ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ ಊರ್ವಶಿ ರೌಟೇಲಾ, ನೆಟ್ಟಿಗರ ಆಕ್ರೋಶ

Urvashi Rautela

ನವದೆಹಲಿ: ಭೀಕರ ಕಾರು ಅಪಘಾತದಲ್ಲಿ(Pant Car Accident) ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ರಿಷಭ್​ ಪಂತ್ ಅವರು​ ಶೀಘ್ರ ಗುಣಮುಖರಾಗಲಿ ಎಂದು ಬಾಲಿವುಡ್ ನಟಿ ಊರ್ವಶಿ ರೌಟೇಲಾ ಪ್ರಾರ್ಥಿಸಿದ್ದಾರೆ.

ರಿಷಭ್​ ಪಂತ್ ಅವರ ಅಪಘಾತದ ಸುದ್ದಿ ಹೊರಬಂದ ನಂತರ, ಅಭಿಮಾನಿಗಳು ಮತ್ತು ಕ್ರಿಕೆಟ್ ಪ್ರೇಮಿಗಳು ಪಂತ್ ಅವರ ಶೀಘ್ರ ಚೇತರಿಕೆಗಾಗಿ ಸೋಷಿಯಲ್ ಮೀಡಿಯಾದಲ್ಲಿ ಪ್ರಾರ್ಥಿಸುತ್ತಿದ್ದಾರೆ. ಇದೇ ವೇಳೆ ನಟಿ ಊರ್ವಶಿ ಕೂಡ ಪಂತ್​ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ.

ಪಂತ್​ ಮತ್ತು ರೌಟೇಲಾ ಈ ಹಿಂದೆ ಹಲವು ಬಾರಿ ಸಾಮಾಜಿಕ ಜಾಲತಾಣದಲ್ಲಿ ಜಗಳ ಮಾಡಿದ್ದರೂ ಇದೀಗ ಪಂತ್​ ಅಪಘಾತದ ಸುದ್ದಿ ಕೇಳಿದ ರೌಟೇಲಾ ಎಲ್ಲ ದ್ವೇಷವನ್ನು ಮರೆತು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ್ದಾರೆ.

ಆದರೆ ರೌಟೇಲಾ ಅವರು ಪೋಸ್ಟ್​ ಮಾಡಿದ ನಾಗಿಣಿ ಫೋಟೊ ಕಂಡ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ನಾಗಿಣಿ ಶೈಲಿಯ ಫೋಟೊವನ್ನು ಹಂಚಿಕೊಂಡ ರೌಟೇಲಾ ಪ್ರಾರ್ಥಿಸುತ್ತಿದ್ದೇನೆ. ಎಂದು ಪೋಸ್ಟ್​ ಮಾಡಿದ್ದಾರೆ. ಇದನ್ನೂ ಕಂಡ ನೆಟ್ಟಿಗರು. ಇಂತಹ ಪರಿಸ್ಥಿಯಲ್ಲಿ ಈ ರೀತಿಯ ಫೋಟೊ ಹಂಚಿಕೊಳ್ಳುತ್ತಿರುವ ನಿಮ್ಮ ನಡೆಗೆ ತೀವ್ರ ಖಂಡನೆ ಇದೆ. ನೀವು ಪಂತ್​ ವಿರುದ್ಧ ಸೇಡು ತೀರಿಸಿಕೊಳ್ಳಲು ಈ ರೀತಿ ಮಾಡಿದ್ದೀರಿ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ | Rishabh Pant | ರಿಷಭ್​ ಪಂತ್​ ಆರೋಗ್ಯ ಸ್ಥಿತಿ ಕುರಿತು ಮ್ಯಾಕ್ಸ್​​ ಆಸ್ಪತ್ರೆಯ ವೈದ್ಯರು ಕೊಟ್ಟ ಹೇಳಿಕೆಗಳೇನು?

Exit mobile version